ಜಾತಿ ನೋಡಿ ಅನುದಾನ ನೀಡಲ್ಲ
Team Udayavani, Feb 3, 2018, 11:36 AM IST
ಕಾಳಗಿ: ಕಾಂಗ್ರೆಸ್ ಸರ್ಕಾರ ಜಾತಿ, ಮತದ ಸಂಖ್ಯೆ ನೋಡಿ ರಾಜಕೀಯ ಉದ್ದೇಶದಿಂದ ಅನುದಾನ ನೀಡೋದಿಲ್ಲ, ಸಣ್ಣ
ಪುಟ್ಟ ಜನಸುಮುದಾಯವನ್ನು ಗಣನೆಗೆ ತೆಗೆದುಕೊಂಡು ಅನುದಾನ ನೀಡುತ್ತದೆ ಎಂದು ಶಾಸಕ ಡಾ| ಉಮೇಶ ಜಾಧವ್ ಹೇಳಿದರು.
ಇಲ್ಲಿನ ಮುಖ್ಯಬಜಾರ್ನಲ್ಲಿ ಭಾವಸಾರ ಕ್ಷತ್ರೀಯ ಸಮಾಜ ಮುಖಂಡರು ಹಮ್ಮಿಕೊಂಡ ಸನ್ಮಾನ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಸರ್ವ ಜನಾಂಗದ ವಿಕಾಸ ಬಯಸುವ ಪಕ್ಷವಾಗಿದೆ. ಸರ್ಕಾರ ನೀಡಿರುವ 40 ಲಕ್ಷ ರೂ. ಅನುದಾನವನ್ನು ಭಾವಸಾರ ಕ್ಷತ್ರೀಯ ಸಮಾಜದ ಮುಖಂಡರು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ, ಬರುವ ದಿನಗಳಲ್ಲಿ ಇನ್ನು 60 ಲಕ್ಷ ರೂ. ಅನುದಾನ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.
ಭಾವಸಾರ ಕ್ಷತ್ರೀಯ ಸಮಾಜ ಅಭಿವೃದ್ಧಿಗೆ ಶಾಸಕ ಡಾ| ಉಮೇಶ ಜಾಧವ್, ಜಿಪಂ ಮಾಜಿ ಸದಸ್ಯ ಜಗದೇವ ಗುತ್ತೇದಾರ ಕೊಡುಗೆ ಅಪಾರವಾಗಿದೆ ಎಂದು ಮುಖಂಡ ರವಿದಾಸ ಪತಂಗೆ ಹೇಳಿದರು.
ಮುಖಂಡರಾದ ನಿಂಬೆಣಪ್ಪ ಕೋರವಾರ, ರಾಘವೇಂದ್ರ ಗುತ್ತೇದಾರ, ಪರಮೇಶ್ವರ ಮಡಿವಾಳ, ಚಂದ್ರಕಾಂತ ಜಾಧವ, ಜಿಯಾವುದ್ದಿನ್ ಸೌದಾಗರ, ಪ್ರಕಾಶ ಕಠಾರೆ, ಮಾರುತಿ ಪತಂಗೆ, ಸಂತೋಷ ಬಾಸುತ್ಕರ್, ಪ್ರಕಾಶ ಸೇಗಾಂವಕರ್, ಕಲ್ಯಾಣರಾವ್ ಡೊಣ್ಣೂರ, ಬಾಬು ಹೀರಾಪುರ, ಮಲ್ಲಿಕಾರ್ಜುನ ಡೊಣ್ಣೂರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್
ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ
Kalaburagi; ಮೋದಿ ಗ್ಯಾರಂಟಿಗೆ ನೋ ವಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ