ತಡಕಲ್ ಗ್ರಾಮ ಪಂಚಾಯತ್ನಲ್ಲಿ ಪತಿ-ಪತ್ನಿಗೆ ಗೆಲುವು
Team Udayavani, Jan 2, 2021, 3:14 PM IST
ಆಳಂದ: ತಡಕಲ್ ಗ್ರಾಪಂ ವ್ಯಾಪ್ತಿಯ ಕಣಮಸ್ ಗ್ರಾಮದಲ್ಲಿ ಪತಿ-ಪತ್ನಿಯರು ಗೆಲುವು ಸಾಧಿಸಿದ್ದಾರೆ. ಕಣಮಸ್ ಗ್ರಾಮದ ವಾರ್ಡ್ ಸಾಮಾನ್ಯ ಸ್ಥಾನಕ್ಕೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ನಾಗೇಂದ್ರ ಥಂಬೆ ಅವರು ಸ್ಪರ್ಧಿಸಿ 507 ಮತಗಳು ಪಡೆದು 2ನೇ ಬಾರಿಗೆ ಗೆಲವು ಸಾಧಿಸಿದ್ದಾರೆ. ಅವರ ಪತ್ನಿ ಪಾರ್ವತಿ ನಾಗೇಂದ್ರ ಥಂಬೆ ಮತ್ತೂಂದಡೆ ಸಾಮಾನ್ಯ ಮಹಿಳಾ ಸ್ಥಾನಕ್ಕೆ ಸ್ಪರ್ಧಿಸಿ 453 ಮತ ಪಡೆದು ವಿಜಯ ಸಾಧಿಸಿದ್ದಾರೆ.
ತಡಕಲ ಗ್ರಾಮದ ರೈತ, ಕಾರ್ಮಿಕ ಹೋರಾಟದಲ್ಲಿ ತೋಡಗುತ್ತಲೇ ಎರಡು ಬಾರಿ ಸೋಲನುಭವಿಸಿದ್ದಕಲ್ಯಾಣಿ ತುಕಾಣೆ ಅವರ ಪತ್ನಿ ಮಹಾನಂದ ತುಕಾಣೆಅವರು ಈ ಬಾರಿ 27 ಮತ ಗಳಿಂದ ಗೆಲುವು ಸಾಧಿ ಸಿದ್ದಾರೆ. ಇದೇ ಗ್ರಾಮದ ಔಷಧ ವ್ಯಾಪಾರಿ ವಿಶ್ವನಾಥ ಬಸವರಾಜಪವಾಡಶೆಟ್ಟಿ ಗೆಲುವು ಸಾಧಿಸಿದ್ದಾರೆ. ಉದ್ಯೋಗ ಖಾತ್ರಿಕಾರ್ಮಿಕ ಬಂಧು ದಲಿತ ಬಡಾವಣೆಯ ಬಸವರಾಜ ಬೆಳಮಗಿಗೆ ಮತದಾರರು ಕೈಹಿಡಿದ್ದಾರೆ.
ಕಾರ್ಮಿಕ ಬಂದು ಗೆಲುವು: ಕಿಣ್ಣಿ ಸುಲ್ತಾನ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಲೇಗಾಂವ ಗ್ರಾಮದಲ್ಲಿ ಕಾರ್ಮಿಕ ಬಂದು ಶರಣಪ್ಪ ಕುಂಬಾರ ಎಂಬುವ ವ್ಯಕ್ತಿ ಪಕ್ಷೇತ್ರನ್ನಾಗಿ ಜಯಶಾಲಿಯಾಗಿ ದ್ದಾನೆ. ಇದೇ ಗ್ರಾಮದಕೃಷ್ಣಾ ಕಾಂಬಳೆ ಎಂಬುವ ವ್ಯಕ್ತಿ ಮೀಸಲು ಕ್ಷೇತ್ರದ ಬದಲು ಸಾಮಾನ್ಯ ಕ್ಷೇತ್ರದಲ್ಲಿ ಗೆಲುವು ಸಾ ಧಿಸಿದ್ದು,ಕಾಂಬಳೆಯವರ ಅದೃಷ್ಟದ ಬಾಗಿಲು ಮತ್ತೂಮ್ಮೆತೆರೆದುಕೊಂಡಿದೆ. ಕಳೆದ ಬಾರಿ ಸೋತ್ತಿದ್ದ ಸಾಲೇಗಾಂವ ಗ್ರಾಮದ ಕುಪೇಂದ್ರ ವಡಗಾಂವ ಅವರನ್ನು ಈ ಬಾರಿ ಮತದಾರರು ಕೈ ಹಿಡಿದಿದ್ದಾರೆ.
ಕೊರಳ್ಳಿ ಗ್ರಾಮದ ವಾರ್ಡ್ 2ರಲ್ಲಿ ಗುರುರಾಜ ಶಶಿಕಾಂತ ಪಾಟೀಲ ಅವರು 571 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಲಕ್ಷ್ಮಣ ಎಂಬುವರಿಗೆ ಕೇವಲ137 ಮತಗಳು ಪಡೆದಿದ್ದು, ಗುರುರಾಜ್ ಅವರು ತಾಲೂಕಿನಲ್ಲೇ ಅತಿ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಪಡೆದಿರುವುದು ವಿಶೇಷ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಶೋಕಿಗಾಗಿ ನಕಲಿ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್
Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೆವು?: ಖಂಡ್ರೆ
Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ
MUST WATCH
ಹೊಸ ಸೇರ್ಪಡೆ
Belthangady: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ
NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ
Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್ ಕಾನ್ಸ್ಟೆಬಲ್ ಗೆ ಗಾಯ
Brahmavara: ವಿದ್ಯುತ್ ಕಂಬ ಮುರಿದು ಬಿದ್ದು ಯುವಕ ಮೃತ್ಯು