ಇನ್ಮುಂದೆ ಪಾಲಿಕೆಯಿಂದ ನಿತ್ಯವೂ ಕಸ ಸಂಗ್ರಹ


Team Udayavani, Jun 29, 2021, 4:08 PM IST

wಎ್ಎರ್ಎರ್ರಗಗಬ

ಕಲಬುರಗಿ: ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕಸ ಸಂಗ್ರಹ ಮತ್ತು ವಿಲೇವಾರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪಾಲಿಕೆಯು ಐದು ಕೋಟಿಗೂ ಅಧಿಕ ವೆಚ್ಚದಲ್ಲಿ ಹೊಸ ವಾಹನಗಳನ್ನು ಖರೀದಿಸುತ್ತಿದೆ. ಹೀಗಾಗಿ ಶೀಘ್ರವೇ ಎಲ್ಲ ಬಡಾವಣೆಗಳಲ್ಲೂ ಮನೆ-ಮನೆಯಿಂದ ನಿತ್ಯ ಕಸ ಸಂಗ್ರಹ ಕಾರ್ಯ ನಡೆಯಲಿದೆ.

ನಗರದಲ್ಲಿ ಜನ ಸಂಖ್ಯೆ ಮತ್ತು ಜನ ವಸತಿ ಪ್ರದೇಶಗಳು ಹೆಚ್ಚುತ್ತಿದ್ದಂತೆ ಘನತ್ಯಾಜ್ಯ ಕೂಡ ಅಧಿಕವಾಗಿ ಉತ್ಪತ್ತಿ ಆಗುತ್ತಿದೆ. ಇದರ ಸಂಗ್ರಹಕ್ಕಾಗಿಯೇ ಮಹಾನಗರ ಪಾಲಿಕೆಯು ಈಗಾಗಲೇ 80 ವಾಹನಗಳನ್ನು ಬಳಕೆ ಮಾಡುತ್ತಿದೆ. ಆದರೂ, ಹಲವು ಬಡಾವಣೆಗಳಲ್ಲಿ ನಿತ್ಯ ಕಸ ಸಂಗ್ರಹ ಕಾರ್ಯಕ್ಕೆ ಸಾಲುತ್ತಿಲ್ಲ. ಆದ್ದರಿಂದ ಅಧಿಕಾರಿಗಳು ಹೊಸ ವಾಹನಗಳ ಖರೀದಿ ಮಾಡುತ್ತಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ದಿನವೂ 200 ಟನ್‌ ತ್ಯಾಜ್ಯ ಸಂಗ್ರಹವಾಗುತ್ತಿದೆ.

ಕೆಲ ವಾರ್ಡ್‌ಗಳು ಮತ್ತು ಬಡಾವಣೆಗಳಲ್ಲಿ ಈಗಾಗಲೇ ನಿತ್ಯ ಕಸ ಸಂಗ್ರಹ ಮಾಡಲಾಗುತ್ತಿದೆ. ಅನೇಕ ಕಡೆಗಳಲ್ಲಿ ಎರಡೂ¾ರು ದಿನಗಳಿಗೊಮ್ಮೆ ಸಂಗ್ರಹ ಕಾರ್ಯ ನಡೆಯುತ್ತಿದೆ. ಎಲ್ಲೆಡೆ ಕೂಡ ಅಂದಿನ ಕಸ ಅಂದೇ ಸಂಗ್ರಹ ಮತ್ತು ವಿಲೇವಾರಿ ಮಾಡಬೇಕೆಂಬ ಉದ್ದೇಶದಿಂದ ಒಟ್ಟು ನೂರು ವಾಹನಗಳ ಖರೀದಿಗೆ ಮುಂದಾಗಿದ್ದೇವೆ ಎಂದು ಪಾಲಿಕೆಯ ಆಯಕ್ತ ಸ್ನೇಹಲ್‌ ಸುಧಾಕರ ಲೇಖಂಡೆ “ಉದಯವಾಣಿ’ಗೆ ತಿಳಿಸಿದರು. ಪಾಲಿಕೆಗೆ ಬಂದ ವಾಹನಗಳು: ಹೊಸ ವಾಹನಗಳ ಖರೀದಿ ಪ್ರಕ್ರಿಯೆಯನ್ನು ಪಾಲಿಕೆ ಅಧಿಕಾರಿಗಳು ಈಗಾಗಲೇ ಆರಂಭಿಸಿದ್ದು, ಹಲವು ವಾಹನಗಳು ಪಾಲಿಕೆಗೆ ಬಂದು ಸೇರಿವೆ. ಪಾಲಿಕೆಯಲ್ಲಿ ಸದ್ಯ ಒಟ್ಟಾರೆ 165 ವಾಹನಗಳು ಇವೆ. ಇವುಗಳಲ್ಲಿ 80 ವಾಹನಗಳನ್ನು ಕಸ ಸಂಗ್ರಹಕ್ಕೆ ಬಳಸಲಾಗುತ್ತಿದೆ. ಆದರೆ, ತ್ಯಾಜ್ಯ ಸಂಗ್ರಹಕ್ಕಾಗಿಯೇ 137 ವಾಹನಗಳ ಅಗತ್ಯ ಇದೆ.

ಹೀಗಾಗಿ ಎರಡು ಹಂತದಲ್ಲಿ 66 ಕಸ ಸಂಗ್ರಹ ವಾಹನಗಳ ಖರೀದಿಸಲಾಗುತ್ತಿದೆ. ಇದರಲ್ಲಿ 40 ವಾಹನಗಳು ಬಂದಿದ್ದು, ಆರ್‌ಟಿಓ ಕಚೇರಿ ಕಾರ್ಯ ನಡೆಯುತ್ತಿದೆ ಎನ್ನುತ್ತಾರೆ ಉಪ ಆಯಕ್ತ ಆರ್‌.ಪಿ.ಜಾಧವ್‌. ಕಸ ವಿಲೇವಾರಿ ಹಾಗೂ ಸಂಸ್ಕರಣೆ ಕಾರ್ಯಕ್ಕಾಗಿ ಐದು ಜೆಸಿಬಿಗಳು ಮತ್ತು ಎರಡು ಹಿಟಾಚಿಗಳನ್ನು ಖರೀದಿ ಮಾಡಲಾಗುತ್ತಿದೆ. ಈಗಾಗಲೇ ಎರಡು ಜೆಸಿಬಿ ಮತ್ತು ಒಂದು ಹಿಟಾಚಿ ಉದನೂರು ಕಸ ಸಂಸ್ಕರಣೆ ಕೇಂದ್ರಕ್ಕೆ ಬಂದಿವೆ. ಇದಲ್ಲದೇ, ಹೊಸದಾಗಿ ಐದು ಟಿಪ್ಪರ್‌ಗಳ ಖರೀದಿಗೂ ಆದೇಶ ಮಾಡಲಾಗಿದೆ. ಇವೆಲ್ಲದಕ್ಕೂ 5.50 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದು ಹೇಳಿದರು.

ಜಿಪಿಆರ್‌ಎಸ್‌ ಅವಳಡಿಕೆ: ಕಸ ಸಂಗ್ರಹಕ್ಕೆ ವಾಹನಗಳ ಕೊರತೆಯಿಂದಾಗಿ ಕಾರ್ಮಿಕರ ಕಾರ್ಯಕ್ಷಮತೆ ಕಾಯ್ದುಕೊಳ್ಳಲು ಕೂಡ ಕಷ್ಟವಾಗುತ್ತಿತ್ತು. ವಾಹನಗಳ ಸಂಖ್ಯೆಯೇ ಕಡಿಮೆ ಇದೆ. ನಾವು ಹೇಗೆ ಸಂಗ್ರಹಕ್ಕೆ ಹೋಗುವುದು ಎಂದು ಕೆಲ ಕಾರ್ಮಿಕರು ನೆಪ ಹೇಳುತ್ತಿದ್ದರು. ಆದರೆ, ಈಗ ಹೊಸ ವಾಹನಗಳ ಖರೀದಿಯಿಂದ ಅಗತ್ಯಕ್ಕೆ ತಕ್ಕಷ್ಟು ವಾಹನಗಳು ಲಭ್ಯವಾಗಲಿವೆ. ಜತೆಗೆ ವಾಹನಗಳಿಗೆ ಜಿಪಿಆರ್‌ಎಸ್‌ ತಂತ್ರಜ್ಞಾನ ಅವಳಡಿಕೆಗೂ ಮುಂದಾಗಿದ್ದು, ಇದರಿಂದ ಕಾರ್ಮಿಕರ ಕಾರ್ಯಕ್ಷಮತೆ ಕಾಪಾಡಿಕೊಳ್ಳಲೂ ಪಾಲಿಕೆಗೆ ಅನುಕೂಲವಾಗಲಿವೆ.

ಕಸ ಸಂಗ್ರಹ ಬಳಕೆಯಲ್ಲಿರುವ 80 ವಾಹನಗಳ ಪೈಕಿ ಹಲವು ಹಳೆ ವಾಹನಗಳು ಇವೆ. ಇದರಲ್ಲಿ ಹತ್ತು ಹೆಚ್ಚು ವಾಹನಗಳು ಗುಜರಿಗೆ ಸೇರಲಿವೆ. ಹೊಸ ವಾಹನಗಳ ಆಗಮನದಿಂದ ಸರಾಗವಾಗಿ ಕಸ ಸಂಗ್ರಹ ನಡೆಯಲಿವೆ. ಮೇಲಾಗಿ ಆ ವಾಹನಗಳಿಗೆ ಜಿಪಿಆರ್‌ ಎಸ್‌ ತಂತ್ರಜ್ಞಾನ ಅವಳಡಿಕೆ ಮಾಡಲಾಗುತ್ತಿದ್ದು, ಇದಕ್ಕೆ ಟೆಂಡರ್‌ ಕೂಡ ನೀಡಲಾಗಿದೆ. ನಿತ್ಯ ಒಂದು ವಾಹನದಿಂದ 700ರಿಂದ 900 ಮನೆಗಳ ಸಂಗ್ರಹ ಗುರಿಯನ್ನು ಹೊಂದಲಾಗಿದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು

 

 

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.