ಕ್ಲಿಂಕರ್ ಬೆಲ್ಟ್ ಗೆ ಬೆಂಕಿ: ವಿಷ ಕಾರಿದ ಎಸಿಸಿ ಕಂಪನಿ
Team Udayavani, Feb 21, 2022, 11:59 AM IST
ವಾಡಿ: ಸಿಮೆಂಟ್ ಕ್ಲಿಂಕರ್ ಸಾಗಿಸುವ ಬೆಲ್ಟ್ ಗೆ ಬೆಂಕಿ ಹತ್ತಿ ಯಂತ್ರಗಳು ಉರಿದು ಅಗ್ನಿ ಅವಘಡ ಸಂಭವಿಸಿದ ಘಟನೆ ಸೋಮವಾರ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಎಸಿಸಿ ಸಿಮೆಂಟ್ ಕಂಪನಿಯಲ್ಲಿ ನಡೆದಿದೆ.
ಕಲ್ಲು, ಮ್ಯಾಂಗನೀಸ್ ಮಣ್ಣು, ಜಿಬಸಂ, ಕಲ್ಲಿದ್ದಲು, ನೀರು ಮಿಶ್ರಣಮಾಡಿ ಸಿಮೆಂಟ್ ಉತ್ಪಾದನೆಗೂ ಮುಂಚೆ ಕ್ಲಿಂಕರ್ ತಯಾರಿಸುವ ಎಸಿಸಿ ಘಟಕದಲ್ಲಿ ಸೋಮವಾರ ಬೆಳಗ್ಗೆ ಏಕಾಏಕಿ ಆಗಸಕ್ಕೆ ದಟ್ಟವಾದ ಹೊಗೆ ಹರಡಿತು. ನೀಲಿ ಆಗಸದಲ್ಲಿ ಕಪ್ಪು ಕಾರ್ಮೋಡ ಆವರಿಸಿಕೊಂಡಿತು. ವಾಡಿ ಪಟ್ಟಣದ ಮೇಲೆ ಕರಿಛಾಯೆ ಮೂಡಿಸಿತು. ಭಯಂಕರವಾದ ಹೊಗೆ ಕಂಡು ಕಾರ್ಮೋಡಗಳ ಚಲನೆಯಿರಬಹುದು ಎಂದು ನಗರದ ಜನ ಭಾವಿಸಿದ್ದರು. ಇದು ಎಸಿಸಿ ಕಂಪನಿ ಉಗುಳುತ್ತಿರುವ ವಿಷಕಾರಿ ಧೂಳು ಎಂದರಿತು ಧಂಗಾದರು.
ಘಟನೆಯಿಂದ ವಿಚಲಿತರಾದ ಎಸಿಸಿ ಕಂಪನಿಯ ಆಡಳಿತ ವರ್ಗ ಹಾಗೂ ಇಂಜಿನಿಯರ್ ಗಳು, ಅವಘಡ ಸಂಬವಿಸಿದ ಸ್ಥಳದತ್ತ ದೌಡಾಯಿಸಿದರು. ಕ್ಲಿಂಕರ್ ಸಾಗಿಸುವ ಬೆಲ್ಟ್ ಕತ್ತರಿಸಿದೆಯೋ ಅಥವ ಕ್ಲಿಂಕರ್ ಸೈಲೋ ಧ್ವಂಸಗೊಂಡಿದೆಯೋ ಎಂಬುದು ತನಿಖೆಯಿಂದ ಗೊತ್ತಾಗಲಿದೆ. ವಾಡಿ ನಗರ ಸೇರಿದಂತೆ ಸುತ್ತಲ ಗ್ರಾಮಗಳಾದ ಇಂಗಳಗಿ, ಕುಂದನೂರ, ಚಾಮನೂರ, ಹಳಕರ್ಟಿ, ಕಮರವಾಡಿ, ಕೊಂಚೂರ, ಬಳವಡಗಿ ಪರಸರವೂ ಕಲುಷಿತಗೊಂಡು ಜನರ ಆಕ್ರೋಶಕ್ಕೆ ಗುರಿಯಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್
ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Sirsi Festival: ನಾವು ಬಂದೇವ ಶಿರಸಿ ಜಾತ್ರೆ ನೋಡಲಿಕ್ಕೆ !
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್ ಬೈಕ್ನಲ್ಲಿ 64ರ ಹಿರಿಯರ ಸಾಹಸ ಯಾನ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ