ಮುಸ್ಲಿಮರಿಂದ ದೇಹದಂಡನೆ


Team Udayavani, Sep 22, 2018, 2:21 PM IST

gul-2.jpg

ಕಲಬುರಗಿ: ಮೊಹರಂ ಹಬ್ಬದ ಅಂಗವಾಗಿ ಶಿಯಾ ಮುಸ್ಲಿಮರು ನಗರದಲ್ಲಿ ಶುಕ್ರವಾರ ದೇಹದಂಡನೆ ಮಾಡಿಕೊಂಡರು. ಚಿಕ್ಕ ಬಾಲಕರಿಂದಹಿಡಿದು ವೃದ್ಧರವರೆಗೆ ಕಬ್ಬಿಣದ ಸರಳು,  ಬ್ಲೇಡ್‌ಗಳಿಂದ ದೇಹ ದಂಡಿಸಿಕೊಳ್ಳುತ್ತ ದೇಹವನ್ನು ರಕ್ತಸಿಕ್ತವಾಗಿಸಿಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡರು.

ಮೊಹರಂ ಹಬ್ಬ ಹಿಂದೂ-ಮುಸ್ಲಿಮರ ಭಾವೈಕ್ಯತೆಯ ಪ್ರತೀಕವಾಗಿದ್ದು, ಈ ಹಬ್ಬ ಚಾರಿತ್ರಿಕ ಹಾಗೂ ಧಾರ್ಮಿಕ ಹಿನ್ನೆಲೆ ಹೊಂದಿದೆ. ಮೊಹಮ್ಮದ್‌ ಪೈಗಂಬರ್‌ ಅವರ ಮೊಮ್ಮಗ ಇಮಾಮ್‌ ಹುಸೇನ್‌ ಧರ್ಮದ ಉಳಿವಿಗಾಗಿ ನಡೆದ ಯುದ್ಧದಲ್ಲಿ ಹುತಾತ್ಮರಾದ ಶೋಕಾಚರಣೆ ನಿಮಿತ್ತ ಶಿಯಾ ಮುಸ್ಲಿಮರು ತಮ್ಮ ದೇಹವನ್ನು ತಾವೇ ದಂಡಿಸಿಕೊಳ್ಳುತ್ತಾರೆ.

ನಗರದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಸಾವಿರಾರು ಜನರ ಮಧ್ಯೆ ಸುಮಾರು ಜನರು ರೈಲ್ವೆ ನಿಲ್ದಾಣದಿಂದ ಸರ್ದಾರ್‌ ವಲ್ಲಭಭಾಯಿ ವೃತ್ತದವರೆಗೆ ದೇಹದಂಡಿಸಿಕೊಳ್ಳುತ್ತಾ ಮೆರವಣಿಗೆ ನಡೆಸಿದರು. ಬಾಲಕರು,
ಯುವಕರು ಸೇರಿದಂತೆ ವೃದ್ಧರು ರಕ್ತ ಸುರಿಯುತ್ತಿದ್ದರೂ ಲೆಕ್ಕಿಸದೆ ಕಬ್ಬಿಣದ ಸಂಕೋಲೆ, ಸರಳಿನಿಂದ ದೇಹ
ದಂಡಿಸಿಕೊಂಡರು.

ನಂತರ ವೃತ್ತದಲ್ಲಿ ಸಮಾವೇಶಗೊಂಡ ಧರ್ಮಗುರುಗಳು ಇಮಾಮ್‌ ಹುಸೇನ್‌ರ ಹೋರಾಟದ ಬಗ್ಗೆ ವಿವರಿಸಿದರು. ನೂರಾರು ಮುಸ್ಲಿಂ ಮಹಿಳೆಯರು ಪಾಲ್ಗೊಂಡಿದ್ದರು. ಈ ವೇಳೆ ವಾಹನ ಸವಾರರು ಸೇರಿದಂತೆ ಅನೇಕ ಜನರು ನೆರೆದಿದ್ದರು. ಮುಂಜಾಗ್ರತೆ ಕ್ರಮವಾಗಿ ಪೊಲೀಸ್‌ ಬಿಗಿ ಭದ್ರತೆ ಏರ್ಪಡಿಸಲಾಗಿತು

ಚಿಂಚೋಳಿ ಬಡಿದರ್ಗಾದಲ್ಲಿ ಮೊಹರಂ ಆಚರಣೆ 
ಚಿಂಚೋಳಿ: ಹಿಂದೂ ಮುಸ್ಲಿಮರ ಭಾವೈಕ್ಯತೆ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಪಟ್ಟಣ ಸೇರಿದಂತೆ
ತಾಲೂಕಿನ ಅನೇಕ ಗ್ರಾಮಗಳಲ್ಲಿ ಆಚರಿಸಲಾಯಿತು. ಪಟ್ಟಣದಲ್ಲಿ ಮೊಹರಂ ಹಬ್ಬದ ನಿಮಿತ್ತವಾಗಿ ಅಲಾಯಿ ಕೂಡಿಸುವ ಸ್ಥಳಗಳನ್ನು ವಿವಿಧ ಬಣ್ಣ ಅಲಂಕಾರಗಳಿಂದ ಸಿಂಗರಿಸಲಾಗಿತ್ತು.

ಗುರುವಾರ ಸಂಜೆ ಪಟ್ಟಣ ಬೀಬೀ ಫಾತಿಮಾ, ಚಂದಾ ಹುಸೇನಿ, ಹಸೇನ ಹುಸೇನಿ ಅಲಾಯಿ ಪೀರ ಬಡಿದರ್ಗಾ, ಚೋಟಿ ದರ್ಗಾ ಅಲ್ಲಿಸಾಬ್‌, ಮದರಸಾಬ್‌ ದರ್ಗಾ ಕೂಡಿಸಿದ ಪೀರ್‌ ಅಲಾಯಿಗಳಿಗೆ ಹಿಂದೂ-ಮುಸ್ಲಿಂ ಮಹಿಳೆಯರು ಹಸಿರು ಬಳೆ, ಉಡಿ ತುಂಬಿ ತಮ್ಮ ಹರಕೆ ಅರ್ಪಿಸಿದರು.

ಶುಕ್ರವಾರ ಮೊಹರಂ ಕೊನೆ ದಿನವಾಗಿರುವುದರಿಂದ ಅಲಾಯಿಗಳನ್ನು ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು. ಪಟ್ಟಣದ 15 ಸ್ಥಳಗಳಲ್ಲಿ ಕೂಡಿಸಿದ ಅಲಾಯಿಗಳು ಬಡಿದರ್ಗಾಕ್ಕೆ ಬಂದು ಹಸೇನ-ಹುಸೇನಿ, ಚಂದಾ ಹುಸೇನಿ ಭೇಟಿ ಮಾಡಿ ತಮ್ಮ ಸ್ಥಳಗಳಿಗೆ ತೆರಳಿದರು.  ಬಡಿದರ್ಗಾದಲ್ಲಿ ಹುಲಿವೇಷ ಕುಣಿತ ಮತ್ತು ಮೊಹರಂ ಪದಗಳನ್ನು ಜನರು ನೋಡಿ ಆನಂದಿಸಿದರು.

364 ವರ್ಷಗಳಿಂದ ಆಚರಿಕೊಂಡು ಬರುತ್ತಿರುವ ಮೊಹರಂ ಹಬ್ಬವನ್ನು ನೋಡಲು ಸುತ್ತಲಿನ ಜನರು ಆಗಮಿಸಿದ್ದರು. ಬಡಿದರ್ಗಾ ಸಜ್ಜಾದೇ ನಶಿನ ಅಕಬರ ಹುಸೇನಿ ಸಾಹೇಬ ನೇತೃತ್ವದಲ್ಲಿ ಮೊಹರಂ ಅಚರಣೆ ಅದ್ಧೂರಿಯಾಗಿ ನಡೆಯಿತು.
 
ಪುರಸಭೆ ಮಾಜಿ ಅಧ್ಯಕ್ಷ ಕೆ.ಎಂ. ಬಾರಿ, ಮಕಬೂಲಖಾನ್‌, ಶಿವಕುಮಾರ ಕೊಳ್ಳೂರ, ಎಸ್‌.ಕೆ. ಮುಕ್ತಾರ, ನಿಯಾಜ್‌ ಅಲಿ, ಶ್ರೀಕಾಂತ ಜಾನಕಿ, ಸುಬ್ಬಣ್ಣ ತೋಡಿ ಇನ್ನಿತರರು ಭಾಗವಹಿಸಿದ್ದರು.

ತಾಲೂಕಿನ ಮರನಾಳ, ಹೂವಿನಬಾವಿ, ಸುಲೇಪೇಟ, ಚಂದನಕೇರಾ, ಕೋಡ್ಲಿ, ರಟಕಲ್‌, ಗಡಿಕೇಶ್ವಾರ, ನಿಡಗುಂದಾ, ಕುಂಚಾವರಂ ಇನ್ನಿತರ ಗ್ರಾಮಗಳಲ್ಲಿ ಮೊಹರಂ ಹಬ್ಬ ಆಚರಿಸಲಾಯಿತು. ಸಿಪಿಐ ಇಸ್ಮಾಯಿಲ್‌ ಶರೀಫ, ಪಿಎಸ್‌ಐ ಎ. ಎಸ್‌. ಪಟೇಲ್‌, ರಾಜಶೇಖರ ರಾಠೊಡ ಸೂಕ್ತ ಬಂದೋಬಸ್ತ್ ಮಾಡಿದ್ದರು.

ಟಾಪ್ ನ್ಯೂಸ್

Pakistan: ಆರ್ಥಿಕ ಬಿಕ್ಕಟ್ಟು- ಪಾಕಿಸ್ತಾನದಲ್ಲಿ ಮತ್ತೆ ಪೆಟ್ರೋಲ್‌, ಡೀಸೆಲ್‌ ಬೆಲೆ ದುಬಾರಿ

Pakistan: ಆರ್ಥಿಕ ಬಿಕ್ಕಟ್ಟು- ಪಾಕಿಸ್ತಾನದಲ್ಲಿ ಮತ್ತೆ ಪೆಟ್ರೋಲ್‌, ಡೀಸೆಲ್‌ ಬೆಲೆ ದುಬಾರಿ

Muddebihala: ಮಧ್ಯರಾತ್ರಿ ಪಂಪೆಸೆಟ್ ಕಳ್ಳತನಕ್ಕೆ ಬಂದಿದ್ದ ವ್ಯಕ್ತಿಯನ್ನು ಹಿಡಿದ ರೈತರು

Pumpset: ಮಧ್ಯರಾತ್ರಿ ಪಂಪ್ ಸೆಟ್ ಕಳ್ಳತನಕ್ಕೆ ಬಂದಿದ್ದ ತಂಡ, ಓರ್ವ ಸೆರೆ, ಇಬ್ಬರು ಪರಾರಿ

Haveri; ಮೋದಿ ಪ್ರಮಾಣ ವಚನ ಸ್ವೀಕರಿಸಿ 3 ತಿಂಗಳಲ್ಲಿ ಕಾಂಗ್ರೆಸ್ ಇಬ್ಬಾಗವಾಗಲಿದೆ: ಬೊಮ್ಮಾಯಿ

Haveri; ಮೋದಿ ಪ್ರಮಾಣ ವಚನ ಸ್ವೀಕರಿಸಿ 3 ತಿಂಗಳಲ್ಲಿ ಕಾಂಗ್ರೆಸ್ ಇಬ್ಬಾಗವಾಗಲಿದೆ: ಬೊಮ್ಮಾಯಿ

ನಳಿನ್ ನಂ.1 ಸಂಸದರಾಗಿದ್ದು ಹೌದಾದರೆ ಟಿಕೆಟ್ ಯಾಕೆ ಸಿಕ್ಕಿಲ್ಲ..? ಅಭಯಚಂದ್ರ ಜೈನ್ ವ್ಯಂಗ್ಯ

ನಳಿನ್ ನಂ.1 ಸಂಸದರಾಗಿದ್ದು ಹೌದಾದರೆ ಟಿಕೆಟ್ ಯಾಕೆ ಸಿಕ್ಕಿಲ್ಲ..? ಅಭಯಚಂದ್ರ ಜೈನ್ ವ್ಯಂಗ್ಯ

ಮಧ್ಯಾಹ್ನದ ಬಿಸಿಯೂಟಕ್ಕೆ ಅಡ್ಡಿಯಾದ ಬಿಸಿಲು.. ಕಲ್ಯಾಣ ಕರ್ನಾಟಕದಲ್ಲಿ 38-40 ಡಿಗ್ರಿ ತಾಪಮಾನ

ಮಧ್ಯಾಹ್ನದ ಬಿಸಿಯೂಟಕ್ಕೆ ಅಡ್ಡಿಯಾದ ಬಿಸಿಲು.. ಕಲ್ಯಾಣ ಕರ್ನಾಟಕದಲ್ಲಿ 38-40 ಡಿಗ್ರಿ ತಾಪಮಾನ

ಬಿಜೆಪಿ ಹಿಂದುತ್ವದ ವಿಷ ಬೀಜ ಬಿತ್ತುವುದೇ ಬಿಜೆಪಿ ಸಾಧನೆ: ಸುನೀಲ್ ಬೋಸ್

Mysore; ಹಿಂದುತ್ವದ ವಿಷ ಬೀಜ ಬಿತ್ತುವುದೇ ಬಿಜೆಪಿ ಸಾಧನೆ: ಸುನೀಲ್ ಬೋಸ್

Desi Swara: ಮಾತೇ ಮುತ್ತು ಮಾತೇ ಮೃತ್ಯು…

Desi Swara: ಮಾತೇ ಮುತ್ತು ಮಾತೇ ಮೃತ್ಯು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್‌

Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್‌

Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೇವು?: ಖಂಡ್ರೆ

Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೆವು?: ಖಂಡ್ರೆ

Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.‌ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ

Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.‌ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Pakistan: ಆರ್ಥಿಕ ಬಿಕ್ಕಟ್ಟು- ಪಾಕಿಸ್ತಾನದಲ್ಲಿ ಮತ್ತೆ ಪೆಟ್ರೋಲ್‌, ಡೀಸೆಲ್‌ ಬೆಲೆ ದುಬಾರಿ

Pakistan: ಆರ್ಥಿಕ ಬಿಕ್ಕಟ್ಟು- ಪಾಕಿಸ್ತಾನದಲ್ಲಿ ಮತ್ತೆ ಪೆಟ್ರೋಲ್‌, ಡೀಸೆಲ್‌ ಬೆಲೆ ದುಬಾರಿ

Muddebihala: ಮಧ್ಯರಾತ್ರಿ ಪಂಪೆಸೆಟ್ ಕಳ್ಳತನಕ್ಕೆ ಬಂದಿದ್ದ ವ್ಯಕ್ತಿಯನ್ನು ಹಿಡಿದ ರೈತರು

Pumpset: ಮಧ್ಯರಾತ್ರಿ ಪಂಪ್ ಸೆಟ್ ಕಳ್ಳತನಕ್ಕೆ ಬಂದಿದ್ದ ತಂಡ, ಓರ್ವ ಸೆರೆ, ಇಬ್ಬರು ಪರಾರಿ

Haveri; ಮೋದಿ ಪ್ರಮಾಣ ವಚನ ಸ್ವೀಕರಿಸಿ 3 ತಿಂಗಳಲ್ಲಿ ಕಾಂಗ್ರೆಸ್ ಇಬ್ಬಾಗವಾಗಲಿದೆ: ಬೊಮ್ಮಾಯಿ

Haveri; ಮೋದಿ ಪ್ರಮಾಣ ವಚನ ಸ್ವೀಕರಿಸಿ 3 ತಿಂಗಳಲ್ಲಿ ಕಾಂಗ್ರೆಸ್ ಇಬ್ಬಾಗವಾಗಲಿದೆ: ಬೊಮ್ಮಾಯಿ

Desi Swara: ಹೋಳಿ ರಂಗಿನಲ್ಲಿ ಪೀಸಾ…

Desi Swara: ಹೋಳಿ ರಂಗಿನಲ್ಲಿ ಪೀಸಾ…

ನಳಿನ್ ನಂ.1 ಸಂಸದರಾಗಿದ್ದು ಹೌದಾದರೆ ಟಿಕೆಟ್ ಯಾಕೆ ಸಿಕ್ಕಿಲ್ಲ..? ಅಭಯಚಂದ್ರ ಜೈನ್ ವ್ಯಂಗ್ಯ

ನಳಿನ್ ನಂ.1 ಸಂಸದರಾಗಿದ್ದು ಹೌದಾದರೆ ಟಿಕೆಟ್ ಯಾಕೆ ಸಿಕ್ಕಿಲ್ಲ..? ಅಭಯಚಂದ್ರ ಜೈನ್ ವ್ಯಂಗ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.