ಬಿಸಿಲು ನಾಡನ್ನೇನಡುಗಿಸಿದ ಚಳಿ


Team Udayavani, Dec 20, 2018, 10:48 AM IST

gul-1.jpg

ಕಲಬುರಗಿ: ಜಿಲ್ಲೆಯ ಇತಿಹಾಸದಲ್ಲಿ ಹಗಲೊತ್ತಿನಲ್ಲಿಯೇ ಸ್ವೇಟರ್‌ ಧರಿಸಿ, ಟೋಪಿ ಹಾಕಿಕೊಂಡು ತಿರುಗಾಡುವಂತಹ ಚಳಿ ಬಿಸಿಲು ನಾಡು ಕಲಬುರಗಿ ಜಿಲ್ಲೆಯಾದ್ಯಂತ ಮುಂದುವರಿದಿದೆ.

ಬುಧವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಕಳೆದ ಒಂದೂವರೆ ದಶಕದ ಅವಧಿಗಿಂತ 12.4 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. ಇಷ್ಟೊಂದು ಪ್ರಮಾಣದ ಚಳಿಗೆ ಕಂಗಾಲಾದ ನಾಗರಿಕರು ಹೊರಕ್ಕೆ ಬರಲು ಹಿಂದೇಟು ಹಾಕಿದರು.

ವಿಪರೀತ ಚಳಿಯಿಂದಾಗಿ ಮಂಜು ವ್ಯಾಪಕವಾಗಿ ಆವರಿಸಿದ್ದರಿಂದ ಬುಧವಾರ ಮುಂಜಾವಿನಲ್ಲಿ ಹಾಗೂ ಬೆಳಗಿನ ಜಾವವೂ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಅರ್ಧ ಕಿ.ಮೀ ದೂರದ ನಂತರ ಏನೂ ಕಾಣದಷ್ಟು ಮಂಜು ಆವರಿಸಿತ್ತು. ಸೂರ್ಯೋದಯ ನಂತರ ಮೆಲ್ಲಗೆ ಮಂಜು ಕರಗಿದಾಗ ರಸ್ತೆ ಸಂಚಾರ ಎಂದಿನಂತೆ ಸುಗಮಗೊಂಡಿತು.

ಮಂಜು ಹಾಗೂ ಶೀತ ಗಾಳಿಗೆ ಮಕ್ಕಳಿಗೆ, ಮಹಿಳೆಯರಿಗೆ, ವಯೋವೃದ್ಧರಿಗೆ ತುಂಬಾ ತೊಂದರೆಯಾಗಿದೆ. ಜನ ಜಾನುವಾರಗಳಿಗೂ ತೊಂದರೆಯಾಗುವ ಸಾಧ್ಯತೆಗಳಿವೆ. ಜನವಂತೂ ಏನಪ್ಪ ಚಳಿ ಎಂದು ಹಗಲೋತ್ತಿನಲ್ಲಿಯೇ
ನಡುಗುತ್ತಿದ್ದಾರೆ. ಚಳಿಯಿಂದ ಪಾರಾಗಲು ಅಲ್ಲಲ್ಲಿ ಜನ ಬೆಂಕಿ ಹಚ್ಚಿ ಕಾಯಿಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಸ್ವೆಟರ್‌-ಟೋಪಿ ಖರೀದಿಗೆಂದು ಜನ ಅಂಗಡಿಗಳಿಗೆ ಮುತ್ತಿಗೆ ಹಾಕುತ್ತಿರುವ ರೀತಿಯಲ್ಲಿ ಕಂಡುಬರುತ್ತಿದೆ.

ಮಧ್ಯಾಹ್ನ ಹೊತ್ತಿಗೆ ಬಿಸಿಲಿನ ವೇಳೆ ಹೊರ ಬಂದ ನಂತರವೂ ಜನರು ಸ್ವೆಟರ್‌ ಧರಿಸಿಕೊಂಡೇ ಹೆಚ್ಚಿನ ಪ್ರಮಾಣದಲ್ಲಿ ಬರಲಾರಂಭಿಸಿದರು. ಬಿಸಿಲು ನಾಡು ಕಲಬುರಗಿಯಲ್ಲಿ ಹಗಲೋತ್ತಿನಲ್ಲೇ ಸ್ವೇಟರ್‌ ಹಾಕಿಕೊಂಡು ಬಂದ ಉದಾಹರಣೆಗಳೇ ಇರಲಿಲ್ಲ. ಮಂಗಳವಾರ ರಾತ್ರಿ 7 ಗಂಟೆ ಸುಮಾರಿಗೆ 19 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿತ್ತು. ಬುಧವಾರ ಮಧ್ಯಾಹ್ನ 2:30 ಗಂಟೆಗೆ 24 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾದರೆ ಸಂಜೆ ಮತ್ತೆ ಚಳಿ ಹೆಚ್ಚಾಗತೊಡಗಿತು

ವಾಡಿ: ಮಳೆಗಾಲದಲ್ಲೂ ಉರಿಯುವ ಬಿಸಿಲು ಕಂಡಿದ್ದ ಈ ಭಾಗದ ಜನತೆಗೆ ಚಳಿಗಾಲವೂ ಮೈನಡುಗಿಸುವಲ್ಲಿ ಸೋತಿತ್ತು. ಆದರೆ, ಕಳೆದ ಮೂರು ದಿನಗಳಿಂದ ವಾತಾವರಣ ತಂಪೇರಿದ್ದು, ಜನರಿಗೆ ಚಳಿಗಾಲದ ಅನುಭವ ತಟ್ಟಿದೆ. ಅಂಗಿ ಕಳೆದು ಓಡಾಡುತ್ತಿದ್ದ ಯುವಕರು ಈಗ ಬೆಚ್ಚನೆ ಉಡುಪು ಧರಿಸಿಕೊಂಡು ನಡುಗುತ್ತಲೇ ಚಹಾ ಅಂಗಡಿಗಳತ್ತ
ಬರುತ್ತಿದ್ದಾರೆ. ಪೌರಕಾರ್ಮಿಕರು ಗುಡಿಸಿಟ್ಟ ಬೀದಿ ಕಸ ತಂದು ಉರಿ ಹಚ್ಚುವ ಮೂಲಕ ಹುಡುಗರು ಮೈ ಕಾಯಿಸಿಕೊಳ್ಳುತ್ತಿದ್ದಾರೆ. ಚಹಾ ಎಷ್ಟೇ ಬಿಸಿ ಮಾಡಿದರೂ ನಾಲಿಗೆ ಚುರ್‌ ಎನ್ನುತ್ತಿಲ್ಲ. ಕೈಗಳನ್ನು ಬೆಂಕಿಗಿಟ್ಟರೂ ಶಾಖದ ಅನುಭವವಾಗುತ್ತಿಲ್ಲ. ಹೌದು! ವೇಗದಿಂದ ಬೀಸುತ್ತಿರುವ ಶೀತಗಾಳಿ ಎಲ್ಲವನ್ನೂ ತಣ್ಣಗಾಗಿಸುತ್ತಿದೆ. ಮೈ ಕೊರೆಯುವ ಚಳಿಯಿಂದಾಗಿ ಜನರು ಸಂಜೆ ಬಹುಬೇಗ ಮನೆ ಸೇರಿಕೊಳ್ಳುತ್ತಿದ್ದಾರೆ. ಬೆಳ್ಳಂಬೆಳಗ್ಗೆ ವಾತಾವರಣ ಮಂಜಿನಿಂದ ಕೂಡಿರುತ್ತಿದ್ದು, ಮಲೆನಾಡಿನ ಸೊಬಗೇ ಬಿಸಿಲು ನಾಡಿಗೆ ವಲಸೆ ಬಂದಂತೆ ಭಾಸವಾಗಿ ಪ್ರಕೃತಿ ಪ್ರಿಯರ ಮನಸ್ಸಿಗೆ ಹಿತ ನೀಡುತ್ತಿದೆ.

ಸಾಮಾನ್ಯವಾಗಿ ಜೋಳದ ಬೆಳೆ ಬೆಳವಣಿಗೆ ಚಳಿಗಾಲದ ಶೀತಗಾಳಿ ಮೇಲೆ ನಿಂತಿದೆ. ಈ ಬಾರಿ ಮಳೆಯೂ ಇಲ್ಲ, ಚಳಿಯೂ ಇಲ್ಲ ಎಂಬಂತಾಗಿ ಜೋಳ ಬೆಳೆದ ರೈತರು ಕಂಗಾಲಾಗಿದ್ದರು. ಏಕಾಏಕಿ ಏರುಪೇರಾದ ವಾತಾವರಣದಿಂದ ಶೀತಗಾಳಿ ರಭಸವಾಗಿ ಬೀಸುತ್ತಿದ್ದು, ಮುಗ್ಗರಿಸಲು ಅಣಿಯಾಗಿದ್ದ ಜೋಳದ ಬೆಳೆ ಚೇತರಿಸಿಕೊಂಡು ಥಳಥಳ ಹೊಳೆಯುತ್ತಿವೆ. ಹಸಿರು ಹೊತ್ತು ನಿಂತಿರುವ ಜೋಳದ ಬೆಳೆ, ಬರದ ನಾಡಿನ ಭೂರಮೆ ಕಂಗೊಳಿಸುವಂತೆ ಮಾಡಿದೆ. ಶೀತಗಾಳಿ ಹೀಗೆಯೇ ಇನ್ನಷ್ಟು ದಿನಗಳ ಕಾಲ ಮುಂದುವರಿದರೆ ಬಿಳಿ ಜೋಳ ಫಲನೀಡಲು ಅನುಕೂಲವಾಗುತ್ತದೆ ಎನ್ನುತ್ತಿದ್ದಾರೆ ರೈತರು.

ಉರಿ ಬಿಸಿಲಿಗೆ ಮೈಯೊಡ್ಡಿ ಬೆವರಿನಿಂದ ಬಸವಳಿದಿದ್ದ ವಾಡಿ ವ್ಯಾಪ್ತಿಯ ಜನರಿಗೆ ಥರಗುಟ್ಟುವಂತೆ ಮಾಡಿರುವ ಶೀತಗಾಳಿ ಮೈಚಳಿ ಬಿಡಿಸುವಲ್ಲಿ ಯಶಸ್ವಿಯಾಗಿದೆ. ವಯೋವೃದ್ಧರು ಮತ್ತು ಮಕ್ಕಳು ನೆಗಡಿ, ಕೆಮ್ಮಿನಿಂದ ಬಳಲುವಂತಾಗಿರುವುದು ಕಂಡರೆ ಚಳಿ ತೀವ್ರತೆ ಅರಿವಾಗುತ್ತದೆ. ಒಟ್ಟಾರೆ ಯುವಕರು, ಮಕ್ಕಳು, ಮಹಿಳೆಯರು, ಹಿರಿಯರು ನಡುಗುತ್ತಲೇ ಚಳಿ ಅನುಭವಿಸುತ್ತಿದ್ದಾರೆ.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

1—-wewewqe

Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ

ಸಚಿವರು ಲೀಡ್‌ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್‌

ಸಚಿವರು ಲೀಡ್‌ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್‌

ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ

ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.