ಮಳೆ-ಪ್ರವಾಹ ಬಳಿಕ ತೊಗರಿಗೆ ಮಂಜಿನ ಕಾಟ
ರೈತರಿಗೆ ಬೆಳೆ ಉಳಿಸಿಕೊಳ್ಳುವ ಸವಾಲು ಸೃಷ್ಟಿ,2.5 ಲಕ್ಷ ಹೆಕ್ಟೇರ್ ಪ್ರದೇಶ ತೊಗರಿ ಬೆಳೆ ಹಾನಿ
Team Udayavani, Oct 25, 2020, 6:06 PM IST
ಕಲಬುರಗಿ: ಅತಿವೃಷ್ಟಿ ಮತ್ತು ಪ್ರವಾಹದಿಂದ ಈಗಾಗಲೇ ನೆಲ ಕಚ್ಚಿರುವ ಜಿಲ್ಲೆಯ ಪ್ರಮುಖ ಬೆಳೆ ತೊಗರಿಗೆ ಈಗ ಮಂಜಿನ ಕಾಟ ಶುರುವಾಗಿದೆ.ಇದರಿಂದ ಸಂಷಕ್ಟದಲ್ಲಿರುವ ರೈತರಿಗೆ ಮತ್ತೂಂದು ಆತಂಕ ಎದುರಾಗಿದ್ದು, ಅಳೆದು-ಉಳಿದರಿರುವ ತೊಗರಿ ಬೆಳೆ ಉಳಿಸಿಕೊಳ್ಳುವ ಸವಾಲು ಸೃಷ್ಟಿಯಾಗಿದೆ.
ಈಚೆಗೆ ದಟ್ಟವಾಗಿ ಮಂಜು ಕವಿಯುತ್ತಿದ್ದು, ಹೂವಾಡುತ್ತಿರುವ ತೊಗರಿ ಬೆಳೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಸದ್ಯ ತೊಗರಿ ಮೊಗ್ಗು ಹಾಗೂ ಆರಂಭದ ಹೂವಾಡುವಿಕೆ ಹಂತದಲ್ಲಿದೆ. ಆದರೆ, ಬೆಳಿಗ್ಗೆ ಮಂಜಿನ ವಾತಾವರಣದಿಂದ ಎಲೆ, ದೇಟು ಹಾಗೂ ಹೂವಿನ ಮೇಲೆ ಕಂದು ಚುಕ್ಕೆಗಳುಕಾಣಿಸಿಕೊಳ್ಳುವ ಭೀತಿ ಇದೆ. ಇದರ ಪರಿಣಾಮ ಮೊಗ್ಗು ಹಾಗೂ ಹೂ ಉದುರುವ ಸಾಧ್ಯತೆ ಇದೆ. ರೈತರಿಗೆ ಈಗ ಇಳುವರಿ ಕುಸಿಯುವ ಆತಂಕ ಕಾಡತೊಡಗಿದೆ.
ಜಿಲ್ಲಾದ್ಯಂತ ಮುಂಗಾರು ಹಂಗಾಮಿನಲ್ಲಿ ಒಟ್ಟಾರೆ 7.55 ಲಕ್ಷ ಹೆಕ್ಟೇರ್ಗೂ ಅಧಿಕ ಪ್ರದೇಶ ಬಿತ್ತನೆಯಾಗಿದೆ. ಇದರಲ್ಲಿ 5.80 ಲಕ್ಷ ಹೆಕ್ಟೇರ್ತೊಗರಿ ಬಿತ್ತನೆ ಮಾಡಲಾಗಿದ್ದು, ತೊಗರಿ ಗಿಡಗಳು 90ರಿಂದ 100 ದಿನಗಳು ಪೂರೈಸಿವೆ. ಆದರೆ,ಆಗಸ್ಟ್ನಲ್ಲೇ ಅತಿಯಾದ ಮಳೆಯಿಂದ 44,446 ಹೆಕ್ಟೇರ್ ಪ್ರದೇಶದ ತೊಗರಿ ಹಾನಿಯಾಗಿತ್ತು. ನಂತರ ಸೆಪ್ಟಂಬರ್ನಲ್ಲೂ ಸುರಿದ ಮಳೆ ಹಾಗೂಈಗ ಅಕ್ಟೋಬರ್ನಲ್ಲಿ ಭೀಮಾ ಪ್ರವಾಹದಿಂದ ಶೇ.40 -50ರಷ್ಟು ತೊಗರಿ ಬೆಳೆ ನಾಶವಾಗಿದೆ.
ಅಂದರೆ, ಅಂದಾಜು 2.5 ಲಕ್ಷ ಹೆಕ್ಟೇರ್ ಪ್ರದೇಶ ತೊಗರಿ ನಷ್ಟವಾಗಿದೆ ಎನ್ನಲಾಗುತ್ತಿದೆ. ಸದ್ಯ ಸುಮಾರು 3.2 ಲಕ್ಷ ಹೆಕ್ಟೇರ್ನಲ್ಲಿಮಾತ್ರ ತೊಗರಿ ಉಳಿದಿರುವ ಸಾಧ್ಯತೆ ಇದೆ.ಮಳೆಯಿಂದಾದ ಬೆಳೆ ನಾಶದಿಂದಲೇ ತೊಗರಿ ಬೆಳೆಗಾರರು ತತ್ತರಿಸಿ ಹೋಗಿದ್ದಾರೆ. ಈ ಸಂಷಕ್ಟದಿಂದ ಹೊರ ಬರುವ ಮುನ್ನವೇ ಹವಾಮಾನ ವೈಪರೀತ್ಯ ಪೆಟ್ಟು ಕೊಡುತ್ತಿದೆ. ರಾತ್ರಿ 10ರಿಂದಲೇ ಮಂಜು ಮುಸುಕಿದ್ದಂತೆ ಕಾಣುತ್ತಿದ್ದು, ನಸುಕಿನಲ್ಲಿ ಅಧಿಕವಾಗುವ ಮಂಜಿನ ವಾತಾವರಣ ಬೆಳಿಗ್ಗೆ 8ಗಂಟೆಯವರೆಗೆ ಮುಂದುವರಿಯುತ್ತಿದೆ. ಚಿಂಚೋಳಿ, ಸೇಡಂ ಮತ್ತಿತರ ಕಡೆಗಳಲ್ಲಿ ಬೆಳಿಗ್ಗೆ 9ಗಂಟೆಯವರೆಗೂ ಮಂಜು ಇರುತ್ತದೆ.
ಮಂಜಿನಿಂದ ತೊಗರಿ ಮೊಗ್ಗಿನ ಕೊನೆಯ ಭಾಗ ಸುಟ್ಟಂತೆ ಆಗಲಿದೆ. ಹೂವು ಮತ್ತು ಚೆಟ್ಟಿ ಉದುರಿಬೆಳೆ ಹಾನಿ ಆಗುವ ಸಾಧ್ಯತೆ ಇದೆ. ಇದೇ ರೀತಿಮುಂದುವರೆದಲ್ಲೇ ಉಳಿದಿರುವ ಬೆಳೆಯಲ್ಲೇಶೇ.50ರಷ್ಟು ಬೆಳೆ ನಾಶವಾಗುವ ಆತಂಕ ಇದೆ. ಆರಂಭಿಕ ಮಳೆಯಿಂದ ಬಂಪರ್ ಇಳುವರಿಯನಿರೀಕ್ಷೆಯ ಕನಸು ಕಾಣುತ್ತಿದ್ದ ರೈತರ ಶೇ.70ರಷ್ಟು ಬೆಳೆ ಪ್ರಕೃತಿ ವಿಕೋಪಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿದೆ.
ತೊಗರಿ ಹೂವಾಡುವಿಕೆ ಹಂತದಲಿದ್ದಾಗ ಕಡಿಮೆ ಉಷ್ಣಾಂಶ ಹಾಗೂ ಮೋಡಕವಿದ ವಾತಾವರಣ, ತುಂತುರು ಮಳೆ, ಮಂಜಿನಿಂದ ರೋಗದ ಬಾಧೆ ಹೆಚ್ಚಾಗಿ ಕಂಡು ಬರುತ್ತದೆ. ಕಂದು ಚುಕ್ಕೆಗಳು ಕಂಡು ಬರುತ್ತವೆ. ಇಂತಹ ಸಂದರ್ಭದಲ್ಲಿ ಔಷಧಿ ಸಿಂಪಡಿಸಬೇಕು. ತೊಗರಿ ಹೂ ಉದಿರುವಿಕೆ ನಿಯಂತ್ರಿಸಲು “ಪಲ್ಸ್ ಮ್ಯಾಜಿಕ್’ ಔಷಧಿಸಿಂಪಡಿಸಬೇಕೆಂದು ಕಲಬುರಗಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ| ರಾಜು ಜಿ.ತೆಗ್ಗೆಳ್ಳಿ ಸಲಹೆ ನೀಡುತ್ತಾರೆ.
ಕೆಲವು ದಿನಗಳಿಂದ ಮಂಜು ಆವರಿಸುತ್ತಿದ್ದು, ತೊಗರಿ ಹೂವು ಉದುರುವ ಮತ್ತು ಚುಕ್ಕೆ ರೋಗ ಬರುವ ಸಾಧ್ಯತೆ ಇದೆ. ಹತ್ತಿ ಬೆಳೆಗೂಇದೇ ರೀತಿ ಸಮಸ್ಯೆಯಾಗಲಿದೆ. ಹೀಗಾಗಿ ಜಮೀನಿನಲ್ಲಿ ನೀರು ನಿಲ್ಲದ ಹಾಗೆ ಬಸಿಗಾಲುವೆ ಮಾಡಿ, ನೀರು ಹೊರಹಾಕಬೇಕು. ಮುಂಜಾಗ್ರತಾ ಕ್ರಮವಾಗಿ ನೀರಿನಲ್ಲಿ ಕರುಗುವ 19:19:19 ಗೊಬ್ಬರ (ಪ್ರತಿ ಲೀಟರ್ ನೀರಿಗೆ 3 ಗ್ರಾಂ) ಹಾಗೂ ಕಾರ್ಬನ್ಡಿಜಮ್ (ಪ್ರತಿ ಲೀಟರ್ ನೀರಿಗೆ 2 ಗ್ರಾಂ) ಬೆರೆಸಿ ಬೆಳೆಗಳಿಗೆ ಸಿಂಪರಣೆ ಮಾಡಬೇಕು. ಚಂದ್ರಕಾಂತ ಜೀವಣಗಿ, ಸಹಾಯಕ ಕೃಷಿ ನಿರ್ದೇಶಕ, ಕಲಬುರಗಿ
ತೊಗರಿ ಬೆಳೆಗೆ ಮಂಜಿನ ವಾತಾವರಣ ಹಾನಿ ಹೆಚ್ಚಿದೆ.ಆರಂಭಿಕ ಹೂವುಗಳೇ ಫಲವಾಗಿ ಅಧಿಕಫಸಲು ಬರುತ್ತದೆ. ಮತ್ತೂಮ್ಮೆ ಹೂವುಬಿಟ್ಟರೂ ಬೇಗ ಉದುರುತ್ತದೆ. ಹೀಗಾಗಿ ತೊಗರಿಯ ಹೂವು ಮತ್ತು ಮಗ್ಗು ಕಪ್ಪಾಗಿ ಸುಡದಂತೆ ಹಾಗೂ ಉದರದಂತೆ ನೋಡಿಕೊಳ್ಳಬೇಕು. –ಡಾ| ರಾಜು ಜಿ.ತೆಗ್ಗೆಳ್ಳಿ, -ಮುಖ್ಯಸ್ಥ, ಕೃಷಿ ವಿಜ್ಞಾನ ಕೇಂದ್ರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ