ತೊಗರಿ ಖರೀದಿ ಸ್ಥಗಿತ: ಆತಂಕದಲ್ಲಿ ರೈತ
Team Udayavani, Feb 10, 2018, 11:21 AM IST
ಅಫಜಲಪುರ: ರೈತರು ಬೆಳೆದ ತೊಗರಿ ಖರೀದಿ ಪ್ರಕ್ರಿಯೆ ಹಠಾತ್ ಸ್ಥಗಿತಗೊಳಿಸಿದ್ದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ತಾಲೂಕು ಬಹುತೇಕ ಹಳ್ಳಿಗಳಲ್ಲಿ ಶೇ 80ರಷ್ಟು ರೈತರು ತೊಗರಿ ಬೆಳೆಯುತ್ತಾರೆ. ಬೆಂಬಲ ಬೆಲೆ ನಿಗದಿ ಮಾಡಿ ಸರ್ಕಾರವೇ ಖರೀದಿಸಲು ಮುಂದಾಯಿತು. ಆದರೆ ಸದ್ಯ ಖರೀದಿ ಕೇಂದ್ರಗಳನ್ನು ಮುಚ್ಚಿಸಿದೆ. ಶೇ. 10ರಷ್ಟು ರೈತರ ತೊಗರಿ ಖರೀದಿಯಾಗಿಲ್ಲ ಎಂದು ಅಂದಾಜಿಸಲಾಗಿದೆ.
ತಾಲೂಕಿನಲ್ಲಿ ಒಟ್ಟು 18 ಖರೀದಿ ಕೇಂದ್ರ ಆರಂಭಿಸಲಾಗಿದೆ. ರೈತರಿಂದ ಎಕರೆಗೆ ತಲಾ 5 ಕ್ವಿಂಟಲ್ ತೊಗರಿ ಖರೀದಿಸುವಂತೆ ಕೇಂದ್ರಗಳಿಗೆ ಸೂಚನೆ ನೀಡಲಾಗಿದೆ. ಆದೇಶದಂತೆ ಖರೀದಿ ಮಾಡಿದ್ದೇವೆ ಎಂದು ಖರೀದಿ ಕೇಂದ್ರದವರು ಹೇಳುತ್ತಾರೆ. ಆದರೆ ತಾಲೂಕಿನಾದ್ಯಂತ ಶೇ. 10ರಷ್ಟು ತೊಗರಿಯೂ ಖರೀದಿಯಾಗಿಲ್ಲ. ಉಳಿದ 70ರಿಂದ 80ರಷ್ಟು ರೈತರು ತೊಗರಿ ಮಾರಾಟ ಮಾಡಿಲ್ಲ. ಈ ನಡುವೆ ಖರೀದಿ ಕೇಂದ್ರ ಸ್ಥಗಿತಗೊಳಿಸಿದ್ದರಿಂದ ರೈತರು ಖರೀದಿ ಕೇಂದ್ರಗಳ ಎದುರು ಚೀಲ ಇಟ್ಟುಕೊಂಡು ಕಾಯುತ್ತಾ ಕುಳಿತುಕೊಳ್ಳುವಂತಾಗಿದೆ.
ಅತನೂರ ಖರೀದಿ ಕೇಂದ್ರ: ಅತನೂರ ಖರೀದಿ ಕೇಂದ್ರದಲ್ಲಿ ಒಟ್ಟು 1320 ರೈತರು ಆನ್ ಲೈನ್ ನೋಂದಣಿ ಮಾಡಿಸಿದ್ದಾರೆ. ಈ ಪೈಕಿ 250 ರೈತರ ಒಟ್ಟು 4500 ಕ್ವಿಂಟಲ್ ತೊಗರಿ ಖರೀದಿಯಾಗಿದೆ. ಆನ್ಲೈನ್ ನೋಂದಣಿ ಮಾಡಿಸದ ಇನ್ನೂ 1070 ರೈತರ ತೊಗರಿ ಖರೀದಿಯಾಗಿಲ್ಲ.
ಹಸರಗುಂಡಗಿ ಖರೀದಿ ಕೇಂದ್ರ: 550 ರೈತರು ನೋಂದಣಿ ಮಾಡಿಸಿದ್ದಾರೆ. ಈ ಪೈಕಿ 260 ರೈತರಿಂದ 2250 ಕ್ವಿಂಟಲ್ ತೊಗರಿ ಖರೀದಿಸಲಾಗಿದೆ.
ಭೈರಾಮಡಗಿ ಖರೀದಿ ಕೇಂದ್ರ: 1745 ರೈತರು ನೋಂದಣಿ ಮಾಡಿಸಿದ್ದಾರೆ. ಈ ಪೈಕಿ 423 ರೈತರಿಂದ 3750 ಕ್ವಿಂಟಲ್ ತೊಗರಿ ಖರೀದಿ ಮಾಡಲಾಗಿದೆ.
ಗೊಬ್ಬೂರ(ಬಿ) ಖರೀದಿ ಕೇಂದ್ರ: 878 ರೈತರು ನೋಂದಣಿ ಮಾಡಿಸಿದ್ದಾರೆ. 193 ರೈತರಿಂದ ಒಟ್ಟು 3500 ಕ್ವಿಂಟಲ್ ತೊಗರಿ ಖರೀದಿಸಲಾಗಿದೆ.
ದೇಸಾಯಿ ಕಲ್ಲೂರ ಖರೀದಿ ಕೇಂದ್ರ: 750 ರೈತರು ನೋಂದಣಿ ಮಾಡಿಸಿದ್ದಾರೆ. 230 ರೈತರಿಂದ ಒಟ್ಟು 3500 ಕ್ವಿಂಟಲ್ ತೊಗರಿ ಖರೀದಿಸಲಾಗಿದೆ.
ಮಾಶಾಳ ಖರೀದಿ ಕೇಂದ್ರ: 1067 ರೈತರು ನೋಂದಣಿ ಮಾಡಿಸಿದ್ದಾರೆ. ಇಲ್ಲಿಯವರೆಗೆ 163 ರೈತರಿಂದ 2870 ಕ್ವಿಂಟಲ್ ತೊಗರಿ ಖರೀದಿಸಲಾಗಿದೆ.
ಚಿಣಮಗೇರಾ ಖರೀದಿ ಕೇಂದ್ರ: 718 ರೈತರು ನೋಂದಣಿ ಮಾಡಿಸಿದ್ದಾರೆ. 269 ರೈತರಿಂದ 4700 ಕ್ವಿಂಟಲ್ ತೊಗರಿ ಖರೀದಿಸಲಾಗಿದೆ.
ರೇವೂರ(ಬಿ) ಖರೀದಿ ಕೇಂದ್ರ: 1825 ರೈತರು ನೋಂದಿಣಿ ಮಾಡಿಸಿದ್ದಾರೆ. 316 ರೈತರಿಂದ ಒಟ್ಟು 5500 ಕ್ವಿಂಟಲ್ ಗರಿ
ಖರೀದಿಸಲಾಗಿದೆ.
ಮಣೂರ ಖರೀದಿ ಕೇಂದ್ರ: 727 ರೈತರು ನೋಂದಣಿ ಮಾಡಿಸಿದ್ದಾರೆ. ಇದರಲ್ಲಿ 165 ರೈತರಿಂದ 2750 ಕ್ವಿಂಟಲ್ ತೊಗರಿ ಖರೀದಿಸಲಾಗಿದೆ.
ಖರೀದಿ ಕೇಂದ್ರಗಳ ಲಭ್ಯ ಮಾಹಿತಿ ಪ್ರಕಾರ 12560 ರೈತರ ಆನ್ಲೈನ್ ನೋಂದಣಿಯಾಗಿದೆ. ಈ ಪೈಕಿ 2897 ರೈತರ ತೊಗರಿ ಖರೀದಿಸಲಾಗಿದೆ. ಆನ್ಲೈನ್ನಲ್ಲಿ ನೋಂದಣಿಯಾದ ಇನ್ನೂ 9663 ರೈತರ ತೊಗರಿ ಖರೀದಿಯಾಗಿಲ್ಲ. ಸದ್ಯ ತೊಗರಿ ಖರೀದಿ ಸ್ಥಗಿತಗೊಳಿಸಿದ್ದರಿಂದ ತಾಲೂಕಿನ ರೈತರಿಗೆ ಭಾರಿ ಸಮಸ್ಯೆಯಾಗುತ್ತಿದೆ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ಆದಷ್ಟು ಬೇಗ ತೊಗರಿ ಖರೀದಿ ಕೇಂದ್ರ ಪುನಾರಂಭಿಸಿ ತಾಲೂಕಿನ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ತೊಗರಿ ಬೆಳೆದ ರೈತರು ಅಳಲು ತೋಡಿಕೊಂಡಿದ್ದಾರೆ
ಮಲ್ಲಿಕಾರ್ಜುನ ಹಿರೇಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್
Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೆವು?: ಖಂಡ್ರೆ
Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ
Minister ಪ್ರಿಯಾಂಕ ಖರ್ಗೆ ಉದ್ಧಟತನ ಅತಿಯಾಗಿದೆ: ಸಂಸದ ಡಾ.ಜಾಧವ್
MUST WATCH
ಹೊಸ ಸೇರ್ಪಡೆ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ