ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ ಕಾರ್ಯ ಅಂತಿಮ ಘಟ್ಟಕ್ಕೆ
Team Udayavani, Apr 18, 2021, 6:59 PM IST
ಆಳಂದ: ರಾಜ್ಯ ಸರ್ಕಾರ ಶಾಲೆ ಬಿಟ್ಟಮಕ್ಕಳ ಕುರಿತು ಸಮೀಕ್ಷೆ ನಡೆಸಿ,ವರದಿ ಸಲ್ಲಿಸುವಂತೆ ವರದಿ ಕೇಳಿದಹಿನ್ನೆಲೆಯಲ್ಲಿ ಗ್ರಾಪಂ ಸಿಬ್ಬಂದಿಮೂಲಕ ತಾಲೂಕಿನಾದ್ಯಂತ ಸಮೀಕ್ಷಾ ಕಾರ್ಯ ಕೈಗೊಂಡಿದ್ದು ಅಂತಿಮ ಹಂತಕ್ಕೆತಲುಪಿದ್ದು, ಶೀಘ್ರವೇ ಪೂರ್ಣ ಅಂಕಿಅಂಶಗಳ ವರದಿ ಸಲ್ಲಿಸಲಾಗುವುದುಎಂದು ತಾಪಂ ಇಒ ನಾಗಮೂರ್ತಿಶೀಲವಂತ ತಿಳಿಸಿದ್ದಾರೆ.
ಶನಿವಾರ ನಿಂಬಾಳ ಗ್ರಾಮಪಂಚಾಯತ ವ್ಯಾಪ್ತಿಯ ಚಲಗೇರಾಖೇಡ ಉಮ್ಮರ್ಗಾ ನಿಂಬಾಳದಲ್ಲಿಪಂಚಾಯಿತಿ ಸಿಬ್ಬಂದಿ ಶಾಲೆಯಿಂದಹೊರಗುಳಿದ ಮಕ್ಕಳನ್ನು ಗುರುತಿಸಿಅವರನ್ನು ಪುನಃ ಶಾಲೆಗೆ ಸೇರಿಸುವಕುರಿತು ಸಮೀûಾ ಕಾರ್ಯನಡೆಯಿತು.ಸಮೀಕ್ಷಾ ಕಾರ್ಯದಲ್ಲಿಸಿಬ್ಬಂದಿ ರವಿಕುಮಾರ ಮಾಳಗೆಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಇಲಾಖೆ 6 ರಿಂದ 14 ವರ್ಷದಮಕ್ಕಳು ಯಾವುದೇ ಶಾಲೆಗಳಿಗೆದಾಖಲಾಗದೆ ಮತ್ತು ದಾಖಲಾಗಿಶಾಲೆಯಿಂದ ಹೊರುಗುಳಿದಮಕ್ಕಳನ್ನು ಗುರುತಿಸುವ ಸಮೀಕ್ಷೆಮಾಡಲಾಗುತ್ತಿದೆ.
ಶಿಕ್ಷಣ ಇಲಾಖೆ 6 ರಿಂದ 14ವರ್ಷದ ಮಕ್ಕಳನ್ನು ಕಡ್ಡಾಯವಾಗಿಶಾಲೆಗೆ ಸೇರಿಸಿ, ಉಚಿತ ಸಮವಸ್ತ್ರ, ಪಠ್ಯ ಪುಸ್ತಕ, ಸೈಕಲ್, ಮಧ್ಯಾಹ್ನಬಿಸಿಯೂಟ ನೀಡುತ್ತಿದೆ. ಆದರೂಕೆಲವು ಮಕ್ಕಳು ದೀರ್ಘ ಕಾಲದವರೆಗೆ ಶಾಲೆಯಿಂದ ದೂರ ಉಳಿದುಗೈರು ಹಾಜರಾಗುತ್ತಿರುವುದು ಕಂಡುಬರುತ್ತಿದೆ.
ಶಾಲೆಯಲ್ಲಿ ದಾಖಲಾತಿಹೊಂದಿ, ಕಾರಣಾಂತರಗಳಿಂದ ಶಾಲೆಬಿಟ್ಟಿರುವುದು ಮತ್ತು ಯಾವುದೇಶಾಲೆಗೆ ದಾಖಲಾಗದೇ ಹಾಗೆಉಳಿದಿರುವ ಮಕ್ಕಳ ಸಮೀಕ್ಷೆ ಮಾಡಿಅಂಥ ಮಕ್ಕಳನ್ನು ಪುನಃ ಶಾಲೆಗೆಸೇರಿಸುವ ಕಾರ್ಯ ಮಾಡಲಾಗುತ್ತಿದೆಎಂದು ತಿಳಿಸಿದ್ದಾರೆ.ಸಿಬ್ಬಂದಿಗಳಾದ ಸೇವಂತಿಬಾಯಿವಗ್ಗಿ, ನಿಂಗಯ್ಯ ಸ್ವಾಮಿ, ಲಕ್ಷ್ಮೀಪುತ್ರಶೆಟಗಾರ, ಬಸವರಾಜ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್
ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ