ಸಂಸ್ಕಾರ ಭರಿತ ಸಮಾಜ ನಿರ್ಮಿಸೋಣ: ಬಿಬ್ಬಳ್ಳಿ
Team Udayavani, Aug 22, 2021, 4:27 PM IST
ಸೇಡಂ: ಸಮಾಜದಲ್ಲಿ ಗುರುತಿಸಿಕೊಂಡವರುಸಂಸ್ಕಾರಭರಿತ ಸಮಾಜ ನಿರ್ಮಿಸುವ ಜವಾಬ್ದಾರಿಹೊತ್ತು ಕೆಲಸ ಮಾಡಬೇಕು ಎಂದು ಹಿರಿಯರಂಗಕರ್ಮಿ, ರಾಜ್ಯ ಮಟ್ಟದ ರಂಗಸಂಗಮ ಪ್ರಶಸ್ತಿಪುರಸ್ಕೃತ ಶಿವಯ್ಯಸ್ವಾಮಿ ಬಿಬ್ಬಳ್ಳಿ ಹೇಳಿದರು.
ಪಟ್ಟಣದ ಬ್ರಹ್ಮಕುಮಾರ ಈಶ್ವರೀಯ ವಿಶ್ವವಿದ್ಯಾಲಯದ ಆಶ್ರಮದಲ್ಲಿ ರಕ್ಷಾಬಂಧನಹಬ್ಬದ ಹಿನ್ನೆಲೆಯಲ್ಲಿ ಹಮ್ಮಿಕೊಂಡ ಸಾಧಕರಿಗೆಸನ್ಮಾನ ಸಮಾರಂಭ ಉದ್ಘಾಟಿಸಿ ಅವರುಮಾತನಾಡಿದರು.ಪ್ರಶಸ್ತಿಗಳಿಗಾಗಿ ಯಾರೂ ಬೆನ್ನು ಬೀಳದೆ,ಕಾಯಕದಲ್ಲಿ ಸಂತೃಪ್ತಿ ಹೊಂದುವ ಕೆಲಸಮಾಡಬೇಕು ಆಗ ಪ್ರಶಸ್ತಿಗಳು ತನ್ನಿಂದತಾನೆಹುಡುಕಿಕೊಂಡು ಬರುತ್ತವೆ ಎಂದರು.
ಹಿರಿಯ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರಮಾತನಾಡಿ, ಆಧ್ಯಾತ್ಮದ ತಳಹದಿಯಲ್ಲಿನಡೆಯುವ ಪ್ರತಿಯೊಬ್ಬರೂ ಜೀವನವೂ ಸಂತೃಪ್ತಿಯಿಂದ ಕೂಡಿರುತ್ತದೆ. ಸನ್ಮಾರ್ಗದ ಕಾರ್ಯದಲ್ಲಿತೊಡಗುವುದರಿಂದ ಮನಃಶಾಂತಿ ದೊರೆಯುತ್ತದೆಎಂದರು.ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿಮಾತನಾಡಿ, ಮೊಬೈಲ್ ಹೆಸರಲ್ಲಿ ಬ್ಯಾಟರಿ ಚಾರ್ಚ್ಮಾಡುವಂತೆ, ದೇಹದ ಹೆಸರಲ್ಲಿ ಆಧ್ಯಾತ್ಮದಮನಸ್ಸಿನ ಬ್ಯಾಟರಿ ಚಾರ್ಚ್ ಮಾಡಬೇಕು ಎಂದುಹೇಳಿದರು.
ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನದಅಧ್ಯಕ್ಷ ಸಿದ್ದಪ್ಪ ತಳ್ಳಳ್ಳಿ, ಹಿರಿಯ ಪತ್ರಕರ್ತ,ರಂಗಕರ್ಮಿ ಮಹಿಪಾಲರೆಡ್ಡಿ ಮುನ್ನೂರು,ಕಲಬುರಗಿ ರಂಗಾಯಣ ನಿರ್ದೇಶಕ ಪ್ರಭಾಕರಜೋಶಿ, ಹಿರಿಯ ರಂಗಕರ್ಮಿ ಶಿವಯ್ಯಸ್ವಾಮಿಬಿಬ್ಬಳ್ಳಿ, ಹಿರಿಯ ವೈದ್ಯ ಡಾ| ಸದಾನಂದ ಬೂದಿ,ಬಿಜೆಪಿ ಮುಖಂಡ, ಸಾಹಿತಿ ಬಿ.ಕೆ. ಬನ್ನಪ್ಪ,ಪತ್ರಕರ್ತರ ಸಂಘದ ಅಧ್ಯಕ್ಷ ಶಿವಕುಮಾರನಿಡಗುಂದಾ, ವೈದ್ಯ ಡಾ| ಶ್ರೀನಿವಾಸ ಮೊಕದಮ್,ಪತ್ರಕರ್ತ ಅವಿನಾಶ ಬೋರಂಚಿ, ಕುಮಾರ ವೈಷ್ಣವಿಚನ್ನಕ್ಕಿ, ಸಂಶೋಧಕ ಮುಡಬಿ ಗುಂಡೇರಾವ್,ಕುಂಚ ಕಲಾವಿದ ಹುಸೇನಪ್ಪ ಭೋವಿ ಅವರನ್ನುಸನ್ಮಾನಿಸಲಾಯಿತು. ಬ್ರಹ್ಮಕುಮಾರಿ ಕಲಾವತಿ ಅಕ್ಕ,ಡಾ| ರಮೇಶ ಐನಾಪೂರ, ವೀರಭದ್ರಯ್ಯಸ್ವಾಮಿರುದೂ°ರ, ಸಂತೋಷ ತೊಟ್ನಳ್ಳಿ, ಶಿವಶರಣಪ್ಪಚಂದನಕೇರಿ, ಸುರೇಶ ತೇಲ್ಕೂರ, ಬಸವರಾಜಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
MUST WATCH
ಹೊಸ ಸೇರ್ಪಡೆ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ