ವೀರಣ್ಣಗೆ ಆಯುಷ್ಯ ಮಂತ್ರಾಲಯ ಪ್ರಶಂಸೆ
Team Udayavani, Jul 27, 2020, 12:28 PM IST
ವಾಡಿ: ಕೋವಿಡ್-19 ಪರಿಣಾಮ ಘೋಷಿಸಲಾದ ಲಾಕ್ಡೌನ್ ದಿನಗಳಲ್ಲಿ “ಯೋಗ ಎಟ್ ಹೋಂ-ಯೋಗ ವಿಥ್ ಫ್ಯಾಮಿಲಿ’ ಎಂಬ ಕೇಂದ್ರ ಸರಕಾರದ ಘೋಷವ್ಯಾಕ್ಯದಡಿ ಸಾಮಾಜಿಕ ಜಾಲತಾಣಗಳ ಲೈವ್ ಕಾರ್ಯಕ್ರಮದ ಮೂಲಕ ಸಾರ್ವಜನಿಕರಿಗೆ ನಿತ್ಯ ಮನೆಯಲ್ಲೇ ಯೋಗ ಹೇಳಿಕೊಟ್ಟ ಸ್ಥಳೀಯ ಪತಾಂಜಲಿ ಯೋಗ ಶಿಕ್ಷಕ ವೀರಣ್ಣ ಯಾರಿ ಅವರ ಸೇವೆಯನ್ನು ಗುರುತಿಸಿರುವ ಕೇಂದ್ರ ಆಯುಷ್ಯ ಮಂತ್ರಾಲಯವು ಅಂತಾರಾಷ್ಟ್ರೀಯ ಯೋಗ ಪ್ರಸಂಶೆ ಪ್ರಶಸ್ತಿ ನೀಡಿ ಅಭಿನಂದಿಸಿದೆ.
ಡಿಜಿಟಲ್ ಮೀಡಿಯಾದ ಮೂಲಕ ಸುಮಾರು ಜನ ಯೋಗಾಸಕ್ತರಿಗೆ ಜೂನ್ ತಿಂಗಳ ಮೊದಲ ದಿನದಿಂದ ಹಿಡಿದು ಜು.21ರ ಅಂತಾರಾಷ್ಟ್ರೀಯ ಯೋಗ ದಿನದ ವರೆಗೂ ಯೋಗಾಭ್ಯಾಸ ಹೇಳಿಕೊಡುವ ಮೂಲಕ ಅದರ ಮಹತ್ವ ಸಾರಿದ್ದಾರೆ. ಪತಾಂಜಲಿ ನಡೆಸಿದ ಡಿಜಿಟಲ್ ವಿಡಿಯೋ ಲೈವ್ ಯೋಗಭ್ಯಾಸದ ನೇರ ಪ್ರಸಾರದಲ್ಲಿ ಪಾಲ್ಗೊಂಡು ನೂರಾರು ಜನ ವಾಯು ವಿಹಾರಿಗಳಿಗೆ ಯೋಗ ಹೇಳಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಪರಿಣಾಮ ಕೇಂದ್ರದ ಆಯುಷ್ಯ ಮಂತ್ರಾಲಯ ಇಲಾಖೆ ನಗರದ ಪತಾಂಜಲಿ ಯೋಗ ಶಿಕ್ಷಕ ವೀರಣ್ಣ ಯಾರಿ ಅವರಿಗೆ ಅಂತಾರಾಷ್ಟ್ರೀಯ ಯೋಗ ಪ್ರಸಂಶೆ ಪ್ರಶಸ್ತಿ ನೀಡಿರುವುದಕ್ಕೆ ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
MUST WATCH
ಹೊಸ ಸೇರ್ಪಡೆ
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!