ಎಸಿಸಿಯಲ್ಲಿದೆ ತ್ಯಾಜ್ಯ ಮರುಬಳಕೆ ಘಟಕ


Team Udayavani, Jul 5, 2017, 8:36 AM IST

GULB-1.jpg

ವಾಡಿ: ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಎಸಿಸಿ (ಅಸೋಸಿಯೇಟೆಡ್‌ ಸಿಮೆಂಟ್‌ ಕಂಪನಿ) ವಿವಿಧ ಕಾರ್ಖಾನೆಗಳ ತ್ಯಾಜ್ಯ ಮರುಬಳಕೆ ಘಟಕ ಸ್ಥಾಪಿಸಿ ಪರಿಸರ ಸ್ನೇಹಿಯಾಗಿ ರಾಜ್ಯದ ಗಮನ ಸೆಳೆದಿದೆ.

ಸಿಮೆಂಟ್‌ ಉತ್ಪಾದನೆ ಮೂಲಕ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿರುವ ಎಸಿಸಿ ಇತರ ಕಾರ್ಖಾನೆಗಳ ಘನತ್ಯಾಜ್ಯ
ಮರುಬಳಕೆ ಮಾಡಿಕೊಂಡು ಇಂಧನವನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದೆ. 2014ರಲ್ಲಿ ಪ್ರೀ ಕೋ ಪ್ರೋಸೆಸಿಂಗ್‌
ಪ್ಲಾಟ್‌ (ಪಿಸಿಪಿಎಫ್‌) ಘಟಕ ಸ್ಥಾಪನೆಗೆ ಒಟ್ಟು 65 ಕೋಟಿ ರೂ. ಖರ್ಚು ಮಾಡಿದೆ. ದೇಶದ ಏಳು ಕಾರ್ಖಾನೆಗಳಲ್ಲಿ ಇಂತಹ ಘನ ತ್ಯಾಜ್ಯ ಮರುಬಳಕೆ ಘಟಕಗಳಿದ್ದು, ರಾಜ್ಯದಲ್ಲಿ ವಾಡಿ ಎಸಿಸಿ ಮಾತ್ರ ಈ ಘಟಕ ಹೊಂದಿದೆ. ಸಿಮೆಂಟ್‌ ಕಾರ್ಖಾನೆ ಆವರಣದ ಹಸಿರು ಪರಿಸರದ ಮಧ್ಯ ತಲೆ ಎತ್ತಿರುವ ಈ ಘಟಕ ಬೆಂಗಳೂರು, ಮೈಸೂರು, ರಾಯಚೂರು,
ಧಾರವಾಡ ಸೇರಿದಂತೆ ರಾಜ್ಯದ ವಿವಿಧ ಒಟ್ಟು 25 ಕಾರ್ಖಾನೆಗಳಿಂದ ಬರುವ ಘನ ತ್ಯಾಜ್ಯವನ್ನು ಬಳಸಿಕೊಳ್ಳುತ್ತಿದೆ. ಅವಧಿ ಮುಗಿದ ಕಾರ್ಖಾನೆ ಉತ್ಪನ್ನಗಳಾದ ಟೂಥ್‌ ಪೇಸ್ಟ್‌, ಸಾಬೂನು, ಚಾಕೋಲೆಟ್‌, ಕಾಫಿ ಪುಡಿ, ಹಾರ್ಲಿಕ್ಸ್‌, ಚಹಾಪುಡಿ, ಬಿಸ್ಕತ್‌, ಮಕ್ಕಳ ಆಟಿಕೆ ಸಾಮಾನು ಸೇರಿದಂತೆ ನೂರಾರು ಬಗೆಯ ಉತ್ಪನ್ನಗಳ ಜತೆಗೆ ಕೃಷಿ ಜೈವಿಕ ತ್ಯಾಜ್ಯ ಮತ್ತು ನಗರಗಳ ಘನ ತ್ಯಾಜ್ಯವನ್ನು ಸುಟ್ಟು ಕರಕಲು ಮಾಡಲಾಗುತ್ತಿದೆ. ಸುಟ್ಟು ಉಳಿದ ಬೂದಿಯನ್ನು ಸಿಮೆಂಟ್‌ನಲ್ಲಿ ಮಿಶ್ರಣ ಮಾಡಿ ತ್ಯಾಜ್ಯದ ಮರುಬಳಕೆ ಮೂಲಕ ಕಲ್ಲಿದ್ದಲು ಬಳಕೆ ಪ್ರಮಾಣ ಕಡಿಮೆಗೊಳಿಸಿ ಪರಿಸರ
ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿರುವುದು ಗಮನಾರ್ಹವಾಗಿದೆ.

ಕಳೆದ ವರ್ಷ ಸಾವಿರಾರು ಟನ್‌ ಮ್ಯಾಗಿ ಸುಟ್ಟು ಇಂಧನವನ್ನಾಗಿ ಮರುಬಳಕೆ ಮಾಡಿಕೊಂಡಿದ್ದ ಎಸಿಸಿ ಘಟಕ, ಸದ್ಯ
ದಿನಕ್ಕೆ 250 ಟನ್‌ ತ್ಯಾಜ್ಯ ಸುಟ್ಟು ಭಸ್ಮ ಮಾಡುತ್ತಿದೆ. ದಿನಕ್ಕೆ 1800 ಟನ್‌ ಕಲ್ಲಿದ್ದಲು ಬಳಸಲಾಗುತ್ತಿತ್ತು. ತ್ಯಾಜ್ಯಗಳ ಬಳಕೆಯಿಂದ ಇದರ ಪ್ರಮಾಣ 1600ಕ್ಕೆ ಇಳಿದಿದೆ. ಅಂದರೆ ದಿನಕ್ಕೆ 180 ಟನ್‌ ಕಲ್ಲಿದ್ದಲು ಬಳಕೆ ಕಡಿತವಾಗಿದೆ. ಇದರಿಂದ ಪರಿಸರದ ಮೇಲಿನ ದುಷ್ಪರಿಣಾಮ ಕಡಿಮೆಯಾಗಿದೆ ಎನ್ನುತ್ತವೆ ಎಸಿಸಿ ಮೂಲಗಳು. 

ರಾಜ್ಯದಲ್ಲೇ ಮೊದಲು
ಕಾರ್ಖಾನೆಗಳ ತ್ಯಾಜ್ಯ ಮರುಬಳಕೆಗೆ ಸಂಬಂಧಿಸಿದಂತೆ ಅತ್ಯಾಧುನಿಕ ತಂತ್ರಜ್ಞಾನದ ಘಟಕ ಸ್ಥಾಪಿಸಿರುವ
ದೇಶದ ಏಳು ಕಾರ್ಖಾನೆಗಳಲ್ಲಿ ಎಸಿಸಿಯೂ ಒಂದಾಗಿದ್ದು, ರಾಜ್ಯದ ಮೊದಲ ಕಂಪನಿಯಾಗಿದೆ. ಪರಿಸರ
ಇಲಾಖೆಯಿಂದ ಅ ಧಿಕೃತ ಪರವಾನಗಿ ಪಡೆದು 65 ಕೋಟಿ ರೂ. ಖರ್ಚು ಮಾಡಿ ಘಟಕ ಸ್ಥಾಪಿಸಲಾಗಿದೆ. ಅವಧಿ
ಮುಗಿದ ಉತ್ಪನ್ನಗಳು ಉಚಿತವಾಗಿ ನಿತ್ಯ ಕಾರ್ಖಾನೆಗೆ ಬರುತ್ತಿವೆ. ಕೆಲವೊಂದು ತ್ಯಾಜ್ಯಗಳನ್ನು ನಾವೇ ಖರೀದಿಸುತ್ತೇವೆ. ವಿವಿಧ ನಗರಗಳಲ್ಲಿ ಸಂಗ್ರಹವಾಗುವ ಕಸ ಮತ್ತು ಘನತ್ಯಾಜ್ಯವನ್ನು ನಗರಸಭೆ, ಪುರಸಭೆಗಳು ಎಸಿಸಿಗೆ ಕೊಟ್ಟರೆ ಸ್ವತ್ಛಭಾರತ ಕನಸಿಗೆ ಮತ್ತಷ್ಟು ಅರ್ಥ ಬರುತ್ತದೆ. 
 ಅಶೀಶಕುಮಾರ ಮಿಶ್ರಾ, ಮುಖ್ಯಸ್ಥರು, ಘನತ್ಯಾಜ್ಯ ಮರುಬಳಕೆ ಘಟಕ, ಎಸಿಸಿ

ಮಡಿವಾಳಪ್ಪ ಹೇರೂರ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.