ರೌಡಿಗಳಿಗೆ ಎಸಿಪಿ ಎಚ್ಚರಿಕೆ
Team Udayavani, May 27, 2022, 11:42 AM IST
ಕಲಬುರಗಿ: ರೌಡಿಶೀಟರ್ಗಳು ಮತ್ತು ಈಗ ತಾನೆ ತಲೆ ಎತ್ತಿ ರೌಡಿಗಳು ಎನ್ನಿಸಿಕೊಳ್ಳಲು ಹವಣಿಸುತ್ತಿರುವ ಮರಿ ರೌಡಿಗಳು ಸಮಾಜದಲ್ಲಿ ಅಪರಾಧಿಕ ಚಟುವಟಿಕೆ ನಡೆಸಲು ಮುಂದಾದರೆ, ಬಾಲ ಬಿಚ್ಚಿದರೆ ಹುಷಾರ್, ಬಾಲ ಕಟ್ ಮಾಡಬೇಕಾಗುತ್ತದೆ ಎಂದು ಉತ್ತರ ವಿಭಾಗದ ಎಸಿಪಿ ದೀಪನ್ ಎಂ.ಎನ್ ಎಚ್ಚರಿಕೆ ನೀಡಿದ್ದಾರೆ.
ನಗರದ ಪೊಲೀಸ್ ಕಮಿಷನರ್ ಕಚೇರಿ ಆವರಣದಲ್ಲಿ ಗುರುವಾರ ರೌಡಿಗಳ ಪರೇಡ್ ನಡೆಸಿದ ಅವರು, ಬಹುತೇಕ ರೌಡಿಗಳ ದಿನಚರಿ ಪ್ರಶ್ನಿಸಿದರು. ಅಲ್ಲದೇ, ಅಕ್ರಾಳ, ವಿಕ್ರಾಳ ಕಾಣಿಸುತ್ತಿದ್ದ ಎಲ್ಲರಿಗೂ ನೆಟ್ಟಗೆ ಶೇವ್ ಮಾಡಿಕೊಂಡು ಜನಸಾಮಾನ್ಯರಂತೆ ಇರಿ ಎಂದು ಎಚ್ಚರಿಸಿದರು.
ಉತ್ತರ ನಗರ ಠಾಣೆ ವ್ಯಾಪ್ತಿಯಲ್ಲಿ ಯಾವುದೇ ಅಪರಾಧ ಚಟುವಟಿಕೆಯಲ್ಲಿ ತೊಡಗದಂತೆ ಮತ್ತು ಬಡ್ಡಿ ವ್ಯವಹಾರ, ಲ್ಯಾಂಡ್ ಮಾಫಿಯಾ, ಹಪ್ತಾ ವಸೂಲಿ ಮಾಡೋದನ್ನು ನಿಲ್ಲಿಸಿ. ಇಲ್ಲದಿದ್ದರೆ ನಮ್ಮ ಕೈಗೆ ಸಿಕ್ಕಿ ಬಿದ್ದರೆ ಗಡಿಪಾರು ನಿಶ್ಚಿತ ಎಂದು ಎಚ್ಚರಿಸಿದರು.
ಪರೇಡ್ನಲ್ಲಿ ಠಾಣೆ ವ್ಯಾಪ್ತಿಯ 175 ಜನ ರೌಡಿಶೀಟರ್ಗಳ ಪೈಕಿ 89 ಜನ ಭಾಗವಹಿಸಿದ್ದರು. ಪರೇಡ್ ಗೆ ಗೈರು ಹಾಜರಾದ ರೌಡಿಶೀಟರ್ ಗಳ ಮೇಲೆ ನಿಗಾ ಇರಿಸಲಾಗಿದ್ದು, ಅವರು ಪ್ರತಿ ತಿಂಗಳು ರೌಡಿ ಪರೇಡ್ಗೆ ಹಾಜರಾಗಬೇಕು ಎಂದು ಸೂಚಿಸಿದರು. ಇತರೆ ಅಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
MUST WATCH
ಹೊಸ ಸೇರ್ಪಡೆ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ
Udupi: ಅನುಮತಿಯಿಲ್ಲದೆ ಪೋಸ್ಟರ್ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್
Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ