ಮಳೆಗೆ ಕೊಳೆಯುತ್ತಿದೆ ಹತ್ತಿ-ತೊಗರಿ ಬೆಳೆ
Team Udayavani, Aug 2, 2022, 5:59 PM IST
ಯಡ್ರಾಮಿ: ಮಳ್ಳಿ, ಕುಳಗೇರಿ, ಮಾಗಣಗೇರಿ, ಬಿರಾಳ(ಹಿಸ್ಸಾ), ಐನಾಪೂರ ಗ್ರಾಮಗಳಲ್ಲಿ ರವಿವಾರ ಸುರಿದ ವ್ಯಾಪಕ ಮಳೆಯಿಂದ ಸಣ್ಣ ಸಸಿಗಳ ಹಂತದಲ್ಲಿರುವ ಹತ್ತಿ, ತೊಗರಿ ಬೆಳೆ ಸಂಪೂರ್ಣ ಜಲಾವೃತವಾಗಿ ಕೊಳೆಯುತ್ತಿವೆ.
ತಾಲೂಕಿನೆಲ್ಲೆಡೆ ಕಳೆದ ಎರಡು ವಾರಗಳಿಂದ ಮಳೆ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿದೆ. ಇಜೇರಿ, ಬಿಳವಾರ, ಅರಳಗುಂಡಗಿ ವ್ಯಾಪ್ತಿಯಲ್ಲಿ ಮಳೆ ಚನ್ನಾಗಿ ಆಗಿ ಬೆಳೆಗಳು ಲಕ್ಷಣವಾಗಿ ಕಾಣುತ್ತಿವೆ. ಇದರಿಂದ ಆ ಭಾಗಗಳಲ್ಲಿ ರೈತರ ಮುಖದಲ್ಲಿಯೂ ಮಂದಹಾಸ ಮೂಡುವಂತಾಗಿತ್ತು. ಒಂದು ಗಂಟೆಗೂ ಹೆಚ್ಚು ಸಮಯ ಬಿದ್ದ ಮಳೆ ರೈತರಲ್ಲಿ ತೀವ್ರ ಆತಂಕವನ್ನುಂಟು ಮಾಡಿದೆ. ಒಂದುವರೆ ತಿಂಗಳಿನ ಬೆಳೆಗಳಲ್ಲಿ ರೈತರು ಈಗಾಗಲೇ ಒಂದು ಬಾರಿ ಕಳೆ ಕೀಳಿಸಿದ್ದಾರೆ. ಇನ್ನೇನು ರಸಗೊಬ್ಬರ ಕೊಡಬೇಕೆನ್ನುವಷ್ಟರಲ್ಲಿ ಕಳೆದ ಎರಡು ದಿನಗಳಿಂದ ಬೀಳುತ್ತಿರುವ ಆಲಿಕಲ್ಲು ಮಳೆ ಕೃಷಿ ಚಟುವಟಿಕೆಗಳಿಗೆ ತಡೆ ನೀಡಿ, ರೈತರು ಕೈಕಟ್ಟಿ ಕುಳಿತು ಕೊಳ್ಳುವಂತೆ ಮಾಡಿದೆ.
ಇಲ್ಲಿಗೆ ಮಳೆ ಸರಿದು ಬಿಸಿಲು ಬಿದ್ದರೆ ಮಾತ್ರ ಅರ್ಧ ಬೆಳೆಯಾದರೂ ಉಳಿಯುತ್ತವೆ. ಇಲ್ಲವಾದರೆ ಸಂಪೂರ್ಣ ಬೆಳೆ ಅತಿಯಾದ ನೀರು ನಿಂತಿದ್ದರ ಪರಿಣಾವಾಗಿ ಕೊಳೆತು ಹೋಗುತ್ತವೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್
MUST WATCH
ಹೊಸ ಸೇರ್ಪಡೆ
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ
Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್