ಮೂರನೇ ಅಲೆ ಮಧ್ಯೆ ಪಾಲಿಕೆ ಅಖಾಡ ಸಿದ್ಧ


Team Udayavani, Aug 15, 2021, 1:42 PM IST

kalaburagi politics

ಕಲಬುರಗಿ: ಸುದೀರ್ಘ‌ ಎಂಟು ವರ್ಷದನಂತರ ಮಹಾನಗರ ಪಾಲಿಕೆಗೆ ದಿಢೀರನೆಚುನಾವಣೆ ನಿಗದಿಯಾಗಿದ್ದರಿಂದರಾಜಕೀಯ ಪಕ್ಷಗಳಲ್ಲಿ ಸಂಚಲನಮೂಡಿದ್ದಲ್ಲದೇ ಹಲವು ವರ್ಷಗಳಿಂದಪಾಲಿಕೆ ಚುನಾವಣೆ ಮೇಲೆ ಕಣ್ಣಿಟ್ಟಸ್ಪರ್ಧಾ ಆಕಾಂಕ್ಷಿಗಳು ಅಖಾಡಕ್ಕೆಇಳಿಯಲಾರಂಭಿಸಿದ್ದರಿಂದ ಚುನಾವಣೆಕಾವು ಕೋವಿಡ್‌ ಮೂರನೇ ಅಲೆ ಆತಂಕದನಡುವೆಯೂ ವ್ಯಾಪಕವಾಗಿದೆ.

ನಾಮಪತ್ರ ಸಲ್ಲಿಸಲು ಹಾಗೂಚುನಾವಣೆ ಪ್ರಚಾರಕ್ಕೆ ವಾರ ಕಾಲ ಮಾತ್ರಸಮಯಾವಕಾಶ ಇರುವುದರಿಂದಚುನಾವಣೆ ಹೇಗೆ ಎದುರಿಸುವುದು?ಮತದಾರರ ಮನ ಗೆಲ್ಲುವುದು ಹೇಗೆಎನ್ನುವ ನಿಟ್ಟಿನಲ್ಲಿ ಪಕ್ಷಗಳ ಮುಖಂಡರಲ್ಲಿಹಾಗೂ ಸ್ಪರ್ಧಾ ಆಕಾಂಕ್ಷಿಗಳಲ್ಲಿ ಆತಂಕ,ಅನಿಶ್ಚಿತತೆ ಕಾಡಲಾರಂಭಿಸಿದೆ.

ಸ್ಪರ್ಧಾ ಆಕಾಂಕ್ಷಿಗಳು ಚುನಾವಣೆದಿನಾಂಕ ಪ್ರಕಟ ಆಗುತ್ತಿದ್ದಂತೆ ಪಕ್ಷದನಾಯಕರ ಮನವೊಲಿಸುವ ಕಸರತ್ತಿಗೆಇಳಿದಿದ್ದಾರೆ. ತಮ್ಮ ಬಡಾವಣೆಮುಖಂಡರು, ಕಾರ್ಯಕರ್ತರನ್ನುತೆಗೆದುಕೊಂಡು ಹೋಗಿ ನಾಯಕರಎದುರು ಶಕ್ತಿ ಪ್ರದರ್ಶನ ನಡೆಸುತ್ತಿದ್ದಾರೆ.ತಮ್ಮದೇಯಾದ ತಂತ್ರಗಾರಿಕೆಮುಂದುವರಿಸಿದ್ದಾರೆ. ಮಠಾಧಿಧೀಶರಮೂಲಕವೂ ಒತ್ತಡ ಹಾಕುತ್ತಿರುವುದು ಕೇಳಿಬರುತ್ತಿದೆ. ಕಾಂಗ್ರೆಸ್‌-ಬಿಜೆಪಿಯಲ್ಲಂತೂಒಂದೊಂದು ವಾರ್ಡ್‌ನಲ್ಲಿ ಎಂಟರಿಂದಹತ್ತು ಆಕಾಂಕ್ಷಿಗಳ ಹೆಸರು ಕೇಳಿ ಬರುತ್ತಿದೆ.ಹೀಗಾಗಿ ಅಳೆದು ತೂಗಿ ಟಿಕೆಟ್‌ ನೀಡುವಚಾಣಾಕ್ಷತೆ ನಾಯಕರಿಗೆ ಎದುರಾಗಿದೆ.

ಜೆಡಿಎಸ್‌ ಸಹ ಪಾಲಿಕೆಯಲ್ಲಿ ತನ್ನಬೆಂಬಲವಿಲ್ಲದೇ ಯಾರೂ ಅ ಧಿಕಾರಕ್ಕೆಬಾರದು ಎನ್ನುವ ಅಚಲತೆ ಹೊಂದಿದ್ದು,ಎಲ್ಲ 55 ಸ್ಥಾನಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದರಿಂದ ಚುನಾವಣೆಕಾವು ಮತ್ತಷ್ಟು ಜೋರಾಗಿರಲಿದೆ.ಬಿಜೆಪಿ-ಕಾಂಗ್ರೆಸ್‌ನಿಂದ ಟಿಕೆಟ್‌ದಿಂದವಂಚಿತರಾದವರು ಕೊನೆಗೆ ಜೆಡಿಎಸ್‌ಇಲ್ಲವೇ ಆಮ್‌ ಆದ್ಮಿ, ಎಡಪಕ್ಷಗಳಿಂದಸ್ಪಧಿ ìಸಿದರೂ ಆಶ್ಚರ್ಯಪಡುವಂತಿಲ್ಲ.ಒಟ್ಟಾರೆ ಐವತ್ತೆ çದು ಸ್ಥಾನಗಳಿಗೆ ಕನಿಷ್ಟ ಏನಿಲ್ಲವೆಂದರೂ 200ಕ್ಕೂ ಹೆಚ್ಚುಅಭ್ಯರ್ಥಿಗಳು ಸ್ಪ ರ್ಧಿಸಲಿದ್ದಾರೆಎನ್ನಲಾಗುತ್ತಿದೆ.

ಪಾಲಿಕೆ ಇತಿಹಾಸದಲ್ಲಿ ಕಾಂಗ್ರೆಸ್‌ಪಕ್ಷವೇ ಸಿಂಹಪಾಲು ಅ ಧಿಕಾರ ನಡೆಸಿದೆ.2009-10ರಲ್ಲಿ ಮಾತ್ರ ಆಗ ಶಾಸಕರಾಗಿದ್ದಬಿಜೆಪಿಯ ಚಂದ್ರಶೇಖರ ಪಾಟೀಲರೇವೂರ ಪ್ರಯತ್ನದ ಫಲವಾಗಿ ಅ ಧಿಕಾರದಗದ್ದುಗೆ ಏರಿದ್ದನ್ನು ಬಿಟ್ಟರೆ ಮಗದೊಮ್ಮೆಆಡಳಿತ ಚುಕ್ಕಾಣಿ ಹಿಡಿಯುವ ಸಮೀಪವೂಬಂದಿಲ್ಲ.ಈಗ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿಸರ್ಕಾರವಿದೆ. ಹೀಗಾಗಿ ಬಿಜೆಪಿ ಅ ಧಿಕಾರಪಡೆಯಲೇಬೇಕೆಂಬ ಒತ್ತಡಕ್ಕೆ ಸಿಲುಕಿದೆ.
ಹಲವು ಗ್ರಾಮ ಪಂಚಾಯಿತಿ, ಸ್ಥಳೀಯಸಂಸ್ಥೆಗಳ ಪುರಸಭೆ, ಪಟ್ಟಣ ಪಂಚಾಯತ್‌ಜತೆಗೆ ತಾಲೂಕು ಪಂಚಾಯತ್‌ಹಾಗೂ ಜಿಲ್ಲಾ ಪಂಚಾಯತ್‌ನಲ್ಲಿಬಿಜೆಪಿ ಅಧಿ ಕಾರದ ಚುಕ್ಕಾಣಿ ಹಿಡಿದುಆಡಳಿತ ನಡೆಸಿದೆ. ಆದರೆ ಕಲಬುರಗಿಮಹಾನಗರ ಪಾಲಿಕೆಯಲ್ಲಿ ಮಾತ್ರಕಮಲಪಡೆಗೆ ಆಡಳಿತ ನಡೆಸುವ ಭಾಗ್ಯದೊರಕದಿರುವುದು ಆತ್ಮಾವಲೋಕನಕ್ಕೆದಾರಿ ಮಾಡಿಕೊಟ್ಟಿದೆ.

ಈಚೆಗೆ ನಡೆದ ಬಿಜೆಪಿ ಮಹಾನಗರಕಾರ್ಯಕಾರಿಣಿ ಸಭೆಯಲ್ಲಿ ಪಾಲಿಕೆ ಈ ಸಲಅ ಧಿಕಾರ ಹಿಡಿಯಲೇಬೇಕೆಂಬ ದೃಢನಿರ್ಧಾರ ಮಾಡಲಾಗಿದೆ. ಪಾಲಿಕೆಯಲ್ಲಿಅಧಿ ಕಾರಕ್ಕೆ ಬರುವುದು ಅಷ್ಟು ಸರಳವಲ್ಲಎನ್ನುವುದು ಪ್ರತಿ ಬಿಜೆಪಿ ಮುಖಂಡರಿಗೂಹಾಗೂ ಕಾರ್ಯಕರ್ತರಿಗೂ ತಿಳಿದ ವಿಷಯ.ಆದರೆ ಸುಮ್ಮನೆ ಕೂಡುವಂತಿಲ್ಲ.

ಅಪ್ಪುಗೌಡಗೆ ಅಗ್ನಿ ಪರೀಕ್ಷೆ

ಕ್ಷೇತ್ರ ಬಿಟ್ಟರೆ ಪಕ್ಷಕ್ಕೆ ಅಷ್ಟೇನು ಕೊಡುಗೆ ನೀಡುತ್ತಿಲ್ಲ. ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನುಕಡೆಗಣಿಸಿ ಬೆರಳಣಿಕೆಯಷ್ಟು ತಂಡ ಮಾತ್ರ ಕಟ್ಟಿಕೊಂಡು ಮುನ್ನಡೆಯಲಾಗುತ್ತಿದೆಎನ್ನುವ ಆರೋಪ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಪಾಲಿಕೆಯ 25 ವಾರ್ಡ್‌ಗಳು ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ ಬರುವುದರಿಂದ ಕಲಬುರಗಿ ದಕ್ಷಿಣ ಮತಕ್ಷೇತ್ರದಶಾಸಕ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿರುವದತ್ತಾತ್ರೇಯ ಪಾಟೀಲ ರೇವೂರ ಅವರಿಗೆ ಈ ಪಾಲಿಕೆ ಚುನಾವಣೆ ಅಗ್ನಿ ಪರೀಕ್ಷೆಯಾಗಿದೆ.

ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಕಾರ್ಯದರ್ಶಿಯಾಗಿದ್ದಾಗಲೂ ಸಕ್ರಿಯವಾಗಿತೊಡಗಿಸಿಕೊಂಡು ದೇಶದ ವಿವಿಧ ಭಾಗಗಳಲ್ಲಿ ಸಂಚರಿಸಲಿಲ್ಲ. ಕೆಕೆಆರ್‌ಡಿಬಿಅಧ್ಯಕ್ಷರಾಗಿಯೂ ವಿಭಾಗ ಮಟ್ಟದಲ್ಲಿ ಪಕ್ಷದ ಸಂಘಟನೆಗೆ ಕ್ರಿಯಾಶೀಲತೆಯಿಂದತೊಡಗಿಸಿಕೊಳ್ಳುತ್ತಿಲ್ಲ ಎನ್ನುವ ಆರೋಪವೂ ಸಚಿವ ಸ್ಥಾನ ಕೈ ತಪ್ಪಲು ಒಂದು ಸಣ್ಣ ಕಾರಣಎನ್ನಲಾಗುತ್ತಿದೆ.

ಆದರೀಗ ತಮ್ಮ ಶಕ್ತಿ ಸಾಬೀತುಪಡಿಸಲು ಹಾಗೂ ಕ್ಷೇತ್ರದಲ್ಲಿ ತಮ್ಮಪ್ರಾಬಲ್ಯ ಕುಗ್ಗಿಲ್ಲ ಎನ್ನುವುದನ್ನು ನಿರೂಪಿಸಲು, ಜತೆಗೆ ಪಕ್ಷದ ವರಿಷ್ಠರಿಗೆ ಫಲಿತಾಂಶದಮೂಲಕ ಉತ್ತರ ನೀಡಬೇಕಾಗಿರುವುದರಿಂದ ಅಪ್ಪುಗೌಡರಿಗೆ ಪಾಲಿಕೆ ಚುನಾವಣೆಸವಾಲಿನ ಪರಿಸ್ಥಿತಿ ನಿರ್ಮಾಣ ಮಾಡಿದೆ. ಇನ್ನುಳಿದಂತೆ ಕಲಬುರಗಿ ಉತ್ತರ ಕ್ಷೇತ್ರದಲ್ಲೇ30 ವಾರ್ಡ್‌ಗಳು ಬರುತ್ತವೆ.

ಇಲ್ಲಿ ವಿಧಾನ ಪರಿಷತ್‌ ಸದಸ್ಯ ಬಿ.ಜಿ. ಪಾಟೀಲ,ಕರ್ನಾಟಕ ನವೀಕರಿಸಬಹುದಾದ ಇಂಧನ ನಿಗಮ-ಮಂಡಳಿ (ಕ್ರೆಡಲ್‌) ಅಧ್ಯಕ್ಷ ಚಂದುಪಾಟೀಲ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ಉತ್ತರದಲ್ಲೂ ಹೆಚ್ಚಿನ ಸ್ಥಾನ ಗೆಲ್ಲಿಸಿಕೊಂಡುಬರುವಲ್ಲಿ ಇವರ ಜವಾಬ್ದಾರಿಯೂ ಅಡಗಿದೆ.

ಹಣಮಂತರಾವ ಭೈರಾಮಡಗಿ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

1—-wewewqe

Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ

ಸಚಿವರು ಲೀಡ್‌ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್‌

ಸಚಿವರು ಲೀಡ್‌ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್‌

ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ

ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ

ಮೋದಿ ಗ್ಯಾರಂಟಿಗೆ ನೋ ವಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ

Kalaburagi; ಮೋದಿ ಗ್ಯಾರಂಟಿಗೆ ನೋ ವಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.