ಬ್ಯಾಂಕಲ್ಲಿ ಉತ್ತಮ ಸಿಸಿ ಕ್ಯಾಮರಾವಿರಲಿ
Team Udayavani, Jan 26, 2018, 12:14 PM IST
ಚಿತ್ತಾಪುರ: ರಾಜ್ಯ ಹಾಗೂ ಜಿಲ್ಲೆಗಳಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಎಲ್ಲ ಬ್ಯಾಂಕಿನ ಅಧಿಕಾರಿಗಳು ತಮ್ಮ ಬ್ಯಾಂಕಿನ ಆವರಣದಲ್ಲಿ ಗುಣಮಟ್ಟದ ಸಿಸಿ ಕ್ಯಾಮರಾಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಿಪಿಐ ಶಂಕರಗೌಡ ಪಾಟೀಲ ಬ್ಯಾಂಕಿನ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಳ್ಳರು ಯಾವಾಗ
ಬೇಕಾದರೂ ಕಳ್ಳತನ ಮಾಡುತ್ತಾರೆ. ಅವರಿಗೆ ಇದೇ ಸಮಯ ಎನ್ನೋದು ಇರುವುದಿಲ್ಲ. ಬ್ಯಾಂಕ್ನವರು ಕಳಪೆಮಟ್ಟದ ಸಿಸಿ ಕ್ಯಾಮರಾಗಳನ್ನು ಅಳವಡಿಸಿದರೆ ಆರೋಪಿಗಳ ಭಾವಚಿತ್ರ ಗುರುತಿಸಲು ಕಷ್ಟಕರವಾಗುತ್ತದೆ. ಆದ್ದರಿಂದ ಬ್ಯಾಂಕ್ ಒಳಗೆ ಹಾಗೂ ಹೊರಗೆ ಗುಣಮಟ್ಟದ ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ಹೇಳಿದರು.
ಪಟ್ಟಣ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯತ್ತಿದೆ. ಎಸ್ಬಿಎಚ್, ಎಸ್ಬಿಐ, ಕೆನರಾ, ಐಸಿಐಸಿಐ, ಕೆ.ಜಿ.ಬಿ, ಮೈಸೂರು ಬ್ಯಾಂಕ್, ಮಣಿಪುರಂ ಗೋಲ್ಡ್ ಲೋನ್ ಸೇರಿದಂತೆ ಇತರೆ ಬ್ಯಾಂಕಗಳು ಇವೆ. ಕೆಲವು ಬ್ಯಾಂಕ್ಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅವರ ಅನುಕೂಲಕ್ಕಾಗಿ ಅಳವಡಿಸಿಕೊಂಡಿರುತ್ತಾರೆ.
ಆದರೆ ಅದು ಗುಣಮಟ್ಟದಿಂದ ಕೂಡಿದೆಯೋ ಇಲ್ಲವೋ ಎನ್ನುವುದನ್ನು ನೋಡಿರುವುದಿಲ್ಲ. ಅದರಲ್ಲಿ ಮುಖಗಳನ್ನು
ಗುರುತಿಸಲು ಸಾಧ್ಯವೋ, ಇಲ್ಲವೋ ಎನ್ನುವ ಪರಿಜ್ಞಾನವೂ ನಿಮ್ಮಲ್ಲಿ ಇರುವುದಿಲ್ಲ.ಏನಾದರೂ ಅನಾಹುತ ಸಂಭಿಸಿದರೆ ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡುತ್ತಿರಿ. ನಾವು ಸಿಸಿ ಕ್ಯಾಮರಾಗಳಲ್ಲಿ ಮುಖ ಗುರುತಿಸಲು ಸಾಧ್ಯವಾಗದೇ ಆರೋಪಿಗಳು ಕೂಡಲೇ ಹಿಡಿಯಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬ್ಯಾಂಕ್ಗಳಲ್ಲಿ ಬ್ಲಿಗರ್ ಅಲಾರಂಗಳನ್ನು ಅಳವಡಿಸಿಕೊಳ್ಳಬೇಕು. ಅಲಾರಾಂ ಬಗ್ಗೆ ಅಕ್ಕ ಪಕ್ಕದ ಮನೆಗಳು ಅಥವಾ ಹೋಟೆಲ್ಗಳು ಸೇರಿದಂತೆ ಯಾವುದೇ ಅಂಗಡಿಗಳು ಇರಲಿ. ಅವರಿಗೆ ಮಾಹಿತಿ ನೀಡಿ. ಏನಾದರೂ ಅನಾಹುತ ಸಂಭವಿಸಿದರೆ ಅಕ್ಕ ಪಕ್ಕದವರು ಅಲಾರಾಂ ಶಬ್ದ ಕೇಳಿ ತಕ್ಷಣ ಜಾಗೃತರಾಗಿ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡುತ್ತಾರೆ. ಅಲಾರಾಂನಲ್ಲಿ ಪೊಲೀಸ್ ಠಾಣೆಯ ಸಿಪಿಐ ಹಾಗೂ ಪಿಎಸ್ಐ ನಂಬರ್ಗಳನ್ನು ಅಳವಡಿಸಿ. ಇದರಿಂದ ಪೊಲೀಸರಿಗೆ ಮೆಸೇಜ್ ಬಂದ ಕೂಡಲೇ ಆರೋಪಿಗಳನ್ನು ಹಿಡಿಯುವಲ್ಲಿ ಸಹಕಾರಿಯಾಗುತ್ತದೆ ಎಂದು ಹೇಳಿದರು. ಪಿಎಸ್ಐ ಜಗದೇವಪ್ಪ ಪಾಳಾ, ಪ್ರೊಬೆಷನರಿ ಪಿಎಸ್ಐ ತಮ್ಮಯ್ಯ, ಸಿಬ್ಬಂದಿಗಳಾದ ಮಲ್ಲಿಕಾರ್ಜುನ ಉಕ್ಲಿ, ವೀರಭದ್ರ, ಚಂದ್ರಶೇಖರ, ಮುಜಾಹೀದ್ ಸೇರಿದಂತೆ ಬ್ಯಾಂಕಿನ ಸಿಬ್ಬಂದಿ ಇದ್ದರು.
ಅಧಿಕಾರಿಗಳಿಗೆ ನೀಡಿದ ಸೂಚನೆಗಳು ಬ್ಯಾಂಕ್ ರಜೆ ಇರಲಿ ಅಥವಾ ಇಲ್ಲದೇ ಇರಲಿ ಇಬ್ಬರು ವಾಚ್ಮನ್ಗಳನ್ನು ನೇಮಿಸಿಕೊಳ್ಳಿ.
ಹಗಲು-ರಾತ್ರಿ ಎನ್ನುವ ಅಲಾರಾಂಗಳು ಇವೆ. ಅವುಗಳನ್ನು ಅಳವಡಿಸಿಕೊಳ್ಳಿ.
ಪ್ಯಾನಿಕ್ ಬಟನ್ಸ್ ಸೇರಿದಂತೆ ಸೆನ್ಸಾರ್ ಅಳವಡಿಸಿಕೊಳ್ಳಿ.
ಪ್ರತಿಯೊಂದು ಎಟಿಎಂಗಳಲ್ಲಿ ಸಿಸಿ ಕ್ಯಾಮರಾ ಹಾಗೂ ಬೆಳಕು ಇರಲಿ.
ಗ್ರಾಹಕರಿಗೆ ಕರೆ ಮಾಡಿ ನಿಮ್ಮ ಖಾತೆ ಸಂಖ್ಯೆ ನೀಡಿ ಅಥವಾ ನಿಮ್ಮ ಎಟಿಎಂ ಪಾಸ್ ವರ್ಡ್ ನೀಡಿ ಎಂದು ಕೇಳುತ್ತಿದ್ದಾರೆ.
ಅಂತಹವರಿಂದ ದೂರವಿರುವ ಕುರಿತು ಜಾಗೃತಿ ಮೂಡಿಸುವ ಪೋಸ್ಟರ್ಗಳನ್ನು ಬ್ಯಾಂಕ್ಗಳಲ್ಲಿ ಹಾಕಿಸಿ.
ಗ್ರಾಹಕರನ್ನು ಸತಾಯಿಸದೆ ಕೂಡಲೇ ಅವರ ಕೆಲಸಗಳನ್ನು ಮಾಡಿಕೊಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್
ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ
Kalaburagi; ಮೋದಿ ಗ್ಯಾರಂಟಿಗೆ ನೋ ವಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ
MUST WATCH
ಹೊಸ ಸೇರ್ಪಡೆ
Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ
Lok Sabha Election: ಉಡುಪಿ- ಜಯಪ್ರಕಾಶ್ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ
Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ
ಸೂಪರ್ ಸ್ಟಾರ್ ಮೋಹನ್ ಲಾಲ್ ಭೇಟಿಯಾದ ರಿಷಬ್: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!
Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?