ರೈಲುಗಳ ನಿಲುಗಡೆಗೆ ಒತ್ತಾಯ
Team Udayavani, Sep 8, 2017, 11:24 AM IST
ಸೇಡಂ: ಲೇಡಿ ಪ್ಯಾಸೆಂಜರ್ಕೋ ಪಿಶಾಬ್ ಕರ್ನೆಕು ಜಗಾನಯಿ ಸಾಬ್. ಸ್ಟೇಷನ್ ರಿಪೇರಿ ಮಾಡ್ಲಾಕ್ ಶುರು ಮಾಡಿ
ವರ್ಷಗಳೇ ಕಳೆದ್ರು, ಇನ್ನು ಮುಗಿದಿಲ್ಲ ಸರ್. ಟಿಕೆಟ್ ದೇನೆ ವಾಲೆಕೋ ಕನ್ನಡ್ ನಹಿ ಆತಾ. ಕಬ್ ಸುಧಾರೇಂಗೆ ಇಸ್
ಸ್ಟೇಷನ್ಕೋ?.
ಹೀಗೆ ಕೆಲವರು ಹಿಂದಿ, ಮತ್ತೆ ಕೆಲವರು ಕನ್ನಡ ಭಾಷೆಯಲ್ಲಿ ತಮ್ಮ ತೊಂದರೆಗಳನ್ನು ಹೇಳಿಕೊಂಡದ್ದು ದಕ್ಷಿಣ
ಮಧ್ಯ ರೈಲ್ವೆ ಸಿಕಂದ್ರಾಬಾದ ವಿಭಾಗದ ವ್ಯವಸ್ಥಾಪಕ ಅಮಿತ್ ವರ್ಧಾ ಅವರಿಗೆ.
ಬುಧವಾರ ಇಲ್ಲಿನ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದಾಗ, ಸ್ವಾಗತಿಸುವರು ಕಮ್ಮಿ, ಅವ್ಯವಸ್ಥೆ ಕುರಿತು ದೂರು
ನೀಡುವವರೇ ಜಾಸ್ತಿ ಜಮಾಯಿಸಿದ್ದರು.
ಕೆಲವರು ರೈಲ್ವೆ ನಿಲ್ದಾಣದಲ್ಲಿ ಶೌಚಾಲಯವಿದ್ದರೂ ಬಳಕೆಗೆ ಅವಕಾಶವಿಲ್ಲದಂತೆ ಆಗಿದೆ. ಇದರಿಂದ ಮಹಿಳಾ
ಪ್ರಯಾಣಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ರೈಲ್ವೆ ನಿಲ್ದಾಣ ನವೀಕರಣ ನೆಪದಲ್ಲಿ ವರ್ಷದ ಹಿಂದೆ ಕೈಗೊಂಡ
ಕಾಮಗಾರಿ ಇನ್ನೂ ಮುಗಿದಿಲ್ಲ. ಮುಗಿಯುವ ಲಕ್ಷಣವೂ ಕಾಣುತ್ತಿಲ್ಲ. ಸರಿಯಾದ ವಿಶ್ರಾಂತಿ ಕೊಠಡಿ ಇಲ್ಲದೆ
ಪ್ರತಿನಿತ್ಯ ಪ್ರಯಾಣಿಕರು ಛೀಮಾರಿ ಹಾಕುತಿದ್ದಾರೆ ಎಂದು ದೂರಿದರು.
ನಂತರ ವ್ಯವಸ್ಥಾಪಕ ವರ್ಧಾ ಅವರಿಂದ ಸಮಂಜಸ ಉತ್ತರದ ನಿರೀಕ್ಷೆಯಲ್ಲಿದ್ದ ದೂರುದಾರರಿಗೆ, ಕೇವಲ
ದೇಖೆಂಗೆ ಎನ್ನುವ ಉಡಾಫೆ ಉತ್ತರ ಮತ್ತಷ್ಟು ಕೆರಳಿಸಿತು. ವಿಚಾರಣೆ ಮತ್ತು ಟಿಕೆಟ್ ನೀಡುವ ಕೋಣೆಗಳಲ್ಲಿ
ಕನ್ನಡ ಭಾಷೆ ಬಲ್ಲವರಿಲ್ಲ. ಈ ರೀತಿ ಅಸೌಕರ್ಯದಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ಕೂಡಲೇ
ಸಮಸ್ಯೆಗಳನ್ನು ಪರಿಹರಿಸಿ ಎಂದು ಒತ್ತಾಯಿಸಿದರು.
ನಂತರ ಲೋಕಮಾನ್ಯ ತಿಲಕ್ ಎಕ್ಸಪ್ರಸ್, ಗುಲಬರ್ಗಾ-ಹೈದ್ರಾಬಾದ ಇಂಟರ್ಸಿಟಿ, ಗರೀಬ ರಥ,
ಔರಂಗಾಬಾದ-ರೇಣಿಗುಂಟಾ ಎಕ್ಸಪ್ರಸ್, ತಿರುಪತಿ ನಿಜಾಮಾಬಾದ ಎಕ್ಸ್ಪ್ರೆಸ್, ಪುಣೆ-ಸಿಕಂದ್ರಾಬಾದ ಎಕ್ಸಪ್ರಸ್,
ತಿರುಪತಿ-ಶ್ರೀನಗರ ಎಕ್ಸಪ್ರಸ್, ಮುಂಬೈ-ಕಾಕಿನಾಡ ಎಕ್ಸಪ್ರಸ್, ಯಶ್ವಂತಪುರ-ಮಾತಾ ವೈಷ್ಣೋದೇವಿ ಎಕ್ಸಪ್ರಸ್
ರೈಲುಗಳನ್ನು ಸೇಡಂ ನಿಲ್ದಾಣದಲ್ಲಿ ನಿಲುಗಡೆ ಮಾಡುವಂತೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.
ಬಿಜೆಪಿ ನಗರಾಧ್ಯಕ್ಷ ಅನಿಲ ಐನಾಪುರ, ಶ್ರೀಮಂತ ಅವಂಟಿ, ರಾಮು ರಾಠೊಡ, ಪರಮೇಶ್ವರ ತೇಗಲತಿಪ್ಪಿ,
ನೀಲಾಧರಶೆಟ್ಟಿ, ನಾಗರಾಜ ಹಾಬಾಳ, ಪ್ರದೀಪ ಪ್ಯಾಟಿ, ಅಂಬಾದಾಸ್, ರಾಜು ರಾಠೊಡ, ಹಣಮಂತ ಸಕ್ರಿ
ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ