ಬಿರುಗಾಳಿ ಮಳೆಗೆ ಹಾರಿ ಹೋದ ಮೇಲ್ಛಾವಣಿ
Team Udayavani, Apr 19, 2020, 10:51 AM IST
ಚಿಂಚೋಳಿ: ಪಟ್ಟಣದ ಹೊಸ ಭವಾನಿಗರ, ಚಿಕ್ಕನಿಂಗದಳ್ಳಿ ಗ್ರಾಮದಲ್ಲಿ ಸುರಿದ ಮಳೆ-ಬಿರುಗಾಳಿಗೆ ಮನೆಗಳ ಪತ್ರಾಸಗಳು ಹಾರಿ ಹೋಗಿದ್ದು ಸಂಸದ ಜಾಧವ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಚಿಂಚೋಳಿ: ತಾಲೂಕಿನಲ್ಲಿ ಶನಿವಾರ ಸಂಜೆ ಗುಡುಗು, ಮಿಂಚು ಸೇರಿದಂತೆ ಬಿರುಗಾಳಿ ಸಮೇತ ಮಳೆಯಾಗಿದ್ದು, ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಏಳು ಮನೆಗಳ ಮೇಲಿನ ಮೇಲ್ಛಾವಣಿ ಹಾರಿ ಹೋಗಿವೆ.
ಐನೋಳಿ, ದೇಗಲಮಡಿ, ಚಿಂಚೋಳಿ ಪಟ್ಟಣ, ಚಂದಾಪುರ, ಹಸರಗುಂಡಗಿ, ಸುಲೇಪೇಟ, ಮಿರಿಯಾಣ, ಕುಂಚಾವರಂ, ಸಾಲೇಬೀರನಳ್ಳಿ, ಚಂದನಕೇರಾ, ರಾಣಾಪುರ, ನಿಡಗುಂದಾ, ರಟಕಲ್, ಕೋಡ್ಲಿ, ಮೋಘಾ ಗ್ರಾಮಗಳಲ್ಲಿ ಬಿರುಗಾಳಿ ಸಮೇತ ಮಳೆ ಆಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಚಿಂಚೋಳಿ ಪಟ್ಟಣ ಹಾಗೂ ಚಿಕ್ಕನಿಂಗದಳ್ಳಿ ಗ್ರಾಮದಲ್ಲಿ ಕಮಲಾಬಾಯಿ ದೇಸುನಾಯಕ ಎನ್ನುವ ಮನೆ, ಮೇಲ್ಚಾವಣಿ ಸಂಪೂರ್ಣ ಗಾಳಿಗೆ ಹಾರಿಹೋಗಿದೆ. ಶಾದೀಪುರ ಗ್ರಾಮದಲ್ಲಿ ಸಿಡಿಲಿನ ಬಡಿತಕ್ಕೆ ಇಂದಿರಮ್ಮ ಅಂಬಣ್ಣ ಒಡ್ಡರ ಎನ್ನುವರ ಎತ್ತು ಮೃತಪಟ್ಟಿದೆ.
ಮೂವರಿಗೆ ಗಾಯ: ಪಟ್ಟಣದ ಭವಾನಿ ನಗರದಲ್ಲಿ ಗಾಳಿಗೆ ಮನೆಯಲ್ಲಿ ಕುಳಿತಿದ್ದ ಮೂವರು ಮಹಿಳೆಯರ ಮೇಲೆ ಕಲ್ಲುಬಿದ್ದು ತೀವ್ರ ಗಾಯಗೊಂಡಿದ್ದಾರೆ. ಪರವೀನ್ ಸುಲ್ತಾನ್, ಶರೀಫ್ ಅಬಿ ಸೇರಿದಂತೆ ಇನ್ನೊಬ್ಬರು ಗಾಯಗೊಂಡಿದ್ದಾರೆ. ಇವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು