ಕಲಬುರಗಿ ಜಿಲ್ಲೆಗಿದೆ 2500 ವರ್ಷದ ಇತಿಹಾಸ
ಸಿಂಧು ನಾಗರಿಕತೆಯೊಂದಿಗೂ ಹೋಲಿಕೆ | ಸನ್ನತಿಯಲ್ಲಿ ಸಿಕ್ಕಿವೆ ಹಲವು ಪುರಾವೆ: ಡಾ| ಶಂಭುಲಿಂಗ ವಾಣಿ
Team Udayavani, Feb 7, 2020, 10:41 AM IST
ಕಲಬುರಗಿ : ಕಲಬುರಗಿ ಅಥವಾ ಗುಲಬರ್ಗಾ ಜಿಲ್ಲೆ 2,500 ವರ್ಷಗಳ ಇತಿಹಾಸ ಹೊಂದಿದೆ. ಭಾರತದ ಪರಂಪರೆಯಷ್ಟೇ ಪುರಾತನವಾದ ಹಿನ್ನೆಲೆ ಇದೆ ಎಂದು ಇತಿಹಾಸ ಉಪನ್ಯಾಸಕ ಡಾ| ಶಂಭುಲಿಂಗ ವಾಣಿ ಹೇಳಿದರು.
ಕಲಬುರಗಿ ಅತ್ಯಂತ ಪ್ರಾಚೀನ ಜಿಲ್ಲೆ. ಸಿಂಧು ನಾಗರಿಕತೆಗೂ ಕಲಬುರಗಿ ನಾಗರಿಕತೆಗೂ ಹೋಲಿಕೆ ಇದೆ. ಆದಿಪೂರ್ವ ಕಾಲದ ಇತಿಹಾಸ ಕುರುಹುಗಳು ಜಿಲ್ಲೆಯಲ್ಲಿ ಲಭ್ಯ ಇದೆ. ಚಿತ್ತಾಪುರದ ಸನ್ನತಿಯಲ್ಲಿ ಇಂತಹ ಪುರಾವೆಗಳು ದೊರೆಯುತ್ತವೆ. ಭಾರತದ ನಾಗರಿಕತೆ 1921ರಲ್ಲಿ ಹೊರಬಂದರೆ, ಕಲಬುರಗಿ ನಾಗರಿಕತೆ 1985ರಲ್ಲಿ ಬೆಳಕಿಗೆ ಬಂತು ಎಂದರು.
ದೇಶದ ಮೊದಲ ಸಾಮ್ರಾಜ್ಯ ಮೌರ್ಯರಿಂದ ಹಿಡಿದು ಕೊನೆಯ ನಿಜಾಮರ ಆಳ್ವಿಕೆಯನ್ನು ಕಲಬುರಗಿ ಕಂಡಿದೆ. ಕೃಷ್ಣ-ಭೀಮ ನದಿಗಳ ನಡುವೆ ಸಗರನಾಡು ಸಾಮ್ರಾಜ್ಯ ಇತ್ತು. ಅಶೋಕ ಚರ್ಕವರ್ತಿ ನಾಲ್ಕು ರಾಜಧಾನಿಗಳನ್ನು ಸ್ಥಾಪನೆ ಮಾಡಿಕೊಂಡಿದ್ದ. ಅದರಲ್ಲಿ ಸನ್ನತಿ ಕೂಡ ಒಂದಾಗಿತ್ತು ಎಂದರು.
ಈ ಭಾಗ ಸಹಿಷ್ಣುತೆ ಮತ್ತು ಸಹಬಾಳ್ವೆಗೆ ಹೆಸರುವಾಸಿ. ಉರ್ದು ಹುಟ್ಟಿದ ಸ್ಥಳ ಕಲಬುರಗಿ. ಸೂಫಿ ಸಂತ ಖ್ವಾಜಾ ಬಂದೇ ನವಾಜ್ ಮೊದಲ ಉರ್ದು ಕೃತಿಯ ಕರ್ತೃ ಎಂದು ವಿವರಿಸಿದರು. ಪ್ರವಾಸೋದ್ಯಮ ತಾಣಗಳು-ಅಭಿವೃದ್ಧಿ ಕುರಿತು ಡಾ| ಶಶಿಶೇಖರ ರೆಡ್ಡಿ, ಸಾಹಿತ್ಯ-ಸಂಸ್ಕೃತಿ ಬಗ್ಗೆ ಡಾ| ಅಮೃತ ಕಟಕೆ ವಿಷಯ ಮಂಡಿಸಿದರು .
ಕಲಬುರಗಿಯ ಬಿಸಿಲಿಗೆ ಅಸ್ತಮಾ ಖತಂ!
ಬಿಸಿಲಿನ ಮಜಾ ಅನುಭವಿಸಲೆಂದೇ ವಿದೇಶಗಳಿಂದ ಅದೆಷ್ಟೋ ಜನ ಗೋವಾಕ್ಕೆ ಬರುತ್ತಾರೆ. ಕಲಬುರಗಿ ಬಿಸಿಲು ಗೋವಾ ಬಿಸಿಲಿಗಿಂತ ಉತ್ಕೃಷ್ಟ. ಇಲ್ಲಿನ ಬಿಸಿಲಿಗೆ ಅಸ್ತಮಾ ಹೇಳ ಹೆಸರಿಲ್ಲದಂತೆ ಹೋಗುತ್ತದೆ. ಚಿಂಚೋಳಿ ವನ್ಯಜೀವಿ ಧಾಮ ಮತ್ತು ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿಪಡಿಸಿದರೆ, ರಾಜ್ಯದಲ್ಲೇ ಉತ್ತಮ ಪ್ರವಾಸೋದ್ಯಮ ತಾಣವಾಗಿ ರೂಪುಗೊಳ್ಳುತ್ತದೆ.
ಡಾ| ಶಶಿಶೇಖರ ರೆಡ್ಡಿ,
ಸಾರಿಗೆ ಇಲಾಖೆ ಅಧಿಕಾರಿ
ರಂಗಪ್ಪ ಗಧಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಶೋಕಿಗಾಗಿ ನಕಲಿ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್
Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೆವು?: ಖಂಡ್ರೆ
Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ
MUST WATCH
ಹೊಸ ಸೇರ್ಪಡೆ
Udupi: ಕಾರು ಢಿಕ್ಕಿ… ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್
Belthangady: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ
NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ
Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ