ಹವಾಮಾನ ವೈಪರೀತ್ಯ: 2 ವಿಮಾನಗಳು ಆಗಸದಲ್ಲಿ ಸುತ್ತಿದರೂ ಸಿಗದ ಲ್ಯಾಂಡಿಂಗ್ ಅವಕಾಶ


Team Udayavani, Aug 16, 2020, 3:24 PM IST

ಹವಾಮಾನ ವೈಪರೀತ್ಯ: 2 ವಿಮಾನಗಳು ಆಗಸದಲ್ಲಿ ಸುತ್ತಿದರೂ ಸಿಗದ ಲ್ಯಾಂಡಿಂಗ್ ಅವಕಾಶ

ಕಲಬುರಗಿ: ಸತತ ಮಳೆಯಿಂದ ಹವಾಮಾನ ವೈಪರೀತ್ಯ ಉಂಟಾಗಿ ರವಿವಾರ ಕಲಬುರಗಿ ವಿಮಾನ ನಿಲ್ದಾಣದಲ್ಲಿ ವಿಮಾನಗಳು ಇಳಿಯಲು ಸಾಧ್ಯವಾಗಿಲ್ಲ. ಅಲಿಯನ್ಸ್ ಏರ್ ಮತ್ತು ಸ್ಟಾರ್ ಏರ್ ವಿಮಾನಗಳು ಇಳಿಸಲು 40 ನಿಮಿಷಗಳ‌ ಕಾಲ ಪ್ರಯತ್ನಿಸಿ ಆಗಸದಲ್ಲೇ ಸುತ್ತುಸುತ್ತಿದರೂ ಸಫಲವಾಗದ ಪ್ರಸಂಗ ನಡೆದಿದೆ.

ಬೆಳಿಗ್ಗೆ ಬೆಂಗಳೂರಿನಿಂದ ಕಲಬುರಗಿಯತ್ತ ಅಲಯನ್ಸ್ ಏರ್ ಮತ್ತು ಸ್ಟಾರ್ ಏರ್ ವಿಮಾನಗಳು ಪ್ರಯಾಣಿಕರ ಹೊತ್ತು ಬಂದಿದ್ದವು. ಆದರೆ, ಕಲಬುರಗಿಯಲ್ಲಿ ಮೋಡ ಕವಿದ ವಾತಾವರಣ ಮತ್ತು ಜಿಟಿಜಿಟಿ ಮಳೆ ಸುರಿಯುತ್ತಿದ್ದ ಕಾರಣ ವಿಮಾನಗಳು ಲ್ಯಾಂಡ್ ಆಗಲು ಸಾಧ್ಯವಾಗಿಲ್ಲ. ವಿಮಾನಗಳು ಇಲ್ಲೇ ಸುತ್ತುವರಿಯುತ್ತಿದ್ದರೂ ವ್ಯತಿರಿಕ್ತ ವಾತಾವರಣ ಹಿನ್ನೆಲೆಯಲ್ಲಿ ಎಟಿಸಿ ಸಿಗ್ನಲ್ ವಿಮಾನಗಳನ್ನು ಇಳಿಸಲು ಅನುಮತಿ ನೀಡಲಿಲ್ಲ. ಅಲಯನ್ಸ್ ಏರ್ ವಿಮಾನ ಹತ್ತಿರದ ಹೈದರಾಬಾದ್ ಗೆ ಕಳುಹಿಸಲಾಯಿತು ಹಾಗೂ ಸ್ಟಾರ್ ಏರ್ ವಿಮಾನ ಮರಳಿ ಬೆಂಗಳೂರಿಗೆ ವಾಪಸ್ ಹೋಯಿತು ಎಂದು ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕ ಜ್ಞಾನೇಶ್ವರ ರಾವ್ ‘ಉದಯವಾಣಿ’ಗೆ ತಿಳಿಸಿದರು.

ಅಲಯನ್ಸ್ ಏರ್ ವಿಮಾನ ಬೆಂಗಳೂರಿನಿಂದ ತನ್ನ ಸರಿಯಾದ ಸಮಯ ಬೆಳಿಗ್ಗೆ 10.15ಕ್ಕೆ 50 ಜನ ಪ್ರಯಾಣಿಕರನ್ನು ಹೊತ್ತು ಹೊರಟಿತ್ತು. ಕಲಬುರಗಿ ವಿಮಾನ ನಿಲ್ದಾಣದಲ್ಲಿ 11.45ಕ್ಕೆ ಲ್ಯಾಂಡ್ ಆಗಬೇಕಿತ್ತು. ಲ್ಯಾಂಡಿಂಗ್ ಸಮಸ್ಯೆಯಿಂದ 40 ನಿಮಿಷ ಆಗಸದಲ್ಲೇ ಸುತ್ತುವರಿದು ಕೊನೆಗೆ ಹೈದ್ರಾಬಾದ್ ಗೆ ಮಾರ್ಗ ಬದಲಾವಣೆ ಮಾಡಲಾಯಿತು. ಇದೇ ವಿಮಾನದಲ್ಲಿ ಕಲಬುರಗಿಯಿಂದ ಬೆಂಗಳೂರಿಗೆ ತೆರಳಲು 52 ಟಿಕೆಟ್ ಕಾಯ್ದಿರಿಸಿದ್ದರು.

ಇತ್ತ, ಸ್ಟಾರ್ ಏರ್ ವಿಮಾನ ತನ್ನ ನಿಗದಿತ ಸಮಯಕ್ಕೆ ತಡವಾಗಿ ಬಂದರೂ ಇಳಿಯಲು ಅನುಕೂಲಕರ ಪರಿಸ್ಥಿತಿ ಇರದ ತನ್ನ ಒಂದು ದಿನದ ಹಾರಾಟವನ್ನೇ ರದ್ದು ಮಾಡಿದೆ. ಈ ವಿಮಾನ ಬೆಂಗಳೂರಿನಿಂದ ಬೆಳಿಗ್ಗೆ 8.40ಕ್ಕೆ ಹೊರಟು, ಕಲಬುರಗಿಗೆ 9.45ಕ್ಕೆ ಬರಬೇಕಿತ್ತು. ತನ್ನ ನಿಗದಿತ ಸಮಯಕ್ಕಿಂತ‌ ಎರಡು ಗಂಟೆಗೂ ಅಧಿಕ ಕಾಲ ತಡವಾಗಿ ಬಂದು 40 ನಿಮಿಷ ಆಗಸದಲ್ಲೇ ಸುತ್ತುವರಿದಿದೆ. ಆದರೂ, ಎಟಿಸಿ ಸಿಗ್ನಲ್ ವಿಮಾನ ಇಳಿಸಲು ಅನುಮತಿ ನೀಡದ ಕಾರಣ ಬೆಂಗಳೂರಿಗೆ ವಾಪಸ್ ಆಗಿದೆ.

ಈ ವಿಮಾನದಲ್ಲಿ ಬೆಂಗಳೂರಿನಿಂದ ಕಲಬುರಗಿಗೆ 40 ಪ್ರಯಾಣಿಕರು ಹತ್ತಿದ್ದರು. ಇದೇ ವಿಮಾನದಲ್ಲಿ ಕಲಬುರಗಿಯಿಂದ 44 ಜನ ಪ್ರಯಾಣಿಕರು ಹೋಗಬೇಕಿತ್ತು. ಆದರೆ, ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಹೋದ ವಿಮಾನ ಮರಳಿ ಬಾರದೆ ಹಾರಾಟ ಸ್ಥಗಿತಗೊಳಿಸಿತು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.