
ಮಳೆಗೆ ಕೊಳೆಯುತ್ತಿದೆ ಹತ್ತಿ-ತೊಗರಿ ಬೆಳೆ
Team Udayavani, Aug 2, 2022, 5:59 PM IST

ಯಡ್ರಾಮಿ: ಮಳ್ಳಿ, ಕುಳಗೇರಿ, ಮಾಗಣಗೇರಿ, ಬಿರಾಳ(ಹಿಸ್ಸಾ), ಐನಾಪೂರ ಗ್ರಾಮಗಳಲ್ಲಿ ರವಿವಾರ ಸುರಿದ ವ್ಯಾಪಕ ಮಳೆಯಿಂದ ಸಣ್ಣ ಸಸಿಗಳ ಹಂತದಲ್ಲಿರುವ ಹತ್ತಿ, ತೊಗರಿ ಬೆಳೆ ಸಂಪೂರ್ಣ ಜಲಾವೃತವಾಗಿ ಕೊಳೆಯುತ್ತಿವೆ.
ತಾಲೂಕಿನೆಲ್ಲೆಡೆ ಕಳೆದ ಎರಡು ವಾರಗಳಿಂದ ಮಳೆ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿದೆ. ಇಜೇರಿ, ಬಿಳವಾರ, ಅರಳಗುಂಡಗಿ ವ್ಯಾಪ್ತಿಯಲ್ಲಿ ಮಳೆ ಚನ್ನಾಗಿ ಆಗಿ ಬೆಳೆಗಳು ಲಕ್ಷಣವಾಗಿ ಕಾಣುತ್ತಿವೆ. ಇದರಿಂದ ಆ ಭಾಗಗಳಲ್ಲಿ ರೈತರ ಮುಖದಲ್ಲಿಯೂ ಮಂದಹಾಸ ಮೂಡುವಂತಾಗಿತ್ತು. ಒಂದು ಗಂಟೆಗೂ ಹೆಚ್ಚು ಸಮಯ ಬಿದ್ದ ಮಳೆ ರೈತರಲ್ಲಿ ತೀವ್ರ ಆತಂಕವನ್ನುಂಟು ಮಾಡಿದೆ. ಒಂದುವರೆ ತಿಂಗಳಿನ ಬೆಳೆಗಳಲ್ಲಿ ರೈತರು ಈಗಾಗಲೇ ಒಂದು ಬಾರಿ ಕಳೆ ಕೀಳಿಸಿದ್ದಾರೆ. ಇನ್ನೇನು ರಸಗೊಬ್ಬರ ಕೊಡಬೇಕೆನ್ನುವಷ್ಟರಲ್ಲಿ ಕಳೆದ ಎರಡು ದಿನಗಳಿಂದ ಬೀಳುತ್ತಿರುವ ಆಲಿಕಲ್ಲು ಮಳೆ ಕೃಷಿ ಚಟುವಟಿಕೆಗಳಿಗೆ ತಡೆ ನೀಡಿ, ರೈತರು ಕೈಕಟ್ಟಿ ಕುಳಿತು ಕೊಳ್ಳುವಂತೆ ಮಾಡಿದೆ.
ಇಲ್ಲಿಗೆ ಮಳೆ ಸರಿದು ಬಿಸಿಲು ಬಿದ್ದರೆ ಮಾತ್ರ ಅರ್ಧ ಬೆಳೆಯಾದರೂ ಉಳಿಯುತ್ತವೆ. ಇಲ್ಲವಾದರೆ ಸಂಪೂರ್ಣ ಬೆಳೆ ಅತಿಯಾದ ನೀರು ನಿಂತಿದ್ದರ ಪರಿಣಾವಾಗಿ ಕೊಳೆತು ಹೋಗುತ್ತವೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
ಹೊಸ ಸೇರ್ಪಡೆ

ಪ್ರತಿಭಾವಂತ ಕ್ರಿಕೆಟ್ ಪಟುಗಳ ತವರು ಕರ್ನಾಟಕ: ಕೆ.ವೈ.ವೆಂಕಟೇಶ್

ಎರಡು ಅದ್ಭುತ ಕ್ಯಾಚ್ ಗಳಿಂದ ಬೆರಗು ಮೂಡಿಸಿದ ಸೂರ್ಯಕುಮಾರ್; ವಿಡಿಯೋ ನೋಡಿ

ಲೋಕಸಭೆ ಕಲಾಪದಲ್ಲಿ ಅದಾನಿ ಗ್ರೂಪ್ ವಿರುದ್ಧದ ಆರೋಪದ ಬಗ್ಗೆ ಚರ್ಚೆಗೆ ವಿಪಕ್ಷಗಳ ಪಟ್ಟು

ಮಂಗಳೂರು: ಪಾಲಿಕೆ ಆಯುಕ್ತ ವರ್ಗಾವಣೆ; ನೂತನ ಆಯುಕ್ತರಾಗಿ ಚನ್ನಬಸಪ್ಪ ಕೆ. ನೇಮಕ

ಮುದ್ದೇಬಿಹಾಳ: ಕಾಲುವೆಗೆ ಬಟ್ಟೆ ತೊಳೆಯಲು ಹೋಗಿದ್ದ ಇಬ್ಬರು ಜಲ ಸಮಾಧಿ