ಉತ್ತಮ ಮಳೆ: ಕಂಗೊಳಿಸುತ್ತಿದೆ ತೊಗರಿ ಬೆಳೆ
Team Udayavani, Oct 10, 2017, 10:17 AM IST
ಚಿಂಚೋಳಿ: ತಾಲೂಕಿನಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಮಳೆ ಆಗಿರುವುದರಿಂದ ಅನೇಕ ಗ್ರಾಮಗಳಲ್ಲಿ ತೊಗರಿ ಬೆಳೆ ಉತ್ತಮವಾಗಿ ಬೆಳೆಯುತ್ತಿದೆ.
ತಾಲೂಕು ಕೃಷಿ ಇಲಾಖೆ ಮಾಹಿತಿ ಪ್ರಕಾರ ಪ್ರಸಕ್ತ ಸಾಲಿನಲ್ಲಿ ತಾಲೂಕಿನಲ್ಲಿ 46,125 ಹೆಕ್ಟೇರ್ ಪ್ರದೇಶ ಬಿತ್ತನೆ ಗುರಿ ಇದ್ದು, ಬಹುತೇಕ ರೈತರು ತೊಗರಿ ಬೆಳೆಯನ್ನೇ ಬಿತ್ತನೆ ಮಾಡಿದ್ದು, ಮೊಗ್ಗು ಹೂವು ಬಿಡುವ ಹಂತದಲ್ಲಿದೆ. ತೊಗರಿ ಬೆಳೆ ಉತ್ತಮ ಫಸಲು ಆಗಿ ಬೆಳೆದಿರುವುದರಿಂದ ಖುಷಿಯಾಗಿರುವ ರೈತರು ತೊಗರಿ ಬೆಳೆಗಳ ಮಧ್ಯೆ ಕಾಣಿಸಿಕೊಂಡ ಕಳೆ ತೆಗೆಯುವಲ್ಲಿ ಮತ್ತು ಕೀಟನಾಶಕ ಸಿಂಪರಣೆಯಲ್ಲಿ ತೊಡಗಿದ್ದಾರೆ.
ತಾಲೂಕಿನ ಚಿಮ್ಮನಚೋಡ, ತಾಜಲಾಪುರ, ಕನಕಪುರ, ಚಿಮ್ಮಾಇದಲಾಯಿ, ಸುಲೇಪೇಟ, ಐನಾಪುರ, ಮಿರಿಯಾಣ, ದೇಗಲಮಡಿ, ಸಾಲೇಬೀರನಳ್ಳಿ, ನಿಡಗುಂದಾ, ಶಿರೋಳಿ,
ಕರಚಖೇಡ, ಜಟ್ಟೂರ, ಹಲಕೋಡ, ರುದನೂರ, ಚಿಂತಪಳ್ಳಿ, ಗಡಿಕೇಶ್ವಾರ, ಚಂದನಕೇರಾ, ಭೂಯ್ನಾರ, ಸಲಗರ ಬಸಂತಪುರ, ರಟಕಲ್, ಕೋಡ್ಲಿ, ಹಲಚೇರಾ, ಕೊರವಿ ಗ್ರಾಮಗಳಲ್ಲಿ ತೊಗರಿ ಬೆಳೆಗಳಲ್ಲಿ ಹೂವು ಕಾಣಿಸಿಕೊಂಡಿರುವುದರಿಂದ ರೈತರಲ್ಲಿ ಸಂತಸ ಮೂಡಿದೆ.
ತಾಲೂಕಿನಲ್ಲಿ ಎರಡು ದಿನಗಳಿಂದ ಮಳೆ ಇಲ್ಲದ ಕಾರಣ ತೊಗರಿ ಬೆಳೆ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ಕೆಲವು ಗ್ರಾಮಗಳಲ್ಲಿ ತೊಗರಿ ಬೆಳೆ ಮೊಗ್ಗಿನಿಂದ ಕೂಡಿದ್ದು, ಇನ್ನೆರಡು ದಿನಗಳಲ್ಲಿ ಹೂವು ಕಾಣಿಸಿಕೊಳ್ಳಲಿದೆ. ತೊಗರಿ ಬೆಳೆಗೆ ಯಾವುದೇ ಕೀಟ ನಾಶಕ ಸಿಂಪರಣೆ ಮತ್ತು ಕೃಷಿವಿಜ್ಞಾನಿಗಳ ಸಲಹೆ ಬೇಕಾದರೆ ತಾಲೂಕಿನ ಸುಲೇಪೇಟ, ನಿಡಗುಂದಾ, ಕೋಡ್ಲಿ, ಚಿಮ್ಮನಚೋಡ, ಐನಾಪುರ, ಕುಂಚಾವರಂ, ಚಿಂಚೋಳಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿ ಅಗತ್ಯ ಸಲಹೆ ಪಡೆದುಕೊಳ್ಳಬೇಕು ಎಂದು ತಾಲೂಕು ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಎಸ್.ಎಚ್. ಗಡಿಗಿಮನಿ ಸಲಹೆ ನೀಡಿದ್ದಾರೆ.
ಕಲಬುರಗಿ ಕೃಷಿ ವಿಜ್ಞಾನ ಕೇಂದ್ರದ ತಳಿ ಅಭಿವೃದ್ಧಿ ವಿಜ್ಞಾನಿ ಡಾ| ಗಿರೀಶ, ಭೂಮಿಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಇದರಿಂದ ತೊಗರಿ ಬೆಳೆ ನೆಟೆರೋಗ ತಡೆಯಬಹುದು. ನೀರು ಜಾಸ್ತಿ ಇದ್ದರೆ ತೊಗರಿ ಬೆಳೆಗಳಲ್ಲಿ ಮಚ್ಚೆರೋಗ ಕಾಣಿಸುತ್ತದೆ. ಆದ್ದರಿಂದ ಸಮಗ್ರ ಸಸಿಗಳನ್ನು
ಆರೋಗ್ಯಯುತವಾಗಿ ಬೆಳೆಸಬೇಕು.ಅಂದರೆ ಉತ್ತಮ ಹೆಚ್ಚುವರಿ ಪಡೆಯಲು ಸಾಧ್ಯವಿದೆ ಎಂದು ತಿಳಿಸಿದ್ದಾರೆ.
ಕೆಲವು ಸಲ ನುಸಿ ಹಾವಳಿಯಿಂದ ಹೂವು ಕಾಯಿ ಬಿಡದಂತೆ ಹಾಗೆ ಬೆಳೆದರೆ ಮುಂದೆ ಗೊಡ್ಡು ರೋಗ ಕಾಣಿಸುತ್ತದೆ. ಆದ್ದರಿಂದ ರೈತರು ಕೃಷಿ ವಿಜ್ಞಾನಿಗಳೊಂದಿಗೆ ಸಂಪರ್ಕಿಸಿ ಸಲಹೆ ಪಡೆಯಬಹುದು ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು