ಕಲಬೆರಕೆ ಸೇಂದಿ ಪತ್ತೆ: ಇಬ್ಬರ ಬಂಧನ
Team Udayavani, Mar 8, 2017, 3:14 PM IST
ಚಿತ್ತಾಪುರ: ಮನೆಯೊಂದರಲ್ಲಿ ಕಲಬೆರಕೆ ಸೇಂದಿ ಮಾರಲಾಗುತ್ತಿದೆ ಎನ್ನುವ ಮಾಹಿತಿ ಆಧರಿಸಿ ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ದಾಳಿ ನಡೆಸಿ ಇಬ್ಬರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಪಟ್ಟಣದ ಇಂದಿರಾ ನಗರ, ಶಹಾಬಾದ ಸ್ಟೇಷನ್ ತಾಂಡಾದ ಚುನ್ನಾಭಟ್ಟಿ ಏರಿಯಾದಲ್ಲಿ ಅಬಕಾರಿ ಉಪ ಅಧೀಕ್ಷಕ ಜಾಡ್ಸನ್ ಜೀವಕುಮಾರ, ಅಬಕಾರಿ ನಿರೀಕ್ಷರಾದ ದೊಡ್ಡಪ್ಪ ಹೆಬಳೆ, ಕೇದರನಾಥ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.
ಪಟ್ಟಣದ ಇಂದಿರಾ ನಗರದ ಮನೆಯೊಂದರಲ್ಲಿ ಸಂಜು ಗುತ್ತೇದಾರ ಹಾಗೂ ಶಹಾಬಾದ ಸ್ಟೇಷನ್ ತಾಂಡಾದ ಚುನ್ನಾಭಟ್ಟಿ ಏರಿಯಾದ ಮನೆಯೊಂದರಲ್ಲಿ ಶಿವಾನಂದ ಗುತ್ತೇದಾರ ಎನ್ನುವರು ಕಲಬೆರಕೆ ಸೇಂದಿ ಮಾರಾಟ ಮಾಡುತ್ತಿದ್ದರು.
ಇಬ್ಬರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಶಹಾಬಾದನ ಶಾಂತಾಬಾಯಿ ಶಿವಾನಂದ ಗುತ್ತೇದಾರ, ಲಾಡ್ಲಾಪುರದ ಶಂಕ್ರಮ್ಮ ಸಾಬಯ್ಯ ಗುತ್ತೇದಾರ, ನಾಲವಾರದ ಕುಂಬಾರಹಳ್ಳಿ ಮೀನಾಕ್ಷಿ ಸುರೇಶ ಪರಾರಿಯಾಗಿದ್ದಾರೆ.
ಬಂಧಿತ ಆರೋಪಿಗಳಾದ ಸಂಜು ಗುತ್ತೇದಾರ ಅವರಿಂದ 25 ಲೀಟರ್, ಶಿವಾನಂದ ಗುತ್ತೇದಾರ ಅವರಿಂದ 50 ಲೀಟರ್, ಪರಾರಿಯಾದ ಶಹಾಬಾದ್ನ ಶಾಂತಾಬಾಯಿ ಶಿವಾನಂದ ಗುತ್ತೇದಾರ, ಶಂಕ್ರಮ್ಮ ಸಾಬಯ್ಯ ಗುತ್ತೇದಾರ ಅವರಿಂದ 40 ಲೀಟರ್, ಮೀನಾಕ್ಷಿ ಸುರೇಶ ಅವರಿಂದ 10 ಲೀಟರ್ ಕಲಬೆರಕೆ ಸೇಂದಿ ಜಪ್ತಿ ಮಾಡಿಕೊಂಡಿದ್ದಾರೆ.
ದಾಳಿಯಲ್ಲಿ ಅಬಕಾರಿ ಸಬ್ ಇನ್ಸ್ಪೆಕ್ಟರ್ ಶಬ್ಬೀರ ಮೀಯ್ನಾ, ಧನರಾಜ, ಮಹ್ಮದ ಇಮಾಮ್, ಕಲ್ಯಾಣಿ, ಶಿವಾನಂದ, ನಾಗಪ್ಪ, ಸಿದ್ದಣ್ಣಗೌಡ, ಶರಣು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಶೋಕಿಗಾಗಿ ನಕಲಿ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್
Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೆವು?: ಖಂಡ್ರೆ
Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ
MUST WATCH
ಹೊಸ ಸೇರ್ಪಡೆ
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್
Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿಯಾದ ಜಗದೀಶ್ ಶೆಟ್ಟರ್
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ