ಅಮ್ಮ ಪ್ರಶಸ್ತಿಗೆ ಪ್ರಕಾಶ ರೈ,ವಿಸಾಜಿ,ರೇಣುಕಾ, ಪಾಟೀಲ,ದೇಸಾಯಿ ಆಯ್ಕೆ
Team Udayavani, Nov 11, 2018, 6:25 AM IST
ಕಲಬುರಗಿ: ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ನೀಡಲಾಗುವ ರಾಜ್ಯಮಟ್ಟದ “ಅಮ್ಮ ಪ್ರಶಸ್ತಿ”ಗೆ ಅಂಕಣಕಾರ ಮತ್ತು ನಟ ಪ್ರಕಾಶ ರೈ, ಲೇಖಕ ಡಾ| ವಿಕ್ರಮ ವಿಸಾಜಿ, ಕವಯತ್ರಿ ರೇಣುಕಾ ರಮಾನಂದ, ಕಾದಂಬರಿಕಾರ ಯ.ರು.ಪಾಟೀಲ, ಕತೆಗಾರ ಶಶಿಕಾಂತ ದೇಸಾಯಿ ಅವರ ಕೃತಿಗಳು ಆಯ್ಕೆಯಾಗಿವೆ ಎಂದು ಅಮ್ಮ ಪ್ರಶಸ್ತಿಯ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.
ಪ್ರಕಾಶ ರೈ ಅವರ “ಇರುವುದೆಲ್ಲವ ಬಿಟ್ಟು “(ಲೇಖನಗಳ ಸಂಕಲನ), ಬೀದರಿನ ಡಾ| ವಿಕ್ರಮ ವಿಸಾಜಿ ಅವರ “ರಸಗಂಗಾಧರ'(ನಾಟಕ), ಉತ್ತರ ಕನ್ನಡದ ರೇಣುಕಾ ರಮಾನಂದ ಅವರ “ಮೀನುಪೇಟೆಯ ತಿರುವು’ (ಕಾವ್ಯ), ಬೆಳಗಾವಿಯ ಯ.ರು.ಪಾಟೀಲ ಅವರ “ಬೆಳ್ಳಿಚುಕ್ಕಿಯ ಬಂಗಾರದ ಕನಸು’ (ಕಾದಂಬರಿ) ಮತ್ತು ಕಲಬುರಗಿಯ ಶಶಿಕಾಂತ ದೇಸಾಯಿ ಅವರ “ಕಂಬಳಿಯ ಕೆಂಡ’ (ಕಥಾ ಸಂಕಲನ) ಕೃತಿಗಳನ್ನು 18 ನೇ ವರ್ಷದ ಅಮ್ಮ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ತಲಾ 5000 ರೂ. ನಗದು ಪುರಸ್ಕಾರ, ನೆನಪಿನ ಕಾಣಿಕೆ, ಪ್ರಮಾಣ ಪತ್ರ ಮತ್ತು ಸತ್ಕಾರ ಒಳಗೊಂಡಿರುತ್ತದೆ. ನ.26 ರಂದು ಸಂಜೆ 5.30ಕ್ಕೆ ಸೇಡಂನ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಜರುಗುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಅಮ್ಮ ಗೌರವ ಪುರಸ್ಕಾರ:
ಕಳೆದ ಒಂಬತ್ತು ವರ್ಷಗಳಿಂದ ಆರಂಭಗೊಂಡ “ಅಮ್ಮ ಗೌರವ ಪುರಸ್ಕಾರ’ಕ್ಕೆ ಈ ಬಾರಿ ಹಿರಿಯ ಚಲನಚಿತ್ರ ನಟ ಶ್ರೀನಾಥ, ಮಾಜಿ ಉಪಸಭಾಪತಿ ಚಂದ್ರಶೇಖರರೆಡಿª ದೇಶಮುಖ ಮದನಾ, ಮುದ್ರಣ ಕ್ಷೇತ್ರದಲ್ಲಿ ವಿಭಿನ್ನ ಪ್ರಯೋಗಶೀಲರಾದ ಬೆಂಗಳೂರಿನ ಸ್ವಾÂನ್ ಕೃಷ್ಣಮೂರ್ತಿ, ಹಿರಿಯ ಲೇಖಕ ಚಂದ್ರಕಾಂತ ಕರದಳ್ಳಿ ಶಹಾಪುರ ಮತ್ತು ಕೆರೆ ಹೂಳೆತ್ತುವ ಮೂಲಕ ಮಹಿಳಾ ಸ್ವಾವಲಂಬಿತನಕ್ಕೆ ಸಾಕ್ಷಿಯಾಗಿರುವ ಚಂದಮ್ಮ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ