250 ಮನೆ ನಿರ್ಮಾಣಕ್ಕೆ ಶಾಸಕ ಗುತ್ತೇದಾರ ಚಾಲನೆ
Team Udayavani, Feb 5, 2019, 6:58 AM IST
ಆಳಂದ: ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ ಪಟ್ಟಣದ ಕೊಳಚೆ ಪ್ರದೇಶದ ನಿವಾಸಿಗಳಿಗಾಗಿ 250 ಮನೆ ನಿರ್ಮಾಣಕ್ಕೆ ಶಾಸಕ ಸುಭಾಷ ಗುತ್ತೇದಾರ ಭೂಮಿಪೂಜೆ ಮಾಡಿ ಕಾಮಗಾರಿಗೆ ಚಾಲನೆ ನೀಡಿದರು.
ಹತ್ತ್ಯಾನ ಗಲ್ಲಿ, ಗೊಲ್ಲರ ಬಡಾವಣೆ ಹಾಗೂ ಕರ್ಪೂರಲಿಂಗೇಶ್ವರ ಬಡಾವಣೆಯಲ್ಲಿ ಮನೆ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಿದ ಶಾಸಕರು, ಫಲಾನುಭವಿಗಳ ವಂತಿಗೆ ಭರಿಸಿದ ಬಳಿಕ ಗುತ್ತಿಗೆದಾರರು ಗುಣಮಟ್ಟದ ಮನೆ ನಿರ್ಮಿಸಿಕೊಟ್ಟು ಬಡವರಿಗೆ ಅನುಕೂಲ ಒದಗಿಸಬೇಕು ಎಂದು ತಾಕೀತು ಮಾಡಿದರು.
ಸಾವಿರಾರು ಬಡವರು ಮನೆ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಹಂತ, ಹಂತವಾಗಿ ಮನೆಗಳ ನಿರ್ಮಾಣಕ್ಕೆ ಸರ್ಕಾರದ ಅನುಮತಿ ದೊರೆತಿದೆ. ಎಲ್ಲ ಬಡವರಿಗೂ ಈ ಯೋಜನೆಯಲ್ಲಿ ಮನೆ ದೊರೆಯುಂತಾಗಬೇಕು ಎಂದು ಹೇಳಿದರು.
ಮನೆ ಕಟ್ಟಲು 4.98 ಲಕ್ಷ ರೂ. ಮಂಜೂರಾಗಿದೆ. ಅದರಲ್ಲಿ ಮೂರು ಕಂತುಗಳಲ್ಲಿ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಜನಾಂಗದ ಫಲಾನುಭವಿಗಳು 42 ಸಾವಿರ ಹಾಗೂ ಸಾಮಾನ್ಯ ವರ್ಗದದ ಫಲಾನುಭವಿಗಳು 74 ಸಾವಿರ ವಂತಿಗೆ ಹಣ ಭರಿಸಿದರೆ ಒಂದು ಬಿಎಚ್ಕೆ (ಅಡುಗೆ ಕೋಣೆ 1, ವಿಶ್ರಾಂತಿ ಕೋಣೆ 1, ಹಾಲ್, ಶೌಚಾಲಯ ಹಾಗೂ ಸ್ನಾನಗೃಹ) ಮನೆ ನಿರ್ಮಿಸುವ ಯೋಜನೆ ಇದಾಗಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ 1.50 ಲಕ್ಷ ರೂ. ರಾಜ್ಯ ಸರ್ಕಾರದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಡಕ್ಕೆ 2 ಲಕ್ಷ ಹಾಗೂ ಫಲಾನುಭವಿಗಳಿಗೆ ಬಾಕಿ ಉಳಿದ ಮೊತ್ತ 1.48ಲಕ್ಷ ರೂ. ಭರಿಸಬೇಕಾಗಿದ್ದು, ಈ ಪೈಕಿ ಫಲಾನುಭವಿಗಳು ಶೇ 10ರಂತೆ 49, 800 ರೂ. ಮೊತ್ತದ ಬ್ಯಾಂಕ್ ಡಿಡಿ ರೂಪದಲ್ಲಿ ಹಾಗೂ ಬಾಕಿ ಉಳಿದ ಮೊತ್ತ 98,200 ರೂ. ಬ್ಯಾಂಕ್ನಿಂದ ಸಾಲ ಪಡೆಯಬೇಕು ಹಾಗೂ ಇತರೆ ವರ್ಗಕ್ಕೆ ಕೇಂದ್ರ ಸರ್ಕಾರದಿಂದ 1.50 ಲಕ್ಷ ರೂ. ಮಾತ್ರ, ರಾಜ್ಯದಿಂದ 1.20ಲಕ್ಷ ರೂ. ಹಾಗೂ ಫಲಾನುಭವಿಗಳಿಗೆ ಬಾಕಿ ಉಳಿದ ಮೊತ್ತ 2.28ಲಕ್ಷ ರೂ. ಭರಿಸತಕ್ಕದ್ದು, ಈ ಪೈಕಿ ಫಲಾನುಭವಿ ಶೇ.15ರಷ್ಟು 74,700 ರೂ. ಡಿಡಿ ರೂಪದಲ್ಲಿ ಹಾಗೂ ಬಾಕಿ ಉಳಿದ ರೂಪಾಯಿ 1,53,300 ಬ್ಯಾಂಕ್ನಿಂದ ಸಾಲ ಪಡೆದು ಆಯುಕ್ತರು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಬೆಂಗಳೂರು ಇವರಿಗೆ ಸಲ್ಲಿಸುವ ನಿಯಮದ ಕುರಿತು ಬಡವರಿಗೆ ಪರಿಣಿತರ ಮಾಹಿತಿ ನೀಡಿ ಅನುಕೂಲ ಒದಗಿಸಬೇಕು ಎಂದು ಹೇಳಿದರು.
ಪುರಸಭೆ ಸದಸ್ಯ ಶ್ರೀಶೈಲ ಪಾಟೀಲ, ಮಾಜಿ ಅಧ್ಯಕ್ಷ ಅಂಬಾದಾಸ ಪವಾರ, ಬಿಜೆಪಿ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗುಳೆ, ಮುಖಂಡ ಶ್ರೀಶೈಲ ಖಜೂರಿ, ಶರಣು ನಾಗದೆ, ಬಾಬುರಾವ ರಡ್ಡಿ, ಶಿವುಪುತ್ರ ಹತ್ತಿ, ಮಹಾಂತೇಶ ಡೊಳ್ಳೆ, ಹಣಮಂತರಾವ ಪಾಟೀಲ, ಶಿವಯ್ಯ ಸ್ವಾಮಿ, ಚಂದ್ರಶೇಖರ ಬುಕ್ಕೆ, ಈರಣ್ಣ ವರನಾಳೆ, ಸೋಮಶೇಖರ ಬಿರಾದಾರ, ಶ್ರೀಕಾಂತ ಹತ್ತಿ, ಹುಬ್ಬಣ್ಣ ನಾಗದೆ, ಸಾಗರ ಬೆಲಸೂರೆ, ಶಿವುಕುಮಾರ ಪರಗೆ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್
MUST WATCH
ಹೊಸ ಸೇರ್ಪಡೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್