ಚುನಾವಣೆ ಯುವಜನತೆಗೆ ಕೊಡುಗ
Team Udayavani, Jan 19, 2018, 11:24 AM IST
ಕಲಬುರಗಿ: ಸರಕಾರಗಳು ಉದ್ಯೋಗ ಸೃಷ್ಟಿಗೆ ಪ್ರಯತ್ನಿಸದೇ ಕೇವಲ ಭರವಸೆ ನೀಡಿ ನಮ್ಮ ದಾರಿ ತಪ್ಪಿಸಿವೆ. ಆದ್ದರಿಂದ ಈ ಬಾರಿ ನನ್ನ ಮತ ಉದ್ಯೋಗಕ್ಕಾಗಿ ಎನ್ನುವ ಪ್ರಮಾಣದೊಂದಿಗೆ ನಿರುದ್ಯೋಗಿ ಯುವಕರು ಮುಂದಿನ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಬೇಕು ಎಂದು ಬೆಂಗಳೂರಿನ ಲೇಖಕ ಬಿ. ಶ್ರೀಪಾದ ಭಟ್ ಹೇಳಿದರು.
ಇಲ್ಲಿನ ಕನ್ನಡ ಭವನದಲ್ಲಿ ಉದ್ಯೋಗಕ್ಕಾಗಿ ಯುವಜನರು ವೇದಿಕೆ ಹಮ್ಮಿಕೊಂಡಿದ್ದ ಉದ್ಯೋಗ ಸೃಷ್ಟಿಯ ಸಾಧ್ಯತೆ ಮತ್ತು ಸವಾಲುಗಳು ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
ಇವತ್ತಿನ ದೊಡ್ಡ ಸಮಸ್ಯೆಗಳಲ್ಲಿ ನಿದ್ಯೋಗವು ಒಂದಾಗಿದೆ. ಆಡಳಿತಕ್ಕೆ ಬರುವ ಸರಕಾರಗಳು, ಮತ ಕೇಳುವ ಪಕ್ಷಗಳು ಯುವಜನರನ್ನು ಸ್ಪಂದಿಸಲು ವಿಫಲವಾಗಿವೆ. ಹೀಗಾಗಿ ಇಂದಿನ ತುರ್ತು ಅವಶ್ಯಕತೆಗಳಲ್ಲಿ ಉದ್ಯೋಗ ಪಡೆದುಕೊಳ್ಳುವುದು ಒಂದಾಗಿದೆ. ಈ ನಿಟ್ಟಿನಲ್ಲಿ ಮುಂದಿನ ಚುನಾವಣೆ ಯುವಜನತೆಗೆ ದೊಡ್ಡ ಕೊಡುಗೆಯಾಗಿದೆ. ಅದನ್ನು ಸಮರ್ಥವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಯುವಕರು ಹಾಗೂ ಪಾಲಕರು ನಿರ್ಣಾಯಕ ನಿರ್ಧಾರ ಪ್ರಕಟಿಸಬೇಕು ಎಂದರು.
ಉದ್ಯೋಗ ಸಿಗದ ಯುವಜನರು ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಇದರಿಂದ ಭವಿಷ್ಯದಲ್ಲಿ ದೊಡ್ಡ ಅಪಾಯವಿದೆ. ಇನ್ನೊಂದೆಡೆ ಕೌಶಲ್ಯಾಭಿವೃದ್ಧಿ ಸಚಿವರೇ ತಮ್ಮ ಖಾತೆಯನ್ನು ನೀರಿಲ್ಲದ ಬಾವಿಗೆ ಹೋಲಿಸಿದ್ದಾರೆ. ಅದರಿಂದ ಅವರ ಬೇಜವಾಬ್ದಾರಿ ಗೊತ್ತಾಗುತ್ತದೆ. ಹೀಗಾಗಿ ಈ ಸಮಸ್ಯೆಗಳಿಂದ ಮುಕ್ತವಾಗಲು
ಚುನಾವಣೆಯನ್ನು ಅಸ್ತ್ರವಾಗಿಸಬೇಕು ಎಂದರು.
ವೇದಿಕೆ ಸಂಚಾಲಕ ಮುತ್ತುರಾಜು ಮಾತನಾಡಿ, ನಾವು ಕೈಗೊಂಡಿರುವ ಈ ಆಂದೋಲನದಿಂದ ಯುವ ಜನರಲ್ಲಿ ಚಿಂತನೆಗಳು ಶುರುವಾಗಿವೆ. ಈ ಬಾರಿ ಚುನಾವಣೆ ಜಾತಿ, ಧರ್ಮ, ಹಣ ಹಾಗೂ ತಂತ್ರಗಳನ್ನು ಹೊರತುಪಡಿಸಿ ಕೇವಲ ಉದ್ಯೋಗ ಮತ್ತು ಅವಕಾಶಗಳಿಗಾಗಿ ನಡೆಯಬೇಕು.
ಇದು ಭಾರತದ, ಕರ್ನಾಟಕದ ಭವಿಷ್ಯ ಬದಲಿಸಲಿದೆ. ಆಂದೋಲನದ ಅಂಗವಾಗಿ 100 ವಿಧಾನಸಭೆ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಸಹಿ ಸಂಗ್ರಹವನ್ನು ಮಾಡಲಾಗುತ್ತಿದೆ. ಈಗಾಗಲೇ ಕ್ಷೇತ್ರಗಳಿಗೆ ನುಗ್ಗಲು ಎರಡು ಸಾವಿರ ಕಾರ್ಯಕರ್ತರು ತಯಾರಾಗಿದ್ದಾರೆ. ಲಕ್ಷ ಯುವಜನರನ್ನು ವೇದಿಕೆಯ ಸದಸ್ಯರನ್ನಾಗಿಸಲು ಯೋಜಿಸಲಾಗಿದೆ. ಫೆ.18ರಂದು ಬೆಂಗಳೂರಿನಲ್ಲಿ ಯುವ ಅಧಿವೇಶನದಲ್ಲಿ ಶಕ್ತಿ ಪ್ರದರ್ಶನ ಮಾಡಲಾಗುವುದು ಎಂದರು. ಸೈಬಣ್ಣಾ ಜಮಾದಾರ ನಿರೂಪಿಸಿದರು. ಜಿಲ್ಲಾ ಸಂಚಾಲಕ ರಾಜೇಂದ್ರ ರಾಜವಾಳ ಸ್ವಾಗತಿಸಿದರು. ನಿರುದ್ಯೋಗಿ ಯುವಕ, ಯುವತಿಯರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
MUST WATCH
ಹೊಸ ಸೇರ್ಪಡೆ
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Bengaluru: ಕದಂಬ ಹೋಟೆಲ್ ಸ್ಫೋಟ ಮಾಡುವುದಾಗಿ ಬೆದರಿಕೆ