ರಾಜಶೇಖರ ಶ್ರೀ ಮೌನಾನುಷ್ಠಾನ ಆರಂಭ
Team Udayavani, Aug 12, 2022, 5:03 PM IST
ವಾಡಿ: ಭಕ್ತರ ಒಳಿತಿಗಾಗಿ ಹಳಕರ್ಟಿಯ ರಾಜಶೇಖರ ಶ್ರೀಗಳು ಒಂಭತ್ತು ದಿನ ಮೌನಾನುಷ್ಟಾನ ಮತ್ತು ಒಂಭತ್ತು ದಿನ ಜೀವ ನಿರ್ವಿಕಲ್ಪ ಸಮಾಧಿ ಅನುಷ್ಠಾನಕ್ಕೆ ಮುಂದಾಗಿದ್ದಾರೆ ಎಂದು ಚಂದನಕೇರಾ ಬೃಂಗಿ ಪ್ರಾಚೇಶ್ವರ ಕಟ್ಟಿಮನಿ ಸಂಸ್ಥಾನದ ಶ್ರೀ ಅಭಿನವ ರಾಚೋಟೇಶ್ವರ ಶಿವಾಚಾರ್ಯ ನುಡಿದರು.
ಗುರುವಾರ ಹಳಕರ್ಟಿ ಗ್ರಾಮದ ಸಿದ್ಧೇಶ್ವರ ಧ್ಯಾನಧಾಮದಲ್ಲಿ ಮೌನಾನುಷ್ಠಾನ ಆರಂಭಿಸಿದ ಶ್ರೀ ರಾಜಶೇಖರ ಸ್ವಾಮೀಜಿ ಅವರ ವಿಶೇಷ ಪೂಜಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಆಹಾರ, ಹಣ್ಣು, ಹಾಲು ಸೇರಿದಂತೆ ಯಾವುದೇ ಪದಾರ್ಥವಿಲ್ಲದೇ ಕೇವಲ ಜಲ ಪಾನ ಸೇವನೆ ಮೂಲಕ 18 ದಿನಗಳ ಕಠಿಣ ತಪಸ್ಸು ಕೈಗೊಂಡು ದೇವಿ ಪಾರಾಯಣ ಅಧ್ಯಯನಕ್ಕೆ ಪೂಜ್ಯರು ಮುಂದಾಗಿರುವುದು ಭಕ್ತರ ಹಿತದೃಷ್ಟಿಯಿಂದ ಎಂದರು.
ಸುಗೂರ ಮಠದ ಡಾ| ಚನ್ನ ರುದ್ರಮುನಿ ಶಿವಾಚಾರ್ಯರು, ಬಾಲಯೋಗಿ ಪೂಜ್ಯ ಅಭಿನವ ಕೇದಾರಲಿಂಗ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ರಾಘವೇಂದ್ರ ಅಲ್ಲಿಪುರ, ರವಿ ನಾಯಕ, ಸಿದ್ಧು ಮುಗುಟಿ, ವಿರೇಶ ಕಪ್ಪರ, ದಿನೇಶ ರಾಠೊಡ, ಬಸವರಾಜ ಕುಂಬಾರ ಬಳವಡಗಿ, ಮಹಾದೇವ ಪಗಡೀಕರ, ಪರಶುರಾಮ ರಾಠೊಡ, ಪ್ರೇಮಕುಮಾರ ರಾಠೊಡ, ವಿಜಯಕುಮಾರ ರಾಠೊಡ ಪಾಲ್ಗೊಂಡಿದ್ದರು. ಆ.28ರ ವರೆಗೆ ಮಠದಲ್ಲಿ ಪ್ರತಿದಿನವೂ ಅನ್ನ ದಾಸೋಹ, ರಾತ್ರಿ ಭಜನೆ ಏರ್ಪಡಿಸಲಾಗಿದೆ ಎಂದು ಭಕ್ತರು ಘೋಷಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್
Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೆವು?: ಖಂಡ್ರೆ
Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ
Minister ಪ್ರಿಯಾಂಕ ಖರ್ಗೆ ಉದ್ಧಟತನ ಅತಿಯಾಗಿದೆ: ಸಂಸದ ಡಾ.ಜಾಧವ್
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ