ಭೀಮಾ ತೀರದಲ್ಲಿ ಪುಂಡಪೋಕರಿಗಳ ಕಾಟ
Team Udayavani, May 5, 2020, 5:07 PM IST
ಜೇವರ್ಗಿ: ತಾಲೂಕಿನ ಕೋನಾಹಿಪ್ಪರಗಿ ಗ್ರಾಮದ ಬಳಿಯ ಭೀಮಾನದಿ ತೀರ ಪುಂಡಪೋಕರಿಗಳ ಗುಂಡು ಪಾರ್ಟಿ, ಪ್ರಣಯ ಪಕ್ಷಿಗಳ ಮೋಜು ಮಸ್ತಿ ಅಡ್ಡೆಯಾಗಿದೆ.
ತಾಲೂಕಿನ ಕೋನಾಹಿಪ್ಪರಗಿ-ಸರಡಗಿ ನಡುವೆ ಭೀಮಾ ನದಿಗೆ ಇತ್ತೀಚೆಗೆ 54 ಕೋಟಿ ರೂ. ವೆಚ್ಚದ ಸೇತುವೆ ನಿರ್ಮಿಸಲಾಗಿದೆ. ಸೇತುವೆ ಕೇಳಗೆ ಕಣ್ಣಾಡಿಸದರೆ ಸಾಕು ಮದ್ಯದ ಖಾಲಿ ಬಾಟಲಿ, ನೀರಿನ ಬಾಟಲ್, ಸಿಗರೇಟ್ ಪ್ಯಾಕ್, ಪ್ಲಾಸ್ಟಿಕ್ ಗ್ಲಾಸ್, ಲೋಟ, ಇಸ್ಪಿಟ್ ಎಲೆಮ ಮಾಂಸದ ತುಂಡುಗಳು ಕಣ್ಣಿಗೆ ಬೀಳುತ್ತವೆ. ಭೀಮಾ ನದಿ ತೀರದಲ್ಲಿ ಕೆಲ ಪುಂಡರು ಮಧ್ಯಪಾನ, ಮಾಂಸ ಸುಟ್ಟು ತಿನ್ನುವುದನ್ನು ಮಾಡುತ್ತಿದ್ದಾರೆ. ಕೆಲವರು ನದಿಯಲ್ಲಿ ಸ್ನಾನ ಮಾಡಿದ ಮೇಲೆ ಬಟ್ಟೆಗಳನ್ನು ಅಲ್ಲಿಯೇ ಎಸೆದು ಹೋಗುತ್ತಿದ್ದಾರೆ. ಇದರಿಂದ ಭೀಮಾ ನದಿ ಕಲುಷಿತವಾಗುತ್ತಿದೆ. ಅಲ್ಲದೇ ನದಿ ಪಾತ್ರದಲ್ಲಿಯೇ ಅಡುಗೆ ಮಾಡಿ, ಅಲ್ಲಿಯೇ ಊಟ ಮಾಡಿ ಉಳಿದ ಪದಾರ್ಥವನ್ನು ಬಿಸಾಡಿ ಹೋಗುತ್ತಿದ್ದಾರೆ. ಕೆಲವರಂತೂ ನಿಸರ್ಗ ಕ್ರಿಯೆ ತಾಣವನ್ನಾಗಿ ಮಾಡಿಕೊಂಡಿದ್ದಾರೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡಲು ಆಹ್ವಾನ ಕೊಟ್ಟಂತಾಗಿದೆ.
ಕಲಬುರಗಿ ನಗರ ಸೇರಿದಂತೆ ವಿವಿಧ ಕಡೆಗಳಿಂದ ಈ ಸೇತುವೆ ಕೆಳಗೆ ಬೇಸಿಗೆ ಕಾಲದಲ್ಲಿ ತಂಪು ವಾತಾವರಣ ಇರುತ್ತದೆ ಎನ್ನುವ ಕಾರಣಕ್ಕೆ ನಿತ್ಯ ಹಲವಾರು ಜನ ಬರುತ್ತಿದ್ದು, ಬಂದವರ ಪೈಕಿ ಕೆಲವರು ಈಜಾಡಿ ವಿಶ್ರಾಂತಿ ಪಡೆದರೇ, ಕೆಲವರು ಮದ್ಯ ಸೇವನೆ ಮಾಡಿ, ಮಾಂಸದ ಅಡುಗೆ ಮಾಡಿಕೊಂಡು ಊಟ ಮಾಡುತ್ತಿದ್ದಾರೆ. ಬೇಸಿಗೆಯಲ್ಲಿ ಮೊದಲೇ ಅಲ್ಪಸ್ವಲ್ಪ ನೀರನ್ನು ಒಡಲಿನಲ್ಲಿ ಇರಿಸಿಕೊಂಡಿರುವ ಭೀಮೆಯಲ್ಲಿ ಈ ರೀತಿಯ ಹೊಲಸು ಮಾಡುವುದರಿಂದ ಜಲಚರಗಳಿಗೆ ಕುತ್ತು ಬಂದೊದಗಿದೆ. ಈ ಕುರಿತು ಸಂಬಂಧಪಟ್ಟವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.
ಜೇವರ್ಗಿ ಹಾಗೂ ಫರತಾಬಾದ ಪೊಲೀಸ್ ಠಾಣೆಯಿಂದ ತಲಾ ಒಬ್ಬ ಪೊಲೀಸ್ ಪೇದೆಯನ್ನು ನಿಯೋಜಿಸಿ ಭೀಮಾ ನದಿ ದಂಡೆ ಮೇಲೆ ಮೋಜು ಮಸ್ತಿ ನಡೆಸುವ ಪುಂಡಪೋಕರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆಯಾ ಠಾಣೆಯ ಸಬ್ ಇನ್ಸ್ ಪೆಕ್ಟರ್ಗಳಿಗೆ ಸೂಚಿಸಲಾಗುವುದು.– ಸಿದರಾಯ ಭೋಸಗಿ, ತಹಶೀಲ್ದಾರ್
-ವಿಜಯಕುಮಾರ ಎಸ್.ಕಲ್ಲಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್
ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ
Kalaburagi; ಮೋದಿ ಗ್ಯಾರಂಟಿಗೆ ನೋ ವಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ
MUST WATCH
ಹೊಸ ಸೇರ್ಪಡೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ
Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್