ಕೊಲೆ ಆರೋಪಿಗಳಿಗೆ ಸೆರೆವಾಸ
Team Udayavani, Jan 31, 2019, 9:08 AM IST
ಸೇಡಂ: ಜಮೀನು ವಿವಾದ ಸಂಬಂಧ ಮಹಿಳೆಯೊಬ್ಬರ ಕತ್ತು ಕೊಯ್ದು ಕೊಲೆ ಮಾಡಿದ ಆರೋಪಿಗಳನ್ನು ಬುಧವಾರ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಪ್ರಕರಣದ ಪ್ರಮುಖ ಆರೋಪಿ ದಿನೇಶ ನಾಗೇಂದ್ರಪ್ಪ ಎನ್ನುವನನ್ನು ಮಂಗಳವಾರ ಬಂಧಿಸಿ, ನಂತರ ಶಸ್ತ್ರಾಸ್ತ ಬಚ್ಚಿಟ್ಟಿದ್ದನ್ನು ಪರೀಕ್ಷಿಸುವ ವೇಳೆ ಹಲ್ಲೆ ನಡೆಸಿದಾಗ ಗುಂಡಿನ ದಾಳಿ ನಡೆಸಲಾಗಿತ್ತು. ಕೊಲೆಗೆ ಸಹಕರಿಸಿದ ಈತನ ಸಹೋದರ ಸತೀಶನನ್ನು ಕಾರಾಗೃಹಕ್ಕೆ ಅಟ್ಟಲಾಗಿದೆ.
ಕೊಲೆಗೆ ನಡೆದಿತ್ತು ಸಂಚು: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ತನ್ನ ಸಂಬಂಧಿ ಶರಬಾವತಿಯನ್ನು ಕೊಲೆ ಮಾಡಲು ಎರಡು ವಾರಗಳಿಂದ ದಿನೇಶ ಹಾಗೂ ಸತೀಶ ಸಂಚು ರೂಪಿಸಿದ್ದರು. ಇದಕ್ಕಾಗಿಯೇ ಪ್ರತಿ ರವಿವಾರವೂ ಸಂತೆಗೆ ಆಗಮಿಸಿ ಪ್ರಯತ್ನಿಸಿ ವಿಫಲವಾಗಿದ್ದರು. ರವಿವಾರವೂ ಹೀಗೆ ಆದಾಗ, ಬೇಸತ್ತ ದಿನೇಶ ಜನಜಂಗುಳಿ ಮಧ್ಯೆಯೇ ಕೊಲೆ ಮಾಡಿದ್ದ. ನಂತರ ಗ್ರಾಮದ ಸಮೀಪವಿರುವ ಬ್ರಿಡ್ಜ್ ಕೆಳಗೆ ಕೊಲೆಗೆ ಬಳಸಿದ್ದ ತಲವಾರ್ ಅವಿತಿಟ್ಟು, ಕಲಬುರಗಿಗೆ ಹೋಗಿದ್ದ.
ಪೊಲೀಸ ಕಾರ್ಯ ಶ್ಲಾಘನೀಯ: ಕೊಲೆ ಮಾಡಿದ ನಂತರ ಕಲಬುರಗಿಗೆ ಪಯಣ ಬೆಳೆಸಿದ ದಿನೇಶ ತನ್ನ ಹಳೆ ಗೆಳೆಯರೊಂದಿಗೆ ಸಂಪರ್ಕ ಸಾಧಿಸಿದ್ದ. ಕೆಲವರಿಂದ ಖರ್ಚಿಗೆ ಹಣ ಕೇಳಿದ್ದ. ತನ್ನ ಮೊಬೈಲ್ನ್ನು ಮನೆಯಲ್ಲೇ ಬಿಟ್ಟು ಹೋಗಿದ್ದ. ಇದೇ ವೇಳೆ ದಾರಿಹೋಕರ ಮೊಬೈಲ್ ಪಡೆದು ಗೆಳೆಯರಿಂದ ಸಹಾಯಕ್ಕೆ ಅಂಗಲಾಚಿದ್ದ. ಇದರಿಂದ ಈತನನ್ನು ಬಂಧಿಸುವುದು ಕಷ್ಟಸಾಧ್ಯವಾಗಿತ್ತು.
ಸಿಪಿಐ ಶಂಕರಗೌಡ ಪಾಟೀಲ, ಪಿಎಸ್ಐ ಸುಶೀಲಕುಮಾರ, ಪಿಸಿಗಳಾದ ಮಾರುತಿ, ವಿಠuಲರೆಡ್ಡಿ, ಅಲ್ಲಾಭಕ್ಷ, ಮಲ್ಕಪ್ಪ ತಂಡ ಆರೋಪಿಯ ಹಳೆಯ ಗೆಳೆಯರ ಸಂಪರ್ಕ ಸಾಧಿಸಿದ್ದರು. ಆಗ ಆರೋಪಿ ಮುಂಬೈಗೆ ತೆರಳಲು ಸಿದ್ಧತೆ ನಡೆಸಿರುವುದು ತಿಳಿದುಬಂದಿತ್ತು. ಆಗ ಬಸ್ ನಿಲ್ದಾಣ, ರೈಲು ನಿಲ್ದಾಣದಲ್ಲಿ ಪೊಲೀಸರು ಕಾಯ್ದು ಕುಳಿತಿದ್ದರು. ಈ ಕುರಿತು ಸುಳಿವು ದೊರೆತ ದಿನೇಶ ಕಲಬುರಗಿಯಲ್ಲೇ ಉಳಿದಿದ್ದ. ನಂತರ ಹೊಟೇಲವೊಂದರಲ್ಲಿ ಉಪಹಾರ ಸೇವಿಸುತ್ತಿದ್ದ ವೇಳೆ ಪೊಲೀಸರ ಬಲೆಗೆ ಬಿದ್ದಿದ್ದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
MUST WATCH
ಹೊಸ ಸೇರ್ಪಡೆ
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು: ಜಯಪ್ರಕಾಶ್ ಹೆಗ್ಡೆ