ಸೇತುವೆ ಮುಳುಗಿದರೆ ಬದುಕು ದುಸ್ತರ
Team Udayavani, Oct 29, 2019, 10:46 AM IST
ಸೇಡಂ: ಇಲ್ಲಿನ ಶಾಲಾ ಮಕ್ಕಳಿಗೆ ರಜೆ ಅವಶ್ಯಕತೆ ಇಲ್ಲ. ನದಿ ನೀರು ಬಂದರೆ ಸಾಕು ಶಾಲೆಗೆ ರಜೆ. ತಾಲೂಕಿನ ಸಂಗಾವಿ(ಟಿ) ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಬ್ರಿಡ್ಜ್ ನ ನದಿ ನೀರಿನಿಂದ ಮುಳಗಡೆಯಾಗಿ ದಿನಗಳೇ ಕಳೆದಿವೆ.
ಟೊಂಕದೆತ್ತರಕ್ಕೆ ನೀರು ಬಂದು ನಿಂತಿದೆ. ಅದೇ ನೀರಲ್ಲಿ ಜೀವದ ಹಂಗು ತೊರೆದು ವಿದ್ಯಾರ್ಥಿಗಳು ಶಾಲೆಗೆ ಹೋಗಬೇಕು. ಗ್ರಾಮಸ್ಥರು ದಿನನಿತ್ಯ ತೆರಳಬೇಕು. ಸ್ವಲ್ಪ ಯಾಮಾರಿದರೂ ಯಮನ ಪಾದ ಗ್ಯಾರಂಟಿ.
ನದಿ ಬ್ರಿಡ್ಜ್ ಪ್ರವಾಹದಿಂದ ಮುಳುಗಡೆಯಾಗಿದೆ ಎಂದು ಅರ್ಥೈಸಿದ್ದರೆ ಅದು ಸುಳ್ಳು, ಈ ಬ್ರಿಡ್ಜ್ ಮುಳುಗಿರುವುದು ಸ್ವಲ್ಪ ದೂರದಲ್ಲೇ ಇರುವ ಬ್ರಿಡ್ಜ್ ಕಂ ಬ್ಯಾರೇಜ್ ಬಾಗಿಲು ಮುಚ್ಚಿರುವುದರಿಂದ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳನ್ನು ಪ್ರಶ್ನಿಸಿದರೆ ಮೇಲಧಿ ಕಾರಿಗಳ ನಿರ್ದೇಶನದಂತೆ ಬ್ರಿಡ್ಜ್ ಮುಚ್ಚಲಾಗಿದೆ. ಏನೂ ಮಾಡೋಕ್ಕಾಗಲ್ಲ ಎಂಬ ಉತ್ತರ ದೊರೆಯುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು. ಒಟ್ಟಾರೆಯಾಗಿ ಬದುಕಿನ ಬಂಡಿ ಸಾಗಿಸುವ ಬಡ ಜನರಿಗೆ ಸೌಕರ್ಯಗಳೂ ಸಹ ಹೆಚ್ಚುತ್ತಿವೆ. ಸಮಸ್ಯೆಗಳು ಸಹ ಉಲ್ಬಣಿಸುತ್ತಿವೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ.
ಅನೇಕ ದಿನಗಳಿಂದ ಬ್ರಿಡ್ಜ್ ಮೇಲೆ ನೀರು ಬಂದಿವೆ. ನೀರಾವರಿ ಇಲಾಖೆಯವರು ಬ್ಯಾರೇಜ್ ಬಂದ್ ಮಾಡಿರುವುದರಿಂದ ಸಮಸ್ಯೆ ಎದುರಾಗಿದೆ. ಶಾಸಕರು, ಮೇಲಧಿಕಾರಿಗಳನ್ನು ಕೋರಿ ಕೋರಿ ಸಾಕಾಗಿದೆ. ಯಾರೂ ಸಹ ಸಹಾಯಕ್ಕೆ ಬರುತ್ತಿಲ್ಲ. ಕೇಳಿದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಬ್ಯಾರೇಜ್ ತೆರೆದು ನೀರು ಬಿಟ್ಟರೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಬ್ರಿಡ್ಜ್ ಸಂಚಾರಕ್ಕೆ ಮುಕ್ತವಾಗುತ್ತದೆ. -ಅಕ್ರಮ್, ಗ್ರಾಮಸ್ಥ
ಬ್ರಿಡ್ಜ್ ತೆರೆಯಿರಿ ಎಂದು ಅಧಿಕಾರಿಗಳಿಗೆ ದುಂಬಾಲು ಬಿದ್ದರೂ ಸಹ ಪ್ರಯೋಜನವಾಗಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯವಹಿಸುತ್ತಿದ್ದಾರೆ. ಪ್ರತಿನಿತ್ಯ ಮಕ್ಕಳು ನದಿಯಲ್ಲಿ ಜೀವದ ಹಂಗು ತೊರೆದು ಶಾಲೆಗೆ ತೆರಳುವ ದುಸ್ಥಿತಿ ಎದುರಾಗಿದೆ. –ವಿಜಯಕುಮಾರ ಮುಗಟಿ, ನಿವಾಸಿ
-ಶಿವಕುಮಾರ ಬಿ. ನಿಡಗುಂದಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್
Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೆವು?: ಖಂಡ್ರೆ
Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ
Minister ಪ್ರಿಯಾಂಕ ಖರ್ಗೆ ಉದ್ಧಟತನ ಅತಿಯಾಗಿದೆ: ಸಂಸದ ಡಾ.ಜಾಧವ್
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ