ಕ್ವಾರಂಟೈನ್ ಕೇಂದ್ರಕ್ಕೆ ಅಜಯಸಿಂಗ್ ಭೇಟಿ
Team Udayavani, May 25, 2020, 2:45 PM IST
ಸಾಂದರ್ಭಿಕ ಚಿತ್ರ
ಜೇವರ್ಗಿ: ಪ್ರತಿಯೊಬ್ಬರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಆರೋಗ್ಯ ಚೆನ್ನಾಗಿದ್ದರೆ ಮುಂದೆ ಗಳಿಸಬಹುದು, ಅನಾರೋಗ್ಯ ಪೀಡಿತರಾದರೆ ಜೀವನವೇ ವ್ಯರ್ಥವಾಗುತ್ತದೆ ಎಂದು ಶಾಸಕ ಡಾ| ಅಜಯಸಿಂಗ್ ಹೇಳಿದರು.
ತಾಲೂಕಿನ ಮಂದೇವಾಲ, ಯಡ್ರಾಮಿ ಪಟ್ಟಣದ ವಿವಿಧ ಕ್ವಾರಂಟೈನ್ ಕೇಂದ್ರಗಳಿಗೆ ರವಿವಾರ ಭೇಟಿ ನೀಡಿ, ಅವರು ಮಾತನಾಡಿದರು. ಕೋವಿಡ್ ಹೊಡೆದೋಡಿಸಲು ಪ್ರತಿಯೊಬ್ಬರು ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಲಹೆ ನೀಡಿದರು. ಇದೆ ವೇಳೆ ಮಂದೇವಾಲ ವಸತಿ ನಿಲಯದ ಕ್ವಾರಂಟೈನ್ದಲ್ಲಿರುವ ಕೆಲವರು ಊಟ ಹಾಗೂ ಸೌಲಭ್ಯದ ಕುರಿತು ಶಾಸಕರ ಬಳಿ ಸಮಸ್ಯೆ ತೋಡಿಕೊಂಡರು. ಇದಕ್ಕೆ ಶಾಸಕರು ಸೂಕ್ತ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಶಾಸಕರು ಯಡ್ರಾಮಿ ಹಾಗೂ ತಾಲೂಕಿನ ವಿವಿಧ ಕ್ವಾರಂಟೈನ್ ಕೇಂದ್ರಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು. ಮುಖಂಡರಾದ ಶಿವಪುತ್ರಪ್ಪ ಸಾಹು ಕೋರಿ, ಸಿದ್ಧಣ್ಣ ಗಡ್ಡದ್, ಗೊಲ್ಲಾಳಪ್ಪ ದ್ಯಾಮಗೊಂಡ, ಯಶವಂತರಾಯ ಗಾಣಿಗೇರ, ಬಹಾದ್ದೂರ ರಾಠೊಡ, ಸುರೇಶ ರಾಠೊಡ, ಕಾಶಿರಾಯಗೌಡ ಯಲಗೋಡ, ಶ್ರೀಶೈಲ ಬುಟ್ನಾಳ, ಪಿಎಸ್ಐ ಮಲ್ಲಣ್ಣ ಯಲಗೋಡ, ಮರೆಪ್ಪ ಸರಡಗಿ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ