ಅರ್ಧ ದಶಕದ ಉರ್ದು ಶಾಲೆಗೆ ಬೇಕಿದೆ ಕಾಯಕಲ್ಪ
Team Udayavani, Jul 30, 2018, 11:05 AM IST
ಅಫಜಲಪುರ: ಸರ್ಕಾರಿ ಶಾಲೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಬಜೆಟ್ನಲ್ಲಿ ನೂರಾರು ಕೋಟಿ ರೂ. ಅನುದಾನ ಮೀಸಲಿಡುತ್ತಿದೆ. ಹತ್ತು ಮನೆಗಳಿರುವಲ್ಲಿ ಒಂದು ಶಾಲೆ ಆರಂಭಿಸುತ್ತಿದೆ. ಆದರೆ ಇಲ್ಲೊಂದು ಅರ್ಧ ದಶಕದ ಉರ್ದು ಶಾಲೆ ಈಗ ಶಿಥಿಲಾವಸ್ಥೆ ತಲುಪಿದ್ದು ಶಾಲೆ ಕಾಯಕಲ್ಪಕ್ಕಾಗಿ ಕಾಯ್ದಿದೆ. ತಾಲೂಕಿನ ಅತನೂರ ಗ್ರಾಮದ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿಯಾಗಿದೆ.
ಗಣಮುಖೆ ಸಚಿವರಿದ್ದಾಗ ನಿರ್ಮಾಣವಾದ ಶಾಲೆ: ಅಂದಿನ ಮೈಸೂರು ಸರ್ಕಾರದಲ್ಲಿ ಅಫಜಲಪುರದ ಮಾಜಿ ಶಾಸಕರಾದ ಅಣ್ಣಾರಾವ್ ಗಣಮುಖೆ ಶಿಕ್ಷಣ ಸಚಿವರಾಗಿದ್ದಾಗ ಈ ಶಾಲೆ ನಿರ್ಮಿಸಲಾಗಿದೆ. ಅಂದಿನಿಂದ ಇಲ್ಲಿನ ವರೆಗೆ
ಶಾಲೆಗೆ ಕಾಯಕಲ್ಪವನ್ನು ಯಾವ ಶಾಸಕರು ಕಲ್ಪಿಸಿಲ್ಲ.
ಕುಸಿಯುವ ಹಂತದಲ್ಲಿದೆ ಮೇಲ್ಛಾವಣಿ: ಅತನೂರ ಗ್ರಾಮದ ಗ್ರಾಪಂ ಪಕ್ಕದಲ್ಲಿರುವ 1ರಿಂದ 7ನೇ ತರಗತಿ ವರೆಗಿನ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆ ಮೇಲ್ಛಾವಣಿ ಕುಸಿಯುವ ಹಂತ ತಲುಪಿದೆ. ಈ ಶಾಲೆ 1960ರಲ್ಲಿ ಆರಂಭವಾದಾಗಿನಿಂದ ಇಲ್ಲಿನ ತನಕ ದುರಸ್ತಿಯನ್ನು ಮಾಡಿಸಿಲ್ಲ. ಹೀಗಾಗಿ ಮೇಲ್ಛಾವಣಿ ಸಂಪೂರ್ಣ ಕುಸಿಯುವ ಹಂತಕ್ಕೆ ತಲುಪಿದೆ. ಇಂತಹ ಅಪಾಯಕಾರಿ ಶಾಲಾ ಕೊಣೆಗಳಲ್ಲಿ ಮಕ್ಕಳು ಪಾಠ ಕಲಿಯುವಂತೆ ಆಗಿದೆ.
ಇದ್ದು ಇಲ್ಲದಂತಿರುವ ಕಾಂಪೌಂಡ ಗೋಡೆ, ಶೌಚಾಲಯ: ಈ ಶಾಲೆ ಅತನೂರ ಗ್ರಾ.ಪಂ ಪಕ್ಕದಲ್ಲಿಯೇ ಇದೆ. ಅತನೂರ ಗ್ರಾಮದ ಜನನಿಬೀಡ ಪ್ರದೇಶದಲ್ಲಿ ಇರುವುದರಿಂದ ವಾಹನಗಳು, ಜನ ಜಂಗುಳಿ ಹೆಚ್ಚಾಗಿರುತ್ತದೆ. ಹೀಗಾಗಿ ಮಕ್ಕಳಿಗೆ ಪಾಠ ಕೇಳಲು ಕಿರಿಕಿರಿ ಆಗಬಾರದು ಎಂದು ಕಾಂಪೌಂಡ್ ಗೋಡೆ ಕಟ್ಟಿಸಲಾಗಿತ್ತು. ಆದರೆ ಕಾಂಪೌಂಡ್
ಗೋಡೆಯನ್ನು ಕಿಡಿಗೇಡಿಗಳು ಒಡೆದಿದ್ದಾರೆ.
ಅಲ್ಲದೆ ಶಾಲೆಯಲ್ಲಿ ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರಿಗಾಗಿ ನಿರ್ಮಿಸಿರುವ ಶೌಚಾಲಯ ಉಪಯೋಗಕ್ಕೆ ಬಾರದಂತಾಗಿದೆ. ಕುಡಿಯುವ ನೀರನ ತೊಂದರೆಯು ಇರುವುದರಿಂದ ಶಾಲೆಯಲ್ಲಿನ ಶೌಚಾಲಯ ಬಳಕೆ
ಮಾಡಲಾಗುತ್ತಿಲ್ಲ.
ಸೌಲಭ್ಯ ಕಲ್ಪಿಸಲು ಆಗ್ರಹ: ಈ ಶಾಲೆ ಐದಾರು ದಶಕಗಳ ಹಿಂದೆ ನಿರ್ಮಾಣವಾಗಿದ್ದು, ಈಗ ಇದಕ್ಕೆ ಕಾಯಕಲ್ಪ ಬೇಕಾಗಿದೆ. ಶಾಲೆಯ ಮೇಲ್ಛಾವಣಿ ದುರಸ್ತಿ, ಸುಸಜ್ಜಿತ ಶೌಚಾಲಯ, ಕಾಂಪೌಂಡ್ ಗೋಡೆ ನಿರ್ಮಾಣ ಹಾಗೂ ಕುಡಿಯುವ ನೀರಿನ ಸೌಕರ್ಯಕಲ್ಪಿಸಬೇಕಾಗಿದೆ. ಸಂಬಂಧಪಟ್ಟವರು ಗಮನ ಹರಿಸಿ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಶಿಕ್ಷಕರು, ಮಕ್ಕಳು ಮತ್ತು ಪಾಲಕರು ಆಗ್ರಹಿಸಿದ್ದಾರೆ
ಶಾಲೆಯ ಮೇಲ್ಛಾವಣಿ ಬೀಳುವ ಹಂತಕ್ಕೆ ತಲುಪಿದ್ದರಿಂದ ಮೇಲ್ಛಾವಣಿಯ ಭಾವಚಿತ್ರ ತೆಗೆದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ತಾಪಂಗೆ ಪತ್ರ ಬರೆದು ಸಮಸ್ಯೆ ತಿಳಿಸಿದ್ದೇನೆ. ಪರಿಶೀಲಿಸಿ, ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಮಹಿಬೂಬ್ ಬಾಗವಾನ್, ಮುಖ್ಯಶಿಕ್ಷಕ ಸ.ಹಿ.ಪ್ರಾ ಉರ್ದು ಶಾಲೆ, ಅತನೂರ
ಮಲ್ಲಿಕಾರ್ಜುನ ಹಿರೇಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್
Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೆವು?: ಖಂಡ್ರೆ
Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ
Minister ಪ್ರಿಯಾಂಕ ಖರ್ಗೆ ಉದ್ಧಟತನ ಅತಿಯಾಗಿದೆ: ಸಂಸದ ಡಾ.ಜಾಧವ್
MUST WATCH
ಹೊಸ ಸೇರ್ಪಡೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ
ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!