ಸಂಕಷ್ಟಕ್ಕೆ ಸಿಲುಕಿದ ಕೃಷಿಕನ ನೆರವಿಗೆ ಸಿಗದ ವಿಮೆ


Team Udayavani, Oct 28, 2021, 11:40 AM IST

12Insurance,

ಆಳಂದ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಬೆಳೆ ನಷ್ಟ ಅನುಭವಿಸಿದ ರೈತರು ಸಂಕಷ್ಟಕ್ಕೆ ಸಿಲುಕಿ ಸರ್ಕಾರದ ಬೆಳೆ ಹಾನಿ ಪರಿಹಾರ ಹಾಗೂ ಕಂಪನಿಗಳಿಗೆ ತುಂಬಿದ ವಿಮೆಯತ್ತ ಕೈಚಾಚಿ ನಿಂತಿದ್ದರೂ ಇದುವರೆಗೂ ಯಾವ ರೈತರಿಗೂ ಬೆಳೆ ಹಾನಿ ಪರಿಹಾರ ಅಥವಾ ವಿಮೆ ತುಂಬಿದ ರೈತರಿಗೆ ವಿಮಾ ಮೊತ್ತ ಬಂದಿಲ್ಲ.

ಇದರಿಂದ ರೈತರು ನಿತ್ಯ ವಿಮಾ ಕಂಪನಿಗಳಿಗೆ, ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಕೃಷಿ, ಕಂದಾಯ ಮತ್ತು ತೋಟಗಾರಿಕೆ ಇಲಾಖೆಯಿಂದ ಕಳೆದ ಜುಲೈ ತಿಂಗಳಿಂದ ನಡೆಯುತ್ತಿರುವ ಹಾನಿಯ ಸರ್ವೇ ಅಂತಿಮಗೊಳಿಸಲು ತಾಂತ್ರಿಕ ಸಮಸ್ಯೆಯಿಂದ ವಿಳಂಬವಾಗಿದೆ. ಆದರೆ ಸತತ ಮಳೆಯಿಂದಾಗಿ ಆರಂಭದಲ್ಲಿ 100 ಹೆಕ್ಟೇರ್‌ ಹಾನಿಯ ಲೆಕ್ಕದಲ್ಲಿ ಆರಂಭವಾದ ಸರ್ವೇ ಈಗ ತಾಲೂಕಿನ 43394 ಹೆಕ್ಟೇರ್‌ ಪ್ರದೇಶಕ್ಕೆ ತಲುಪಿದೆ.

ಕಳೆದ ಜುಲೈನಲ್ಲಿ 100 ಹೆಕ್ಟೇರ್‌ ಹಾನಿ ಯಾಗಿದ್ದರೇ, ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ ತಿಂಗಳಿಂದ ಆರಂಭಗೊಂಡ ಸರ್ವೇ ಅಂತಿಮವಾಗಿ ತೋಟಗಾರಿಕೆ ಹಾಗೂ ಖುಷ್ಕಿ ಸೇರಿ ಒಟ್ಟು 43394 ಹೆಕ್ಟೇರ್‌ನಷ್ಟು ತಾಲೂಕಿನಲ್ಲಿ ಬೆಳೆ ಹಾನಿಯಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಹಾನಿಯಾದ ಬೆಳೆಗೆ ಇನ್ನೂ ಪರಿಹಾರ ದೊರೆಯಲಿದೆ ಎಂದು ರೈತ ಸಮುದಾಯ ಆಶಾಭಾವನೆ ಹೊಂದಿದೆ. ತಾಲೂಕಿನ ಐದು ಹೋಬಳಿ ಕೇಂದ್ರ ಖಜೂರಿ, ಆಳಂದ, ನಿಂಬರಗಾ, ನರೋಣಾ ಮತ್ತು ಮಾದನಹಿಪ್ಪರಗಾ ವಲಯಗಳಲ್ಲಿ ಬೆಳೆ ಹಾನಿ ಸಮೀಕ್ಷೆ ಕೈಗೊಳ್ಳಲಾಗಿದೆ.

ಖಷ್ಕಿ ಕ್ಷೇತ್ರಕ್ಕೆ ಸಂಬಂಧಿಸಿದ ಆಳಂದ ವಲಯದಲ್ಲಿ ತೊಗರಿ 7615 ಹೆಕ್ಟೇರ್‌, ಹೆಸರು 12 ಹೆಕ್ಟೇರ್‌, ಉದ್ದು 138 ಹೆಕ್ಟೇರ್‌, ಸೋಯಾಬಿನ್‌ 553 ಹೆಕ್ಟೇರ್‌, ಹತ್ತಿ 5 ಹೆಕ್ಟೇರ್‌, ಕಬ್ಬು 135 ಹೆಕ್ಟೇರ್‌ ಹೀಗೆ ಒಟ್ಟು 8458 ಹೆಕ್ಟೇರ್‌ ಪ್ರದೇಶದಲ್ಲಿ ಹಾನಿಯಾಗಿದೆ ಎಂದು ಅಂದಾಸಲಾಗಿದೆ.

ಖಜೂರಿ ವಲಯಕ್ಕೆ ತೊಗರಿ 7618 ಹೆಕ್ಟೇರ್‌, ಹೆಸರು 9 ಹೆಕ್ಟೇರ್‌, ಉದ್ದು 153 ಹೆಕ್ಟೇರ್‌, ಸೋಯಾಬಿನ್‌ 866 ಹೆಕ್ಟೇರ್‌, ಹತ್ತಿ 2 ಹೆಕ್ಟೇರ್‌, ಕಬ್ಬು 13 ಹೆಕ್ಟೇರ್‌ ಹೀಗೆ ಒಟ್ಟು 8661 ಹೆಕ್ಟೇರ್‌ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಮಾದನಹಿಪ್ಪರಗಾ ವಲಯದಲ್ಲಿ ತೊಗರಿ 8152 ಹೆಕ್ಟೇರ್‌, ಹೆಸರು 8 ಹೆಕ್ಟೇರ್‌, ಉದ್ದು 51 ಹೆಕ್ಟೇರ್‌, ಸೋಯಾಬಿನ್‌ 59 ಹೆಕ್ಟೇರ್‌, ಹತ್ತಿ 5 ಹೆಕ್ಟೇರ್‌, ಕಬ್ಬು 177 ಸೇರಿ 8452 ಹೆಕ್ಟೇರ್‌ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ನಿಂಬರಗಾ ವಲಯದಲ್ಲಿ ತೊಗರಿ 8215 ಹೆಕ್ಟೇರ್‌, ಹೆಸರು 11 ಹೆಕ್ಟೇರ್‌, ಉದ್ದು 125 ಹೆಕ್ಟೇರ್‌, ಸೋಯಾಬಿನ್‌ 47 ಹೆಕ್ಟೇರ್‌, ಹತ್ತಿ 11 ಹೆಕ್ಟೇರ್‌, ಕಬ್ಬು 566 ಹೆಕ್ಟೇರ್‌ ಹೀಗೆ ಒಟ್ಟು 8955 ಹೆಕ್ಟೇರ್‌ ಬೆಳೆ ಹಾನಿಯಾಗಿದೆ. ನರೋಣಾ ವಲಯಕ್ಕೆ ತೊಗರಿ 7725 ಹೆಕ್ಟೇರ್‌, ಹೆಸರು 13 ಹೆಕ್ಟೇರ್‌, ಉದ್ದು 115 ಹೆಕ್ಟೇರ್‌, ಸೋಯಾಬಿನ್‌ 598 ಹೆಕ್ಟೇರ್‌, ಹತ್ತಿ 2 ಹೆಕ್ಟೇರ್‌, ಕಬ್ಬು 15 ಹೆಕ್ಟೇರ್‌ ಹೀಗೆ ಒಟ್ಟು 8468 ಹೆಕ್ಟೇರ್‌ ಪ್ರದೇಶದಲ್ಲಿ ವಿವಿಧ ರೀತಿಯ ಬೆಳೆಗಳಿಗೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಧಾರವಾಡ: ಅಖಿಲ ಭಾರತೀಯ ಆರೆಸ್ಸೆಸ್ ಬೈಠಕ್ ಗೆ ಚಾಲನೆ

ಒಟ್ಟು 652 ರೈತರ 966.26 ಎಕರೆ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಈರುಳ್ಳಿ ಟೊಮ್ಯಾಟೋ, ಬದನೆ, ಮೆಣಸಿಕಾಯಿ ಹಾಗೂ ಇತರೆ ತರಕಾರಿ ಸೇರಿದಂತೆ ಪಪ್ಪಾಯಿ, ಬಾಳೆ ಹಣ್ಣು ಸೇರಿ ಆಳಂದ ವಲಯದಲ್ಲಿ 192 ಎಕರೆ, ಖಜೂರಿ 167.05 ಎಕರೆ, ಮಾದನಹಿಪ್ಪರಗಾ 244.15 ಎಕರೆ, ನಿಂಬರಗಾ 250.05 ಎಕರೆ, ನರೋಣಾ 113.05 ಎಕರೆಯಲ್ಲಿ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಹಾನಿಯಾದ ಕುರಿತು ಸರ್ವೇ ಕೈಗೊಂಡು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಂತಿಮ ಪಟ್ಟಿಯನ್ನು ತಹಶೀಲ್ದಾರ್‌ಗೆ ಸಲ್ಲಿಸಿದ ಮೇಲೆ ಹಾನಿಯ ತಂತ್ರಾಂಶದಲ್ಲಿ ದಾಖಲಿಸಲಾಗಿದೆ. ಈ ಕ್ಯಾ ಪ್ರಗತಿಯಲ್ಲಿದೆ. -ಶಂಕರಗೌಡ, ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ

ವಿವಿಧ ಬೆಳೆಗಳ ಹಾನಿ ಕುರಿತು ಯಾರಿಗೂ ಅನ್ಯಾಯವಾಗದಂತೆ ತಾಲೂಕಿನಾದ್ಯಂತ 42994 ಹೆಕ್ಟೇರ್‌ ಬೆಳೆ ಹಾನಿ ಕುರಿತು ಸರ್ವೇ ಮಾಡಿ ಸರ್ಕಾರಕ್ಕೆ ವರದಿ ಕಳುಹಿಸಲಾಗುತ್ತಿದೆ. -ಶರಣಗೌಡ ಪಾಟೀಲ, ಸಹಾಯಕ ಕೃಷಿ ನಿರ್ದೇಶಕ

-ಮಹಾದೇವ ವಡಗಾಂವ

ಟಾಪ್ ನ್ಯೂಸ್

Mother Geetha hiremath statement on daughter Neha incident

Hubli; ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ

8

Mollywood: ಈ ದಿನ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿಗೆ ಬರುವುದು ಖಚಿತ; ಯಾವುದರಲ್ಲಿ ಸ್ಟ್ರೀಮ್?

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್

7-snake

Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ

Hubli; Dingaleshwar Swamiji received payment to compete: Yatnal alleges

Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

1—-wewewqe

Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ

ಸಚಿವರು ಲೀಡ್‌ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್‌

ಸಚಿವರು ಲೀಡ್‌ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

9

Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ

Mother Geetha hiremath statement on daughter Neha incident

Hubli; ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ

8-muddebihala

Muddebihal: ನೇಹಾ ಕೊಲೆ ಖಂಡಿಸಿ ಪ್ರತಿಭಟನೆ: ಮುಸ್ಲಿಂ ಮುಖಂಡರು ಭಾಗಿ

8

Mollywood: ಈ ದಿನ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿಗೆ ಬರುವುದು ಖಚಿತ; ಯಾವುದರಲ್ಲಿ ಸ್ಟ್ರೀಮ್?

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.