ಅಕ್ರಮ ಪಡಿತರ ಸಾಗಾಟ: 404 ಕ್ವಿಂಟಲ್ ಅಕ್ಕಿ ಜಪ್ತಿ
Team Udayavani, Jan 25, 2022, 11:35 AM IST
ಅಫಜಲಪುರ: ಬಡವರಿಗಾಗಿ ಸರ್ಕಾರದಿಂದ ಬರುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ 404 ಕ್ವಿಂಟಲ್ ಅಕ್ಕಿ ವಶಕ್ಕೆ ಪಡೆದ ಘಟನೆ ಜರುಗಿದೆ.
ಖಚಿತ ಮಾಹಿತಿ ಮೇರೆಗೆ ತಹಶೀಲ್ದಾರ್ ನಾಗಮ್ಮ ಕಟ್ಟಿಮನಿ ಮಾರ್ಗದರ್ಶನದಲ್ಲಿ ಆಹಾರ ಶಿರಸ್ತೇದಾರ್ ಕೃಷ್ಣಾಚಾರ ಪೂಜಾರಿ, ಆಹಾರ ನಿರೀಕ್ಷಕ ಹರಿದಾಸ ಚೌಪಡೆ, ಪ್ರಭಾರ ಆಹಾರ ನಿರೀಕ್ಷಕ ಮಹಮದ್ ಶೋಹೆಬ್ ಪಟೇಲ್ ಅವರು ಪಟ್ಟಣದ ಹಳೆ ಬಜಾರ್ನಲ್ಲಿರುವ ಎರಡು ಅಂಗಡಿಗಳ ಮೇಲೆ ದಾಳಿ ನಡೆಸಿ 202.80 ಕ್ವಿಂಟಲ್ ಅಕ್ಕಿ ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಅಕ್ಕಿ ಸಾಗಿಸಲು ತಂದಿದ್ದ ಲಾರಿಯಲ್ಲೂ ಸಹ 202.10 ಕ್ವಿಂಟಲ್ ಅಕ್ಕಿ ಸಂಗ್ರಹವಿತ್ತು.
ಒಟ್ಟು ಎರಡು ಸೇರಿ 404.90 ಕ್ವಿಂಟಲ್ ಅಕ್ಕಿ ಇದ್ದು ಸುಮಾರು 10.12 ಲಕ್ಷ ಮೌಲ್ಯದ ಅಕ್ಕಿ ಇದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಸ್ಥಳಕ್ಕೆ ಸಿಪಿಐ ಜಗದೇವಪ್ಪ ಪಾಳಾ, ಕ್ರೈಂ ಪಿಎಸ್ಐ ಸುರೇಶಬಾಬು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು