ಸವಿತಾ ಪೀಠದಿಂದ ದೇಸಿ ಹಸು ಹಾಲೋತ್ಪನ್ನ ಕೇಂದ್ರ
Team Udayavani, Sep 22, 2022, 2:27 PM IST
ವಾಡಿ: ಅವಸಾನದ ಅಂಚಿನೆಡೆಗೆ ಸಾಗುತ್ತಿರುವ ದೇಸಿ ತಳಿ ಹಸುಗಳ ಅಭಿವೃದ್ಧಿ ದೃಷ್ಟಿಕೋನದಿಂದ ಮಹರ್ಷಿ ಸವಿತಾ ಪೀಠದಿಂದ ಜಿಲ್ಲೆಯಲ್ಲಿ ಹಾಲು ಖರೀದಿ ಕೇಂದ್ರಗಳು ಸೇರಿದಂತೆ ಕೊಂಚೂರಿನಲ್ಲಿ ಹಾಲಿನ ಉತ್ಪನ್ನ ಘಟಕ ಸ್ಥಾಪಿಸಲಾಗುತ್ತಿದೆ ಎಂದು ಕೊಂಚೂರು ಮಹರ್ಷಿ ಸವಿತಾ ಪೀಠದ ಪೀಠಾಧ್ಯಕ್ಷ ಶ್ರೀ ಸವಿತಾನಂದ ಸ್ವಾಮೀಜಿ ಪ್ರಕಟಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ಸವಿತಾ ಪೀಠದಿಂದ ಪಕ್ಕಾ ದೇಸಿ ಹಸುಗಳ ಹಾಲು, ಮೊಸರು, ತುಪ್ಪ ತಯಾರಿಸಿ ಪ್ಯಾಕೇಟ್ ರೂಪದಲ್ಲಿ ಗ್ರಾಹಕರಿಗೆ ತಲುಪಿಸುವ ಹಾಗೂ ರೈತರಿಗೆ ಉದ್ಯೋಗ ಒದಗಿಸಿ ಸ್ವಾವಲಂಬಿಗಳನ್ನಾಗಿಸುವ ತಮ್ಮ ಕನಸಿನ ಯೋಜನೆಯನ್ನು ತೆರೆದಿಟ್ಟರು. ಕಲಬುರಗಿ ಡಿಸಿಸಿ ಬ್ಯಾಂಕ್ ಕಾಮಧೇನು ಎನ್ನುವ ಯೋಜನೆ ಜಾರಿಗೆ ತಂದಿದೆ. ಆಸಕ್ತ ಪ್ರತಿಯೊಬ್ಬ ರೈತನಿಗೆ ಎರಡು ಹಸುಗಳನ್ನು ಖರೀದಿಸಲು 2ಲಕ್ಷ ರೂ. ಸಾಲ ಸೌಲಭ್ಯ ನೀಡುತ್ತಿದೆ. ಇದನ್ನು ಬಳಸಿಕೊಂಡು ಸವಿತಾ ಪೀಠ ರಾಜಸ್ಥಾನದಿಂದ ರಾಟಿ ಹಸು ತಳಿಗಳನ್ನು ತಂದು ರೈತರಿಗೆ ನೀಡಲು ಮುಂದಾಗಿದೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜಕುಮಾರ ಪಾಟೀಲ ಹಾಗೂ ಅಧಿಕಾರಿಗಳು ಸವಿತಾ ಪೀಠಕ್ಕೆ ಸಹಕಾರ ನೀಡುತ್ತಿದ್ದಾರೆ ಎಂದರು.
ಆರಂಭದಲ್ಲಿ ಈ ಯೋಜನೆಯನ್ನು ಚಿತ್ತಾಪುರ ತಾಲೂಕಿನಿಂದ ಶುರು ಮಾಡಲಾಗುತ್ತಿದೆ. ಈಗಾಗಲೇ 200 ರೈತರಿಂದ ಅರ್ಜಿಗಳು ಬಂದಿವೆ. ಸದ್ಯ ಹಳಕರ್ಟಿ, ಕಮರವಾಡಿ, ಕರದಾಳ ಗ್ರಾಪಂ ವ್ಯಾಪ್ತಿಯ ರೈತರಿಗೆ ಒಂದು ವಾರದೊಳಗಾಗಿ ಹಸುಗಳನ್ನು ವಿತರಿಸಲಾಗುತ್ತಿದೆ. ಪ್ರತಿ ಐವತ್ತು ರೈತರಿರುವ ಹಳ್ಳಿಗಳಲ್ಲಿ ಹಾಲು ಸಂಗ್ರಹ ಕೇಂದ್ರ ತೆರೆಯಲು ಸವಿತಾ ಪೀಠ ಈಗಾಗಲೇ ಯೋಜನೆ ರೂಪಿಸಿದೆ. ತಿಂಗಳಲ್ಲಿ ಕೇಂದ್ರಗಳು ಹಾಲು ಖರೀದಿಗೆ ಸಿದ್ಧವಿರಲಿವೆ. ಎಮ್ಮೆ ಮತ್ತು ವಿದೇಶಿ ಜರ್ಸಿ ಹಸುಗಳನ್ನು ಹೊರತುಪಡಿಸಿ ದೇಸಿ ಹಸುಗಳನ್ನು ಸಾಕುವ ರೈತರಿಂದ ಮಾತ್ರ ಲೀಟರ್ ಹಾಲಿಗೆ 50ರೂ., ಕೆಜಿ ಸೆಗಣಿಗೆ 2ರೂ., ಲೀಟರ್ ಗೋಮೂತ್ರಕ್ಕೆ 10ರೂ. ದರ ನೀಡಿ ಖರೀದಿಸುತ್ತೇವೆ. ಹಾಲಿನಿಂದ ವಿವಿಧ ಉತ್ಪನ್ನಗಳನ್ನು ತಯಾರಿಸಿದರೆ, ಗೋಮಯ ಮತ್ತು ಗೋಮೂತ್ರದಿಂದ ಪಂಚಗವ್ಯ ಗಥ ತಯಾರಿಸಿ ಕೃಷಿ ಬಳಕೆಗಾಗಿ ಮರಳಿ ರೈತರಿಗೆ ನೀಡಲಾಗುತ್ತದೆ ಎಂದು ವಿವರಿಸಿದರು.
ಪ್ರತಿಯೊಬ್ಬ ರೈತನ ಮನೆ ಎದುರು ದೇಸಿ ತಳಿ ಗೋವುಗಳು ಕಾಣಬೇಕು. ರಾಜಸ್ಥಾನದಲ್ಲಿ ಕಂಡು ಬರುವ ರಾಟಿ ತಳಿ ಹಸುಗಳು ದಿನಕ್ಕೆ 14ರಿಂದ 20 ಲೀಟರ್ ಹಾಲು ಕೊಡುತ್ತವೆ. ಅಲ್ಲದೇ ಕಲಬುರಗಿಯ ಬಿಸಿಲ ತಾಪದಲ್ಲೂ ಆರೋಗ್ಯವಾಗಿ ಇರುತ್ತವೆ. ಹೀಗಾಗಿ ರಾಟಿ ತಳಿ ಹಸುವನ್ನು ರೈತರಿಗೆ ನೀಡಲು ಆಯ್ಕೆ ಮಾಡಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಕೃಷಿ ಚೇತರಿಕೆ, ಆರೋಗ್ಯ ದೃಷ್ಟಿಯಿಂದ ಹಸುವಿನ ಗೋಮೂತ್ರ, ಗೋವಿನ ಸೆಗಣಿಗೆ ಭಾರಿ ಬೇಡಿಕೆ ಬರುವಂತೆ ಸವಿತಾ ಪೀಠ ಮಾಡಲಿದೆ. –ಶ್ರೀ ಸವಿತಾನಂದ ಸ್ವಾಮೀಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್
ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ
Kalaburagi; ಮೋದಿ ಗ್ಯಾರಂಟಿಗೆ ನೋ ವಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ
Kalaburagi:ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ
Lok Sabha Elections; ಸೋಲಿನ ಭೀತಿಯಿಂದ ಸ್ಪರ್ಧೆ ಮಾಡದ ಖರ್ಗೆ: ಅಗರವಾಲ್
MUST WATCH
ಹೊಸ ಸೇರ್ಪಡೆ
LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ
Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ
UV Fusion: ಆಕೆಗೂ ಒಂದು ಮನಸ್ಸಿದೆ
Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್ ಕಲ್ಯಾಣ್!
Amethi; ಸ್ಮೃತಿ ಇರಾನಿ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದ ವಿಕಾಸ್ ಅಗ್ರಹಾರಿ