ಪರ್ಸೆಂಟೆಜ್ ಪಡೆದ ಬಳಿಕವೇ ಭೂಮಿ ಪೂಜೆ :ಪರ್ಸೆಂಟೆಜ್ ದಂಧೆ ವಿರುದ್ಧ ಜಗನ್ನಾಥ ಶೇಗಜಿ ಆರೋಪ
Team Udayavani, Apr 13, 2022, 5:50 PM IST
ಕಲಬುರಗಿ: ಕಾಮಗಾರಿಗೆ 10% ಪರ್ಸೆಂಟೆಜ್ ತೆಗೆದುಕೊಂಡ ನಂತರವೇ ಶಾಸಕರು ಭೂಮಿಪೂಜೆ ನೆರವೇರಿಸುತ್ತಾರೆ ಎಂದು ಕಲಬುರಗಿ ಜಿಲ್ಲಾ ಕಾಂಟ್ರಾಕ್ಟ್ ರ್ಸ್ ಅಸೋಸಿಯೇಷನ್ ಆರೋಪಿಸಿದೆ.
ಕಾಮಗಾರಿ ಟೆಂಡರ್ ವಾಗಿ ಜತೆಗೆ ಒಪ್ಪಂದ ನಡೆದು ಆರೇಳು ತಿಂಗಳಾದರೂ ಕಾಮಗಾರಿ ಆರಂಭಿಸುತ್ತಿಲ್ಲ. ಪರ್ಸೆಂಟೆಜ್ ( ನೈವೇದ್ಯ) ನೀಡಿದ ನಂತರವೇ ಪೂಜೆ ನೆರವೇರಿಸಲಾಗುತ್ತಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಜಗನ್ನಾಥ ಶೇಗಜಿ ಪತ್ರಿಕಾಗೋಷ್ಠಿಯಲ್ಲಿ ನೇರವಾಗಿ ಆರೋಪಿಸಿದರು.
ಕಾಮಗಾರಿಗಳಿಗೆ ಸಂಬಂಧಿಸಿದಂತೆ 40 ಪರ್ಸೆಂಟೆಜ್ ಕುರಿತಾಗಿ ಈಗಾಗಲೇ ದೂರು ಸಲ್ಲಿಸಲಾಗಿದ್ದರೂ ಯಾವುದೇ ತನಿಖೆ ಹಾಗೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸಂತೋಷ ಪಾಟೀಲ್ ಆತ್ಮಹತ್ಯೆ ನಡೆದಿದೆ. ಸರ್ಕಾರಿ ಇದೇ ಧೋರಣೆ ಮುಂದುವರೆಸಿದರೆ ಮತ್ತಷ್ಟು ಗುತ್ತಿಗೆದಾರರು ತೊಂದರೆಗೆ ಒಳಗಾಗಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ತಾವು 20% ಲೆಸ್ ಹಾಕಿದ್ದರೂ ತಮಗೆ ಕೆಲಸ ನೀಡದೇ 20% ಹೆಚ್ಚುವರಿಗೆ ಟೆಂಡರ್ ನಿಗದಿಗೊಳಿಸಿ ತಮಗೆ ಬೇಕಾದವರಿಗೆ ಕಾಮಗಾರಿ ನೀಡಲಾಗುತ್ತಿದೆ. ಕಾಮಾಗಾರಿ ಮಂಜೂರಾತಿಯಿಂದ ಹಿಡಿದು ಬಿಲ್ ಆಗುವರೆಗೂ ಫಿಕ್ಸ್ ಪರ್ಸೆಂಟೆಜ್ ಇದೆ. ಬಹು ಮುಖ್ಯವಾಗಿ ಲೆಸ್ ನಲ್ಲಿ ಟೆಂಡರ್ ಪಡೆದು ಕಾಮಗಾರಿ ಮುಕ್ತಾಯಗೊಳಿಸಿದ್ದರೂ ತಮ್ಮದ್ಯಾವುದು ಬಿಲ್ ಮಾಡ್ತಾ ಇಲ್ಲ.
ಇದನ್ನೂ ಓದಿ : ಬೈಕ್ಗೆ ಢಿಕ್ಕಿ ಹೊಡೆದ ಕಾರು: ಪೇದೆ ಸಾವು, ಎಎಸ್ಸೈಗೆ ಗಾಯ
ಕಲ್ಯಾಣ ಕರ್ನಾಟಕ ಭಾಗದಲ್ಲಿ ನಾಲ್ಕು ಸಾವಿರ ಕೋ. ರೂ. ಬಿಲ್ ಬಾಕಿ ಇದೆ. ಈಗ ಹೊಸದಾಗಿ ಕೆಲಸ ಮಾಡಿದವರಿಗೆ ಪರ್ಸೆಂಟೆಜ್ ಪಡೆದು ಬಿಲ್ ಮಾಡಲಾಗುತ್ತಿದೆ. ಆದರೆ ಎಲ್ಲ ನಿಯಮಾವಳಿ ಪ್ರಕಾರ ಕಾಮಗಾರಿ ಮಾಡಿದ ತಮಗೆ ಬಿಲ್ ಮಾಡದೇ ಸತಾಯಿಸಲಾಗುತ್ತಿದೆ ಎಂದು ಶೇಗಜಿ ದೂರಿದರು.
ಮೃತ ಸಂತೋಷ ಪಾಟೀಲ್ ಕುಟುಂಬಕ್ಕೆ ರಾಜ್ಯ ಸರ್ಕಾರ ಈ ಕೂಡಲೇ 25 ಲಕ್ಷ ರೂ ಪರಿಹಾರ ನೀಡಬೇಕು. ಸೂಕ್ತ ತನಿಖೆಯಾಗಿ ಈ ತಿಂಗಳ ಒಳಗಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗದಿದ್ದರೆ ವಿಧಾನಸೌಧದ ಮುತ್ತಿಗೆ ಹಾಕಲಾಗುವುದು. ಎಷ್ಟೇ ಜೀವ ಹೋದರೂ ಗುತ್ತಿಗೆದಾರರ ಸಂಘ ಹಿಂದೆ ಸರಿಯದು ಎಂದು ಜಗನ್ನಾಥ ಶೇಗಜಿ ಗುಡುಗಿದರು.
ದನಗಳ ಸಂತೆಯಲ್ಲಿ ಎಮ್ಮೆ ಕರುಗಳು ಖರೀದಿ ಮಾಡಿರುವಂತೆ ಶಾಸಕರನ್ನು ಖರೀದಿ ಮಾಡಿರುವಾಗ ಭ್ರಷ್ಟಾಚಾರ ನಡೆಯದೆ ಇನ್ನೇನು ಸಾಧ್ಯ. ಇನ್ಮುಂದೆಯಾದರೂ ಪರ್ಸೆಂಟೆಜ್ ದಂಧೆ ನಿಲ್ಲಲಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ
MUST WATCH
ಹೊಸ ಸೇರ್ಪಡೆ
Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ