ಸರ್ಕಾರದ ಸುಪರ್ದಿಗೆ ಕೊಂಚೂರು ದೇವಸ್ಥಾನ


Team Udayavani, Jul 13, 2021, 4:53 PM IST

gಸಗಸಗಗ್ಗ್ಗ್ಗ್

ವಾಡಿ: ಚಿತ್ತಾಪುರ ತಾಲೂಕಿನ ಕೊಂಚೂರು ಗ್ರಾಮದ ಸುಪ್ರಸಿದ್ಧ ಹನುಮಾನ ದೇವಸ್ಥಾನ ಆಡಳಿತ ಜವಾಬ್ದಾರಿ ಈಗ ಸರ್ಕಾರದ ಹಿಡಿತಕ್ಕೆ ಜಾರುವ ಪ್ರಸಂಗ ಎದುರಾಗಿದೆ. ದೇವರ ಪೂಜೆಗೆ ಸಂಬಂಧಿಸಿದಂತೆ ಕೊಂಚೂರು ಗ್ರಾಮದ ಪೂಜಾರಿ ಸಮುದಾಯದ ಕುಟುಂಬಗಳ ಮಧ್ಯೆ ಉಂಟಾಗಿರುವ ಆಂತರಿಕ ಜಗಳ ಬೀದಿಗೆ ಬಿದ್ದಿದ್ದು, ನೂರಾರು ವರ್ಷಗಳಿಂದ ಕಣ್ಮರೆಯಾಗಿದ್ದ ದೇವಸ್ಥಾನಕ್ಕೆ ಸೇರಿದ 127 ಎಕರೆ ಜಮೀನು ಅರ್ಚಕರ ಪರಸ್ಪರ ಸಂಘರ್ಷದಿಂದ ಸಾರ್ವಜನಿಕವಾಗಿ ಬೆಳಕಿಗೆ ಬಂದಿದೆ.

ಈ ಕುರಿತು ಸೋಮವಾರ ಕೊಂಚೂರು ದೇವಸ್ಥಾನ ಸಭಾಂಗಣದಲ್ಲಿ ತಹಶೀಲ್ದಾರ್‌ ಉಮಾಕಾಂತ ಹಳ್ಳೆ ಅಧ್ಯಕ್ಷತೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ದೇವಸ್ಥಾನದ ಹೆಸರಿನಲ್ಲಿ ನೂರಾರು ಎಕರೆ ಕೃಷಿ ಭೂಮಿ ಇರುವುದು ಗೊತ್ತಾಗಿದೆ. ಅದು ನಿಜಾಮ ಸರ್ಕಾರದ ಆಡಳಿತಾವಧಿ ಯಿಂದ ಹಾಗೂ ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ಜಾರಿಯಾದಾಗಿನಿಂದ ದೇವಸ್ಥಾನದ ಅರ್ಚಕ ಕುಟುಂಬಗಳ ಹೆಸರಿಗೆ ವರ್ಗಾವಣೆಯಾಗಿರುವುದು ದಾಖಲಾತಿ ಪರಿಶೀಲನೆಯಿಂದ ಸ್ಪಷ್ಟವಾಯಿತು.

ಇದನ್ನು ಸಭೆಯಲ್ಲಿ ಅರ್ಚಕ (ಪೂಜಾರಿ) ಕುಟುಂಬಸ್ಥರೂ ಒಪ್ಪಿಕೊಂಡು ಅಚ್ಚರಿ ಮೂಡಿಸಿದರು. ಕೊಂಚೂರು ಹನುಮಾನ ದೇವಸ್ಥಾನಕ್ಕೆ ಸೇರಿದ ಒಟ್ಟು ಜಮೀನಿನ ಕುರಿತು ನಡೆದ ಚರ್ಚೆಯಲ್ಲಿ ಮಾತನಾಡಿದ ಅರ್ಚಕರು ಹಾಗೂ ಗ್ರಾಮದ ಮುಖಂಡರು ಗುಪ್ತಗಾಮಿನಿಯಾಗಿದ್ದ ಆಸ್ತಿಯ ವಿವರವನ್ನು ಬಹಿರಂಗಪಡಿಸಿದರು. ಚಾಮನೂರು ಗ್ರಾಮದಲ್ಲಿ 9.37 ಎಕರೆ, ಅಳ್ಳೊಳ್ಳಿಯಲ್ಲಿ 9 ಎಕರೆ, ದಂಡಗುಂಡದಲ್ಲಿ 6 ಎಕರೆ, ರಾವೂರಿನಲ್ಲಿ 24 ಎಕರೆ, ಮಾಲಗತ್ತಿಯಲ್ಲಿ 11.24 ಎಕರೆ, ಕುಲಕುಂದಾ 8.16 ಎಕರೆ, ನರಿಬೋಳಿಯಲ್ಲಿ 9 ಎಕರೆ ಸೇರಿದಂತೆ ವಿವಿಧೆಡೆಯಲ್ಲಿ ಒಟ್ಟು 127 ಎಕರೆ ಭೂಮಿ ಇದೆ ಎಂದು ಅಧಿ ಕಾರಿಗಳಿಗೆ ಮಾಹಿತಿ ನೀಡಿದರು. ಇದರಲ್ಲಿ ಕೆಲ ಗ್ರಾಮಗಳಲ್ಲಿನ ದೇವಸ್ಥಾನದ ಜಮೀನುಗಳನ್ನು ಅರ್ಚಕರು ಅಕ್ರಮವಾಗಿ ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂಬುದು ಒಂದು ಗುಂಪಿನ ಆರೋಪವಾದರೆ, ದೇವಸ್ಥಾನದ ಟ್ರಸ್ಟ್‌ನವರು ಐದಾರು ಎಕರೆ ಭೂಮಿ ಮಾರಿಕೊಂಡು ಹಣ ಲಪಟಾಯಿಸಿದ್ದಲ್ಲದೆ ಕಳೆದ ಆರು ವರ್ಷಗಳಿಂದ ಲೆಕ್ಕಪತ್ರ ನೀಡಿಲ್ಲ ಎಂದು ಇನ್ನೊಂದು ಗುಂಪಿನ ಮುಖಂಡರು ಆರೋಪಿಸಿದರು.

ಒಟ್ಟಾರೆ ದೇವಸ್ಥಾನದ ಹಳೆಯ ಟ್ರಸ್ಟ್‌ ಮತ್ತು ಹೊಸ ಟ್ರಸ್ಟ್‌ ಸದಸ್ಯರ ಮಧ್ಯೆ ಉಂಟಾಗಿರುವ ಮನಸ್ತಾಪವು ಅರ್ಚಕರ ಕುಟುಂಬಗಳ ಕಾಳಗವಾಗಿ ಬದಲಾಗುವ ಮೂಲಕ ದೇವರಿಗೆ ಸೇರಿದ ಅಪಾರ ಆಸ್ತಿಯನ್ನು ಬಯಲಿಗೆ ತಂದಿಟ್ಟಿತು. 15 ದಿನಗಳ ಗಡುವು: ಈ ಹಿಂದೆ ಕೇವಲ ಎರಡು ಪೂಜಾರಿ ಕುಟುಂಬಗಳು ದೇವರ ಪೂಜೆ ಮಾಡುತ್ತಿದ್ದರು. ಈಗ ಕುಟುಂಬಗಳು ಬೆಳೆದಿವೆ. ಬೇಡಿಕೆ ಹೆಚ್ಚಿದೆ. ಯಾರಾರು ಎಷ್ಟು ವರ್ಷ ಪೂಜೆ ಮಾಡಬೇಕು ಎಂಬುದನ್ನು ಟ್ರಸ್ಟ್‌ ಪದಾಧಿ  ಕಾರಿಗಳು, ಮುಖಂಡರು ಮತ್ತು ಅರ್ಚಕರು ಮಾತಾಡಿಕೊಂಡು ಸಹಮತದ ನಿರ್ಣಯಕ್ಕೆ ಬನ್ನಿ. 15 ದಿನದ ಒಳಗಾಗಿ ಒಪ್ಪಂದ ಏರ್ಪಟ್ಟರೆ ಉತ್ತಮ.

ಇಲ್ಲವಾದರೆ ಕೊಂಚೂರು ಹನುಮಾನ ದೇವಸ್ಥಾನವನ್ನು ತಾಲೂಕು ಆಡಳಿತ ತನ್ನ ವಶಕ್ಕೆ ಪಡೆಯುತ್ತದೆ. ದೇವಸ್ಥಾನದ ಆಸ್ತಿಯನ್ನು ಅಕ್ರಮವಾಗಿ ಕಬಳಿಸಿದ್ದನ್ನು ಮರಳಿಸಬೇಕು ಎಂದು ತಹಶೀಲ್ದಾರ್‌ ಉಮಾಕಾಂತ ಹಳ್ಳೆ ಎಚ್ಚರಿಸಿದರು. ಕೊಂಚೂರು ಮಹರ್ಷಿ ಸವಿತಾ ಪೀಠದ ಧರ್ಮಾಧಿ ಕಾರಿ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ, ಸಿಪಿಐ ಕೃಷ್ಣಪ್ಪ ಕಲ್ಲೆದೇವರು, ಪಿಎಸ್‌ಐ ವಿಜಯಕುಮಾರ ಭಾವಗಿ, ದೇವೇಂದ್ರ ರೆಡ್ಡಿ, ಕಂದಾಯ ನಿರೀಕ್ಷಕ ಪ್ರಶಾಂತ ರಾಠೊಡ, ತಲಾಟಿ ಸಂಗಮೇಶ ಹಾಗರಗಿ, ಮುಖಂಡರಾದ ಅರುಣಕುಮಾರ ಲೋಯಾ, ವಿಜಯಕುಮಾರ ಕುಲಕರ್ಣಿ, ಜುಮ್ಮಣ್ಣ ಪೂಜಾರಿ, ಮಹಾದೇವಿ ಕೊಂಚೂರ, ಸುರೇಶಗೌಡ, ರುದ್ರುಮುನಿ ಮಠಪತಿ, ದ್ಯಾವಣ್ಣ ಪೂಜಾರಿ, ಅಶೋಕ ಪೂಜಾರಿ, ಚಂದ್ರಶೇಖರ ಪೂಜಾರಿ, ರವೀಂದ್ರ ಪೂಜಾರಿ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು. ಸಭೆಗೆ ಪೊಲೀಸ್‌ ಬಂದೋಬಸ್ತ್ ಒದಗಿಸಲಾಗಿತ್ತು

 

ಟಾಪ್ ನ್ಯೂಸ್

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!

Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.