ಭಕ್ತಿಯ ಸೇವೆಯಿಂದ ಪುಣ್ಯದ ಲಾಭ: ಸೂಗೂರ ಶ್ರೀ
Team Udayavani, Jun 16, 2018, 12:55 PM IST
ಚಿತ್ತಾಪುರ: ಅಧಿಕ ಮಾಸದಲ್ಲಿ ಭಕ್ತಿಯಿಂದ ಪೂಜಿಸಿ ಸೇವೆ ಸಲ್ಲಿಸಿದ ಭಕ್ತರಿಗೆ ಶಾಂತಿ, ನೆಮ್ಮದಿ ಜತೆಗೆ ಪುಣ್ಯದ ಲಾಭವಾಗುತ್ತದೆ ಎಂದು ಸೂಗುರ (ಎಚ್) ಹಿರೇಮಠದ ಶ್ರೀ ಶಿವಾನಂದ ಶಿವಾಚಾರ್ಯರು ನುಡಿದರು.
ಪಟ್ಟಣದ ಸಿದ್ಧೇಶ್ವರ ಪೆದ್ದು ಮಠದಲ್ಲಿ ಅಧಿಕ ಮಾಸ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ದಿಗ್ಗಾಂವ ಶ್ರೀ ಸಿದ್ಧವೀರ ಶಿವಾಚಾರ್ಯರ ಒಂದು ತಿಂಗಳ ಮೌನವ್ರತ ಅನುಷ್ಠಾನ ಮಂಗಲೋತ್ಸವ ಕಾರ್ಯಕ್ರಮದ ಸಮ್ಮುಖ ವಹಿಸಿ ಮಾತನಾಡಿದ ಅವರು, ಮಠಗಳು ಭಕ್ತರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿವೆ ಎಂದರು.
ಲೋಕ ಕಲ್ಯಾಣಕ್ಕಾಗಿ ಹಾಗೂ ಭಕ್ತರ ಉದ್ಧಾರಕ್ಕಾಗಿ ದಿಗ್ಗಾಂವ ಶ್ರೀಗಳು ವಿವಿಧ ಬಗೆಯ ಅನೇಕ ಅನುಷ್ಠಾನಗಳನ್ನು
ಕೈಗೊಳ್ಳುತ್ತಿರುವುದು ಶ್ಲಾಘನೀಯ. ಗುರು-ಶಿಷ್ಯರ ಉತ್ತಮ ಸಂಬಂಧದಿಂದ ವಿಶ್ವಕ್ಕೆ ಬೆಳಕು ಸಿಗುತ್ತದೆ ಎಂದು
ಹೇಳಿದರು.
ಒಂದು ತಿಂಗಳವರೆಗೆ ಮೌನವ್ರತ ಅನುಷ್ಠಾನ ಕೈಗೊಂಡ ದಿಗ್ಗಾಂವ ಪಂಚಗೃಹ ಹಿರೇಮಠದ ಶ್ರೀ ಸಿದ್ದವೀರ
ಶಿವಾಚಾರ್ಯರು, ವಿವಿಧ ಮಠಾಧೀಶರು, ಭಕ್ತರು ಸನ್ಮಾನಿಸಿದರು. ಬೆಳಗಾವಿಯ ಬನ್ನೂರ ಚಿಕ್ಕಮಠದ
ಶ್ರೀ ಸಿದ್ಧಲಿಂಗ ಶಿವಾಚಾರ್ಯರು ಸಾನ್ನಿಧ್ಯ, ಸೇಡಂನ ಶ್ರೀ ಶಿವಶಂಕರ ಶಿವಾಚಾರ್ಯರು ಅಧ್ಯಕ್ಷತೆ, ಬೆನಕನಳ್ಳಿಯ
ಶ್ರೀ ಕರಿಬಸವ ಶಿವಾಚಾರ್ಯರು ನೇತೃತ್ವ , ಶ್ರೀನಿವಾಸ ಸರಡಗಿಯ ಶ್ರೀ ವೀರಭದ್ರ ಶಿವಾಚಾರ್ಯರು, ಬೊಮ್ಮನಳ್ಳಿಯ ಶ್ರೀ ಚಂದ್ರಶೇಖರ ಶಿವಾಚಾರ್ಯರು, ಹಲಕರ್ಟಿಯ ಶ್ರೀ ರಾಜಶೇಖರ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಹಣಮಂತರಾಯ ಕಂಚನಾಳ ಪ್ರವಚನ ಹೇಳಿದರು. ಕಲಾವಿದರಾದ ಕಲ್ಯಾಣಕುಮಾರ ಭಂಟನಳ್ಳಿ, ನಾಗೇಶ ಮಡಿವಾಳ ಸಂಗೀತ ಸೇವೆ ಸಲ್ಲಿಸಿದರು.
ಮುಖಂಡರಾದ ಸತ್ಯನಾರಾಯಣ ಯಾದವ, ಶರಣು ಬೊಮ್ಮನಳ್ಳಿ, ಭಗವಂತ ಕಟಗೆ, ಶರಣು ಪೂಜಾರಿ ಇದ್ದರು.
ದೇವಿಂದ್ರ ಚೌಧರಿ ಸ್ವಾಗತಿಸಿದರು. ಶರಣಬಸಪ್ಪ ಊಡಗಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್
ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ
Kalaburagi; ಮೋದಿ ಗ್ಯಾರಂಟಿಗೆ ನೋ ವಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ
MUST WATCH
ಹೊಸ ಸೇರ್ಪಡೆ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್