ದತ್ತ ಮಂದಿರದಲ್ಲಿ ಗೋಪಾಳ ಕಾವಲಿ
Team Udayavani, Feb 14, 2020, 10:55 AM IST
ಅಫಜಲಪುರ: ದೇವಲಗಾಣಗಾಪುರದ ದತ್ತ ದೇವಸ್ಥಾನದಲ್ಲಿ ಗುರುವಾರ ಪ್ರತಿಪದ ದಿನದಂದು ದತ್ತ ಮಹಾರಾಜರು ಶ್ರೀಶೈಲದ ಕದಳಿ ವನಕ್ಕೆ ಪ್ರಯಾಣ ಬೆಳೆಸಿದ ಪ್ರಯುಕ್ತ “ಗೋಪಾಳ ಕಾವಲಿ’ ನಡೆದಿದ್ದು, ಸಾವಿರಾರು ಭಕ್ತರು ಪಾಲ್ಗೊಂಡು ದರ್ಶನ ಪಡೆದರು.
ಗುರುವಾರ ಬೆಳಗಿನ ಜಾವ 2 ಗಂಟೆಗೆ ಕಾಕಡಾರತಿ, ನಿರ್ಗುಣ ಪಾದುಕೆ ಪೂಜೆ, ಪಾಲಕರಿ ಪೂಜಾರಿಗಳಿಂದ ಚಂದನ ಲೇಪನ, 5:30ಕ್ಕೆ ಮಹಾ ಮಂಗಳಾರತಿ, ನಂತರ ಭಕ್ತರಿಗೆ ಪಾದುಕೆಗಳ ದರ್ಶನ, 10 ಗಂಟೆಗೆ ಮಹಾ ಮಂಗಳಾರತಿ, 12 ಗಂಟೆಗೆ ಗೋಪಾಳ ಕಾವಲಿ (ಮೊಸರು ಗಡಿಗೆ ಒಡೆಯುವುದು) 12:30ಕ್ಕೆ ಪಲ್ಲಕ್ಕಿ ಉತ್ಸವವು ಅಪಾರ ಭಕ್ತರೊಂದಿಗೆ ರುದ್ರಪಾದ ತೀರ್ಥಕ್ಕೆ ತೆರಳಿ ಪುಣ್ಯಸ್ನಾನ ನಡೆಯಿತು.
ಪುಣ್ಯಸ್ನಾನ ಬಳಿಕ ಮಧ್ಯಾಹ್ನ 3ಗಂಟೆಗೆ ದೇವಸ್ಥಾನಕ್ಕೆ ಮರಳಿ ಪಲ್ಲಕ್ಕಿ ಬಂತು. ಈ ಎಲ್ಲ ಕಾರ್ಯಕ್ರಮಗಳಲ್ಲಿ ಸೀಮಾಂಧ್ರ, ತೆಲಂಗಾಣ, ಮಹಾರಾಷ್ಟ್ರ, ಕೇರಳ, ಗೋವಾ, ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧ ಮೂಲೆಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು.
ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ, ಮುಖಂಡ ಮಹಾದೇವ ಗುತ್ತೇದಾರ, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಕೆ.ಜಿ. ಬಿರಾದಾರ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಶೋಕಿಗಾಗಿ ನಕಲಿ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್
Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೆವು?: ಖಂಡ್ರೆ
Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ