ನೀರು ಶುದ್ಧೀಕರಣಕ್ಕೆ ಫಿಲ್ಟರ್‌ ಮೀಡಿಯಾ

ದಶಕದ ನಂತರ ದುರಸ್ತಿಗೊಳ್ಳುತ್ತಿದೆ ಘಟಕ

Team Udayavani, Oct 12, 2020, 4:40 PM IST

ನೀರು ಶುದ್ಧೀಕರಣಕ್ಕೆ ಫಿಲ್ಟರ್‌ ಮೀಡಿಯಾ

ವಾಡಿ: ಪಟ್ಟಣದ ಪುರಸಭೆಗೆ ಸೇರಿದ ಕುಂದನೂರು ಭೀಮಾನದಿ ದಡದ ಜಲ ಶುದ್ಧೀಕರಣ ಘಟಕಕ್ಕೆಮರುಜೀವ ನೀಡಲು ಅಧಿಕಾರಿಗಳುಹಾಗೂ ಜನಪ್ರತಿನಿಧಿಗಳು ಹರಸಾಹಸ ಪಡುತ್ತಿದ್ದಾರೆ.

ಕೆಟ್ಟು ಹೋಗಿದ್ದ ಘಟಕದ ನೀರು ಶುದ್ಧೀಕರಣದ ತುಕ್ಕು ಹಿಡಿದ ಯಂತ್ರಗಳನ್ನು ಬದಲಿ ಹೊಸ ಯಂತ್ರೋಪಕರಣಗಳನ್ನುಅಳವಡಿಸಲಾಗಿದೆ. ಕಳೆದ ಎರಡು ತಿಂಗಳಿಂದ ಶುಚಿತ್ವ ಕಾರ್ಯಮುಂದುವರೆದಿದ್ದು, ವಿವಿಧ ರಾಸಾಯನಿಕ ದಾಸ್ತಾನು ತರಿಸಿಘಟಕದಲ್ಲಿ ಶೇಖರಣೆ ಮಾಡಲಾಗಿದೆ. ಬೃಹತ್‌ ಜಲ ಸಂಗ್ರಹಗಾರಗಳನ್ನುಶುಚಿಗೊಳಿಸಲಾಗಿದೆ. ಕಲುಷಿತನೀರನ್ನು ಶ್ವೇತವರ್ಣಕ್ಕೆ ತಿರುಗಿಸಲು ಪ್ರಮುಖವಾಗಿ ಬೇಕಾದ ಬ್ಲೀಚಿಂಗ್‌ಫೌಡರ್‌ ಮತ್ತು ಆಲಂ ತುಂಡುಗಳರಾಶಿಯೇ ಬಂದು ಬಿದ್ದಿದ್ದು,ಸ್ಥಳೀಯರ ದಶಕಗಳ ಶುದ್ಧ ನೀರಿನಕನಸು ನನಸಾಗುವ ಸಮಯ ಹತ್ತಿರ ಬಂದಂತಾಗಿದೆ.

ಅಗತ್ಯ ರಾಸಾಯನಿಕವಿಲ್ಲದೆ, ಗುಣಮಟ್ಟದ ಯಂತ್ರೋಪಕರಣಗಳು ಇಲ್ಲದೆ ಹಾಗೂ ಟ್ರ್ಯಾಕ್ಟರ್‌ಗಟ್ಟಲೇ ಹೂಳು ತುಂಬಿದ್ದ ನೀರು ಸಂಗ್ರಹಗಾರಗಳ ಶುಚಿತ್ವವಿಲ್ಲದೆ  ನಿರ್ಲಕ್ಷ್ಯಕ್ಕೊಳಗಾಗಿದ್ದ ನೀರು ಶುದ್ಧೀಕರಣ ಘಟಕವೀಗ ನವೀಕರಣ ಗೊಳ್ಳುತ್ತಿದೆ. ಕಾಂಗ್ರೆಸ್‌ನ ಝರೀನಾಬೇಗಂ ಅವರು ಪುರಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಶುದ್ಧ ನೀರಿನ ಘಟಕ ದುರಸ್ತಿಗೆ ಮುಂದಾಗಿರುವುದೇ ಅಗತ್ಯ ಪರಿಕರಗಳು ಖರೀದಿಯಾಗಲು ಸಾಧ್ಯವಾಗಿದೆ ಎನ್ನಬಹುದು. ನೀರು ಫಿಲ್ಟರ್‌ ಮಾಡಲು ಅತ್ಯಗತ್ಯವಾಗಿ ಬೇಕಾದ ನಾಲ್ಕು ರೂಪದ ಮರಳು ಇಷ್ಟುದಿನ ಹೂಳಿನಲ್ಲಿ ಹೂಳಾಗಿ ಹೋಗಿತ್ತು.

ಈಗ ಮತ್ತೆ ಹೊಸದಾಗಿ ಸ್ಯಾಂಡ್‌ ಮೀಡಿಯಾ ತರಿಸಲಾಗಿದ್ದು, ಘಟಕದಲ್ಲಿ ಮರಳು ತುಂಬುವ ಕಾರ್ಯ ನಡೆಯುತ್ತಿದೆ. ಆದಷ್ಟು ಬೇಗ ವಾಡಿ ಪಟ್ಟಣದ ಜನತೆಗೆ ಕುಡಿಯಲು ಅತ್ಯಂತ ಶುದ್ಧ ನೀರು ಸರಬರಾಜು ಮಾಡುತ್ತೇವೆ ಎನ್ನುತ್ತಾರೆ ಮುಖ್ಯಾ ಧಿಕಾರಿ ವಿಠuಲ ಹಾದಿಮನಿಹಾಗೂ ಕಿರಿಯ ಅಭಿಯಂತರರಾಜಕುಮಾರ ಅಕ್ಕಿ ಅವರು. ಇದ್ದೂ ಇಲ್ಲದಂತಿದ್ದ ಜಲ ಶುದ್ಧೀಕರಣ ಘಟಕ ಬಹಳ ವರ್ಷಗಳ ನಂತರ ಹೊಸ ರೂಪ ಪಡೆದುಕೊಳ್ಳುತ್ತಿರುವುದು ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ.

ಫಿಲ್ಟರ್‌ ನೀರು ಉತ್ಪತ್ತಿಯಾಗಲು ಯೋಗ್ಯವಲ್ಲದಷ್ಟು ಘಟಕ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಯಾವುದೇ ಯಂತ್ರಗಳು ಕಾರ್ಯನಿರ್ವಹಿಸುತ್ತಿರಲಿಲ್ಲ. ಫಿಲ್ಟರ್‌ ಮೀಡಿಯಾ ಮರಳು ಹೂಳಿನಲ್ಲಿ ಕೊಚ್ಚಿಕೊಂಡು ಹೋಗಿತ್ತು.ರಾಸಾಯನಿಕಗಳು ಇರಲಿಲ್ಲ. ನೀರು ಸಂಗ್ರಹಗಾರಗಳು ಹೂಳು ತುಂಬಿಕೊಂಡಿದ್ದವು. ಹೀಗಾಗಿ ಜನರಿಗೆ ಶುದ್ಧ ನೀರು ಕೊಡಲು ಸಾಧ್ಯವಾಗಿರಲಿಲ್ಲ. ಪರಿಶೀಲನೆ ನಡೆಸಿದ ನಂತರ ವಾಸ್ತವ ಸ್ಥಿತಿ ನನಗೆ ತಿಳಿಯಿತು. ಹೀಗಾಗಿ ನೀರು ಶುದ್ಧೀಕರಣ ಘಟಕವನ್ನು ತಳಮಟ್ಟದಿಂದ ದುರಸ್ತಿ ಕಾರ್ಯ ಕೈಗೊಳ್ಳಲು ಮುಂದಾಗಿದ್ದೇವೆ. ನಗರದ ನಾಲ್ಕು ಓವರ್‌ ಹೆಡ್‌ಟ್ಯಾಂಕ್‌ಗಳ ಹೂಳು ತೆರವುಗೊಳಿಸಲು ಪುರಸಭೆ ಖಜಾನೆಯಲ್ಲಿ ಅನುದಾನದಕೊರತೆಯಿದ್ದು, 14ನೇ ಹಣಕಾಸಿನಲ್ಲಿ 8 ಲಕ್ಷ ರೂ. ಅನುದಾನ ಬಳಕೆಮಾಡಿಕೊಳ್ಳಲು ಅನುಮೋದನೆ ನೀಡುವಂತೆ ಜಿಲ್ಲಾ ಧಿಕಾರಿಗಳಿಗೆ ಪ್ರಾಸ್ತಾವನೆ ಸಲ್ಲಿಸಲಾಗಿದೆ. -ಝರೀನಾಬೇಗಂ, ವಾಡಿ ಪುರಸಭೆ ಅಧ್ಯಕ್ಷೆ

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.