ಮೂಗಿನಿಂದ ಮೆದುಳಿಗೆ ಹೊಕ್ಕಿದ್ದ ಗಡ್ಡೆ ಹೊರಕ್ಕೆ


Team Udayavani, Jun 16, 2021, 4:24 PM IST

ಸದ್ಗಹಜಹಗ್ದರತಯು

ಕಲಬುರಗಿ: ಮೂಗಿನಲ್ಲಿ ಸಣ್ಣದಾಗಿ ಕ್ಯಾನ್ಸರ್‌ ಗಡ್ಡೆ ಬೆಳೆದು ಮದುಳಿಗೆ ಹರಡಿ ಬೆÅçನ್‌ ಟ್ಯೂಮರ್‌ ಆಗಿದ್ದ 16 ವರ್ಷದ ಬಾಲಕಿಗೆ ಕಲಬುರಗಿ ವೈದ್ಯರು “ಆಲ್‌ಫ್ಯಾಕ್ಟರಿ ನ್ಯೂರೋಬ್ಲಾಸ್ಟೊಮಾ’ ಶಸ್ತ್ರಚಿಕಿತ್ಸೆಯನ್ನು ಆರೋಗ್ಯ ಕರ್ನಾಟಕ ಮತ್ತು ಆಯುಷ್ಮಾನ್‌ ಭಾರತ ಯೋಜನೆಯಡಿ ಉಚಿತ ವಾಗಿ ಮಾಡಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದ ಬಸವೇಶ್ವರ ಆಸ್ಪತ್ರೆಯ 30 ವೈದ್ಯರ ತಂಡ ಸತತ 11 ಗಂಟೆಗಳ ಕಾಲ ಈ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಬೀದರ್‌ ಜಿಲ್ಲೆಯ ಹುಮನಾಬಾದ ತಾಲೂ ಕಿನ ಹುಡಗಿ ಗ್ರಾಮದ ಬಾಲಕಿ ನೀಲಾಂಬಿಕಾ ಭಾಗಿರಥಿಗೆ ಒಂದು ವರ್ಷ ದಿಂದ ಉಸಿರಾಟ ಸಮಸ್ಯೆ ಎದುರಿಸುತ್ತಿದ್ದಳು. ಅಲ್ಲದೇ, ಆಕೆಯ ಕಣ್ಣು ಗುಡ್ಡೆಗಳು ಮುಂದೆ ಬಂದಿದ್ದವು.

ಹೀಗಾಗಿ ಇದೇ ಮೇ 31ರಂದು ಪೋಷಕರು ಆಕೆಯನ್ನು ಕಿವಿ, ಮೂಗು ಮತ್ತು ಗಂಟಲು (ಇಎನ್‌ಟಿ) ತಜ್ಞರಿಗೆ ತೋರಿಸಲೆಂದು ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆಗ ಮೂಗಿನಲ್ಲಿ ಗಡ್ಡೆ ಬೆಳೆದಿರುವುದನ್ನು ಕಿವಿ, ಮೂಗು ಮತ್ತು ಗಂಟಲು ವಿಭಾಗದ ಮುಖ್ಯಸ್ಥ ಡಾ| ಸಿ.ಬಿ. ನಂದ್ಯಾಳ ಪತ್ತೆ ಹೆಚ್ಚಿಸಿದ್ದರು. ಆಗ ಸಿಟಿ ಸ್ಕ್ಯಾನ್‌ ಮತ್ತು ಎಂಆರ್‌ಐ ಸ್ಕಾನ್‌ ಮಾಡಿದಾಗ ಗಡ್ಡೆ ಬಾಲಕಿಯ ಮೂಗಿನ ಮೂಲಕ ಕಣ್ಣುಗಳ ಎಡ ಭಾಗದಿಂದ ಮದುಳಿಗೆ ವ್ಯಾಪಿಸಿರು ವುದು ಕಂಡು ಬಂದಿತ್ತು. ಮೂಗಿನ ಭಾಗದಲ್ಲಿ 4×4 ಸೆಮೀ ಹಾಗೂ ಮೆದಳಿನಲ್ಲಿ 6×8 ಸೆ.ಮೀ ಗಡ್ಡೆ ಬೆಳೆದಿತ್ತು.

ಮೆದುಳಿನ ಎಡ ಭಾಗದಲ್ಲಿ ಶೇ.30ರಷ್ಟು ಆವರಿಸಿತ್ತು. ಹೀಗಾಗಿ ಬಾಲಕಿಗೆ ಉಸಿರಾಟದ ತೊಂದರೆ, ಕಣ್ಣು ಗುಡ್ಡೆಗಳು ಮುಂದೆ ಬಂದಿದ್ದವು. ಇದರಿಂದ ವಾಸನೆ ಕಂಡು ಹಿಡಿಯಲೂ ಸಾಧ್ಯವಾಗುತ್ತಿರಲಿಲ್ಲ. ಮೂಗಿನಿಂದ ರಕ್ತಸ್ರಾವ ಕೂಡ ಆಗುತ್ತಿತ್ತು ಎಂದು ಡಾ| ಸಿ.ಬಿ.ನಂದ್ಯಾಳ ತಿಳಿಸಿದರು. ಮೂಗು, ಕಣ್ಣು ಮತ್ತು ಮೆದುಳಿಗೆ ಗಡ್ಡೆ ವ್ಯಾಪಿಸಿದ್ದರಿಂದ ನರರೋಗ ವಿಭಾಗದ ಮುಖ್ಯಸ್ಥ ಡಾ| ಸತೀಶ ಮೇಳಕುಂದಿ ಅವರನ್ನು ಸಂಪರ್ಕಿಸಲಾಗಿತ್ತು. ತದನಂತರ ಡಾ| ಸತೀಶ ಮೇಳಗುಂದಿ, ಡಾ| ಸಿ.ಬಿ. ನಂದ್ಯಾಳ ಮತ್ತು ನೇತ್ರ ತಜ್ಞ ಡಾ| ಮಲ್ಲಿ ಕಾರ್ಜುನ ತೆಗನೂರ, ಅರವಳಿಕೆ ತಜ್ಞ ಡಾ| ಗಜೇಂದ್ರ ಸಿಂಗ್‌ ಎಲ್ಲರೂ ಆಲ್‌ಫ್ಯಾಕ್ಟರಿ ನ್ಯೂರೋಬ್ಲಾಸ್ಟೊಮಾ ಶಸ್ತ್ರ ಚಿಕಿತ್ಸೆ ಮಾಡುವ ನಿರ್ಧಾರಕ್ಕೆ ಬಂದಿದ್ದರು. ಮೂಗಿನ ಮೂಲಕ ಎಡ ಭಾಗದ ಮೆದುಳಿಗೆ ಡೆಂಬಲ್‌ ರೀತಿಯ ಆಕಾರದಲ್ಲಿ ಗಡ್ಡೆ ಆವರಿಸಿತ್ತು.

ಮೆದುಳಿಗೆ ಗಡ್ಡೆ ಹೊಕ್ಕಿರುವುದಿಂದ ಮೆದುಳಿಗೆ ಯಾವ ಹಾನಿಯಾಗದಂತೆ ಎಚ್ಚರ ವಹಿಸುವುದು ಅಗತ್ಯವಾಗಿತ್ತು. ತಜ್ಞರು ಮತ್ತು ಪರಿಣಿತ ವೈದ್ಯರ ತಂಡದೊಂದಿಗೆ ಜೂನ್‌ 8 ರಂದು ಸತತವಾಗಿ ಸುದೀರ್ಘ‌ 11 ಗಂಟೆ ಕಾಲ ಈ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಬಾಲಕಿ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ಡಾ| ಸತೀಶ ಮೇಳಕುಂದಿ ತಿಳಿಸಿದ್ದಾರೆ. ವೈದ್ಯರಾದ ಡಾ| ಶಶಾಂಕ್‌ ರಾಮದುರ್ಗ, ಡಾ| ಕಿರಣ ದೇಶಮುಖ, ಡಾ| ಶಿವಾನಂದ ಮೇಳಕುಂದಿ ಡಾ.ಟೆಂಗಳಿ, ಇಎನ್‌ಟಿ ತಜ್ಞರು, ನೇತ್ರ ತಜ್ಞರು, ರೆಡಿಯಾಲಜಿಸಿಸ್ಟ್‌, ಪ್ಯಾಥಾಲಜಿಸ್ಟ್‌ ತಜ್ಞರು ಒಳಗೊಂಡಂತೆ ಒಟ್ಟು 30 ಜನರ ಸರ್ಜನ್‌ಗಳು ಮತ್ತು 10 ಜನ ಸಿಬ್ಬಂದಿ ಶಸ್ತ್ರಚಿಕಿತ್ಸೆ ತಂಡದಲ್ಲಿ ಇದ್ದರು. ಈ ಶಸ್ತ್ರಚಿಕಿತ್ಸೆಗೆ ಒಟ್ಟು 4ರಿಂದ 5 ಲಕ್ಷ ರೂ. ವೆಚ್ಚವಾಗುತ್ತದೆ. ಬಾಲಕಿ ಬಿಪಿಎಲ್‌ ಕುಟುಂಬಕ್ಕೆ ಸೇರಿದ್ದು, ಉಚಿತವಾಗಿಯೇ ಶಸ್ತ್ರ ಚಿಕಿತ್ಸೆ ನೆರವೇರಿಸಲಾಗಿದೆ.

ಟಾಪ್ ನ್ಯೂಸ್

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.