​​​​​​​ಸಾಮಾನ್ಯ ಸಭೆ: ಭಗವದ್ಗೀತೆ ಹೆಸರಲ್ಲಿ ಜಟಾಪಟಿ


Team Udayavani, Mar 19, 2017, 3:30 PM IST

gul6.jpg

ಸೇಡಂ: ಭಗವದ್ಗೀತೆ ಹೆಸರಲ್ಲಿ ಮುಖ್ಯಾಧಿಕಾರಿ, ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು ಜಟಾಪಟಿ ನಡೆಸಿದ ಘಟನೆಗೆ ಶನಿವಾರ ನಡೆದ ತುರ್ತು ಸಾಮಾನ್ಯ ಸಭೆ ಸಾಕ್ಷಿಯಾಯಿತು. ಸಭೆ ಪ್ರಾರಂಭವಾಗುತ್ತಿದ್ದಂತೆ ಕೆಂಪು ಪ್ಲಾಸ್ಟಿಕ್‌ ಬ್ಯಾಗ್‌ ಜತೆಗೆ ಸಭೆಗೆ ಆಗಮಿಸಿದ ಮಾಜಿ ಅಧ್ಯಕ್ಷ ಎಕಬಾಲ್‌ ಖಾನ್‌, ಸಭಾಂಗಣದ ನಡುವೆ ನೆಲದ ಮೇಲೆ ಕುಳಿತು ಪೌರ ಕಾರ್ಮಿಕರ ಪರ ಮಾತನಾಡಲು ಶುರು ಮಾಡಿದರು.

ಪೌರ ಕಾರ್ಮಿಕರಿಗೆ ನ್ಯಾಯ ಕೊಡಿಸಬೇಕು. ಮುಖ್ಯಾಧಿಕಾರಿಗಳ ಕೆಲಸದಿಂದ ಜನ ರೋಸಿ ಹೋಗಿದ್ದಾರೆ ಎಂದು ಪ್ರತಿಭಟಿಸಿದರು. ಆಗ ಮಧ್ಯ ಪ್ರವೇಶಿಸಿದ ಬಿಜೆಪಿ ಸದಸ್ಯ ಅನೀಲಕುಮಾರ ಪಾಟೀಲ ತೆಲ್ಕೂರ, ಏನೇ ವಿಚಾರ ಇದ್ದರೂ ಕುರ್ಚಿ ಮೇಲೆ ಕುಳಿತಿ ಚರ್ಚಿಸೋಣ ಎಂದರಾದರೂ, ಅವರ ಮಾತಿಗೆ ಜಗ್ಗದ ಎಕ್ಬಾಲ್‌ಖಾನ್‌ಕೆಂಪು ಪ್ಲಾಸ್ಟಿಕ್‌ನಲ್ಲಿ ತಂದಿದ್ದ ಭಗವದ್ಗೀತೆ ಗ್ರಂಥವನ್ನು ತೆಗೆದು ಇದರ ಮೇಲೆ ಆಣೆ ಮಾಡಿ ಹೇಳಿ.

ನೀವು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೀರಾ ಎಂದು ಮುಖ್ಯಾಧಿಕಾರಿ ಶರಣಯ್ಯಸ್ವಾಮಿ ಅವರನ್ನು ಪ್ರಶ್ನಿಸಲು ಮುಂದಾದರು. ಈ ವೇಳೆ ಮುಖ್ಯಾಧಿಕಾರಿ ಮತ್ತು ಎಕ್ಬಾಲ್‌ಖಾನ್‌ ನಡುವೆ ಕೆಲಹೊತ್ತು ಮಾತಿನ ಜಟಾಪಟಿ ನಡೆಯಿತು. ನಾನ್ಯಾಕೆ ಗೀತೆ ಮೇಲೆ ಆಣೆ ಮಾಡಲಿ. ನಾನು ಕೊಲೆ ಆರೋಪಿನಾ? ಇದೇನು ನ್ಯಾಯಾಲಯವೇ? ನೀವೇನು ವಕೀಲರೇ ಎಂದು ಪ್ರಶ್ನಿಸಿದರು.

ಸಾಧ್ಯವಾದರೆ ಜಿಲ್ಲಾಧಿ ಧಿಕಾರಿಗಳಿಗೆ ದೂರು ನೀಡಿ ನನ್ನನ್ನು ವರ್ಗಾಯಿಸಿ. ಸುಖಾ ಸುಮ್ಮನೆ ಆರೋಪ ಮಾಡದಿರಿ ಎಂದು ದಬಾಯಿಸಿದರು. ಇದರಿಂದ ಗಲಿಬಿಲಿಗೊಂಡ ಎಕ್ಬಾಲ್‌ ಖಾನ್‌, ನಡೀರಿ ಜನರ ಬಳಿ ತೆರಳಿ ಅಭಿಪ್ರಾಯ ಸಂಗ್ರಹ ಮಾಡೋಣ. ನಿಮ್ಮ ಕಾರ್ಯ ಚನ್ನಾಗಿದೆಯೋ ಇಲ್ಲವೋ ಎಂದು ಪ್ರಶ್ನಿಸಿದರು. ಈ ಮಧ್ಯೆ ಕಾಂಗ್ರೆಸ್‌ ಸದಸ್ಯ ದತ್ತು ಪಾಟೀಲ ಮಾತನಾಡಿ, ಭಗವದ್ಗೀತೆಯನ್ನು ನೆಲದ ಮೇಲೆ ಇರಿಸಿ ಅವಮಾನಿಸಲಾಗಿದೆ. 

ಈ ರೀತಿಯಾಗಿ ಮಾಜಿ ಅಧ್ಯಕ್ಷ ಎಕ್ಬಾಲ್‌ ಖಾನ್‌ ನಡೆದುಕೊಂಡಿರುವುದು ಖಂಡನೀಯ ಎಂದು ಆಗ್ರಹಿಸಿದರು. ಒಟ್ಟಾರೆಯಾಗಿ ಜನರಿಗಾಗಿ ಸಭೆ ನಡೆಸಬೇಕಾದ ಸದಸ್ಯರು ಮತ್ತು ಅಧಿಕಾರಿಗಳೇ ಜಟಾಪಟಿಗೆ ಇಳಿದಿರುವುದು  ಆಕ್ರೋಶಕ್ಕೆ ಕಾರಣವಾಯಿತು.

ಉಪಾಧ್ಯಕ್ಷೆ ಕಮಲಾಬಾಯಿ ಹೂಗಾರ, ಸ್ಥಾಯಿ ಸಮಿತಿ ಅಧ್ಯಕ್ಷ ಅಯೂಬ್‌ ಅಲಿ ಜಿಗರ, ಸದಸ್ಯರಾದ ಹಾಜಿ ನಾಡೇಪಲ್ಲಿ, ಲೀಲಾಬಾಯಿ ರಾಠೊಡ, ಶ್ರೀಲತಾ ಕೊಟ್ರಕಿ, ರಾಜಶೇಖರ ನಿಲಂಗಿ, ಜಗನ್ನಾಥ ಚಿಂತಪಳ್ಳಿ, ದೇವಿಂದ್ರ ಬುಡಸಾಣಿ, ಅಶೋಕ ಮಹಾಡಿಕ್‌, ಸಂತೋಷ ತಳವಾರ, ರಾಜು ಹಡಪದ, ಬಸವರಾಜ ರಾಯಕೋಡ, ಶಾಬೋದ್ದಿನ್‌ ಹೈಯಾಳ,ಮಲ್ಲಿಕಾರ್ಜುನ ವಾಲೀಕಾರ, ವೀರೇಂದ್ರ ರುದನೂರ, ರಾಜು ಚವ್ಹಾಣ ಇದ್ದರು. 

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.