ಧರ್ಮದ ಗಡಿಯಾಚೆ ಮಾನವೀಯತೆ: ಖಾದ್ರಿ


Team Udayavani, Jan 1, 2018, 11:46 AM IST

gul-5.jpg

ವಾಡಿ: ಧರ್ಮದೊಳಗಿನ ಬಂಧು ಮಿತ್ರರನ್ನು ಪ್ರೀತಿ ಸ್ನೇಹದಿಂದ ಕಾಣುವುದು ಮುಖ್ಯವಲ್ಲ. ಧರ್ಮದ
ಗಡಿಯಾಚೆಗಿನ ಅನ್ಯ ಕೋಮಿನ ಜನರನ್ನು ಸಹೋದರರಂತೆ ಕಾಣುವುದೇ ನಿಜವಾದ ಮಾನವೀಯತೆ ಎಂದು
ಮುಸ್ಲಿಂ ಸಮಾಜದ ಮುಖಂಡ, ದರ್ಗಾದ ಸಜ್ಜಾದ್‌ ನಸೀನ್‌ ಸೈಯ್ಯದ್‌ ಮುಸ್ತಫಾ ಖಾದ್ರಿ ಹೇಳಿದರು.

ರಾವೂರ ಗ್ರಾಮದ ಹಜರತ್‌ ಮಹೆಬೂಬ್‌ ಸುಭಾನಿ ದರ್ಗಾದ 111ನೇ ಉರೂಸ್‌ ನಿಮಿತ್ತ ಏರ್ಪಡಿಸಲಾಗಿದ್ದ
ಸರ್ವಧರ್ಮ ಸಮ್ಮೇಳನ ಹಾಗೂ ಖವ್ವಾಲಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ಮನುಷ್ಯ ಮನುಷ್ಯರನ್ನು ಸ್ನೇಹದಿಂದ ಕಾಣದ ಧರ್ಮ ಧರ್ಮವಲ್ಲ. ಕೋಮು ದ್ವೇಷ ಸಮಾಜವನ್ನು ಸುಟ್ಟು ಹಾಕುತ್ತಿದೆ. ಮಾನವ ಸಂಬಂಧಗಳು ನಾಶವಾಗುತ್ತಿವೆ. ಪರಸ್ಪರ ಸಹೋದರತೆಯಿಂದ ಭಾರತೀಯನಾಗಿ ಬದುಕುವ
ವಾತಾವರಣ ಸೃಷ್ಟಿಯಾಗಬೇಕಿದೆ. 

ಅಂತಹ ಮಾನವೀಯ ಮೌಲ್ಯಗಳನ್ನು ಪಸರಿಸುವ ಕಾರ್ಯ ನಡೆಯಬೇಕಿದೆ ಎಂದು ಹೇಳಿದರು. ಪ್ರಾಸ್ತಾವಿಕವಾಗಿ
ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಮಹೆಬೂಬ್‌ ಎಂ. ಆರ್‌., ಭಾರತದಲ್ಲಿ ನೂರಾರು ಜಾತಿ-ಧರ್ಮಗಳಿವೆ.
ಜೀವನದಲ್ಲಿ ವಿಭಿನ್ನ ಆಚರಣೆಗಳಿವೆ. 

ಆದರೂ ಸಂವಿಧಾನ ನಮ್ಮೆಲ್ಲರಿಗೂ ಹಕ್ಕುಗಳನ್ನು ಕೊಟ್ಟು ಒಗ್ಗಟ್ಟಿನಿಂದ ಬದುಕಲು ಅವಕಾಶ ನೀಡಿದೆ. ಧಾರ್ಮಿಕ
ವಿಚಾರಗಳು ಮಾಡದ ಕಾರ್ಯವನ್ನು ಸಂಗೀತ ಮತ್ತು ಸಾಹಿತ್ಯ ಮಾಡಬಲ್ಲದು. ಖವ್ವಾಲಿ ಗಾಯನ ಸರ್ವರನ್ನೂ
ಒಂದುಗೂಡಿಸುವ ಶಕ್ತಿಯಿದೆ ಎಂದು ಹೇಳಿದರು.

ಕಲಬುರಗಿಯ ಸೈಯ್ಯದ್‌ ಶಹಾ ಮುರ್ತೂಜಾ ಖ್ವಾದ್ರಿ ದರ್ಗಾದ ಧರ್ಮಗುರು ಆರೀಫುಲ್ಲಾ ಖಾದ್ರಿ, ತಾಪಂ ಮಾಜಿ ಸದಸ್ಯ ಸೂರ್ಯಕಾಂತ ಕಟ್ಟಿಮನಿ, ಜಿಪಂ ಮಾಜಿ ಸದಸ್ಯ ಡಾ| ಗುಂಡಣ್ಣ ಬಾಳಿ, ಮುಖಂಡ ಬಸವರಾಜ ಮಾಕಾ ಮಾತನಾಡಿದರು.

ಗ್ರಾಪಂ ಅಧ್ಯಕ್ಷ ವೆಂಕಟೇಶ ಕಟ್ಟಿಮನಿ, ತಿಪ್ಪಣ್ಣ ವಗ್ಗರ, ದೇವಿಂದ್ರ ತಳವಾರ, ಹಣಮಂತ ಹೊನಗೇರಿ, ಮೋಹನ
ಸೂರೆ, ಅಹ್ಮದ್‌ ಮಾಸ್ತಾರ, ಸುರೇಶ ಪಂಚಾಳ, ಇಲಿಯಾಸ್‌ ಸೇಠ, ಅಮೀರ್‌ ಮೂಸಾವಾಲೆ, ಜಾವೀದ್‌ ಕರ್ನೂಲ,
ಜಹಾಂಗೀರ ಸೇಠ ವಾಡಿ, ಜಾಫರ್‌ ಕರ್ನೂಲ, ಯೂನ್ಯೂಸ್‌ ಪ್ಯಾರೆ, ರಾಜು ಬೊಮ್ಮಣ್ಣ, ಹಾಜಿ ಕರೀಮಸಾಬ,
ಉಸ್ಮಾನ್‌ ಪಟೇಲ, ಮಹೇಶ ನೆಲೋಗಿ, ಅಲ್ಲಾಬಕ್ಷ ಮೌಜನ್‌, ಮಿಯ್ನಾ ಪಟೇಲ, ನವಾಬ್‌ ಪಟೇಲ ಪಾಲ್ಗೊಂಡಿದ್ದರು.

ಮಹೆಬೂಬ್‌ ಖಾನ್‌ ಧರಿ ಸ್ವಾಗತಿಸಿದರು. ಮಲ್ಲಿಕಪಾಶಾ ಮೌಜನ್‌ ವಂದಿಸಿದರು. ವಿವಿಧೆಡೆಯಿಂದ ಆಗಮಿಸಿದ್ದ ಸಂಗೀತ ಕಲಾವಿದರು ಖವ್ವಾಲಿ ಕಾರ್ಯಕ್ರಮ ನಡೆಸಿಕೊಟ್ಟರು

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

1—-wewewqe

Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ

ಸಚಿವರು ಲೀಡ್‌ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್‌

ಸಚಿವರು ಲೀಡ್‌ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.