ಧರ್ಮ, ದೇವರು, ಹಿಂದುತ್ವ ಯಾರದೋ ಆಸ್ತಿಯಲ್ಲ: ಡಿ ಕೆ ಶಿವಕುಮಾರ್ ವಾಗ್ದಾಳಿ
Team Udayavani, Jan 30, 2020, 3:04 PM IST
ಕಲಬುರಗಿ: ಧರ್ಮ, ದೇವರು, ಹಿಂದುತ್ವ ಯಾರ ಆಸ್ತಿಯಲ್ಲ. ಆದರೆ ಅದನ್ನು ಕೆಲವರು ತಮ್ಮ ಆಸ್ತಿ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.
ಗಾಣಗಾಪುರ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಂಗ್ರೆಸ್ ನಾಯಕ ಎಂ.ಬಿ.ಪಾಟೀಲರ ಮಾರ್ಮಿಕ ಟ್ವೀಟ್ ಕುರಿತಾಗಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿ, ಅದು ಹಾದಿ ಬೀದಿಯಲ್ಲಿ ಮಾತನಾಡುವ ಪೋಸ್ಟ್ ಅಲ್ಲ ಎಂದು ಹೇಳಿದರು. ಯಾರಾದರೂ ಅಸಮಾಧಾನ ಪಟ್ಟಿದ್ದರೆ, ಅವರನ್ನೇ ಕೇಳಿ ಎಂದರು,
ತಮ್ಮ ಪರವಾಗಿ ಪ್ರತಿಭಟನೆ ಸಂದರ್ಭದಲ್ಲಿ ಹಾನಿ ವಿಚಾರವಾಗಿ ಮಾತನಾಡಿದ ಡಿಕೆಶಿ, ಯಾರು ಕೋರ್ಟ್ ಗೆ ಪಿಐಎಲ್ ಹಾಕಿಸಿದ್ದಾರೆ, ಯಾವ ಪಾರ್ಟಿ, ಯಾವ ವ್ಯಕ್ತಿ ಅದರ ಹಿಂದೆ ಇದ್ದಾರೆ ಅಂತ ಗೊತ್ತು. ಬೆಂಗಳೂರಿಗೆ ಹೋದ ಮೇಲೆ ಅದನ್ನು ನೋಡುತ್ತೇನೆ ಎಂದರು.
ಪ್ರತಿಭಟನೆ ಸಂದರ್ಭದಲ್ಲಿ ನಾನು ಕೋರ್ಟ್ ಕಸ್ಟಡಿಯಲ್ಲಿದ್ದೆ. ಪಿಐಎಲ್ ಹಾಕಿಸಿ, ಹಾನಿ ಬಗ್ಗೆ ಇಷ್ಟೊಂದು ಬೇಗ ವರದಿ ಕೊಟ್ಟಿದ್ದಾರೆ. ಇದರಲ್ಲಿ ರಾಜಕಾರಣವಾಗುತ್ತಿದೆ. ನನಗೆ ಯಾವ ಸಂಕಷ್ಟವಿಲ್ಲ. ಆದರೆ ನನಗೆ ತೊಂದರೆ ಕೊಡುವದೇ ಕೆಲವರಿಗೆ ಖುಷಿ. ಹೀಗಾಗಿ ತೊಂದರೆ ಕೊಡುತ್ತಾ ಇರುತ್ತಾರೆ ಎಂದು ಕುಟುಕಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Odisha ಕಾಲೇಜಿನ ವಿಡಿಯೋ ಉಡುಪಿಯದ್ದು ಎಂದು ವೈರಲ್: ಕೇಸ್ ದಾಖಲು
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ