ಕಾಳಗಿ ಕಲಬುರಗಿ ಉಪವಿಭಾಗದಲಿ ಸೇರಿಸಿ
Team Udayavani, Oct 5, 2017, 10:58 AM IST
ಕಾಳಗಿ: ನಾಲ್ಕು ದಶಕಗಳ ಹೊರಾಟದ ಫಲವಾಗಿ ಕಾಳಗಿ ನೂತನ ತಾಲೂಕು ಕೇಂದ್ರವಾಗಿದೆ. ಆದರೆ ಈ ಭಾಗದ ಜನರ ಸಮಸ್ಯೆಗಳು ಶಾಶ್ವತವಾಗಿ ನಿವಾರಣೆ ಆಗಬೇಕಾದರೆ ಕಾಳಗಿ ತಾಲೂಕನ್ನು ಕಲಬುರಗಿ ಉಪವಿಭಾಗಕ್ಕೆ ಸೇರಿಸಲೇಬೇಕು ಎಂದು ಮಾಜಿ ಶಾಸಕ ಹಾಗೂ ಹೋರಾಟ ಸಮಿತಿ ಅಧ್ಯಕ್ಷ ವಿಶ್ವನಾಥ ಪಾಟೀಲ ಹೆಬ್ಟಾಳ ಹೇಳಿದರು.
ಕಾಳಗಿ ತಾಲೂಕು ಸಂರ್ವಾಂಗೀಣ ಪಕ್ಷಾತೀತ ಹೋರಾಟ ಸಮಿತಿ ಬುಧವಾರ ಹಮ್ಮಿಕೊಂಡ ಬೃಹತ್ ಪ್ರತಿಭಟನಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಕಾಳಗಿ-ಗುಂಡಗುರ್ತಿ-ಕೋಡ್ಲಿ ಹೋಬಳಿ ಸೇರಿಸಿ ನೂತನ ತಾಲೂಕು ರಚಿಸಿದ್ದನ್ನು ಸ್ವಾಗತಿಸುತ್ತೇವೆ. ಆದರೆ ಈ ಭಾಗದ ಜನರು ಸೇಡಂ ಉಪವಿಭಾಗಕ್ಕೆ ಸೇರಿಸಿದ್ದಕ್ಕೆ ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಈ ಎಲ್ಲ ಗ್ರಾಮಗಳು ಕಲಬುರಗಿ ಜಿಲ್ಲೆಗೆ ಕೇವಲ 10 ಕಿ.ಮೀ ಅಂತರದಲ್ಲಿವೆ. ಜನರ ಹಿತದೃಷ್ಟಿಯಿಂದ ಕಲಬುರಗಿ ಉಪವಿಭಾಗಕ್ಕೆ ಸೇರಿಸಿದರೆ ಅನುಕೂಲವಾಗುತ್ತದೆ ಎಂದು ಅಗ್ರಹಿಸಿದರು.
ಕಾಳಗಿ ತಾಲೂಕಿನ ರೈತರು, ಜನಸಾಮಾನ್ಯರು ಸಮೀಪದ ಕಲಬುರಗಿ ಜಿಲ್ಲೆ ಮಾರುಕಟ್ಟೆಯಲ್ಲಿ ಕೃಷಿ ಸಾಮಗ್ರಿ ಖರೀದಿ, ಮಾರಾಟ ಮಾಡುತ್ತಾರೆ. ಶಿಕ್ಷಣ, ವೈದ್ಯಕೀಯ ಸೌಲಭ್ಯಗಳಿಗೆ ಕಲಬುರಗಿಯನ್ನೇ ಅವಲಂಬಿತರಾಗಿದ್ದಾರೆ. ಆದ್ದರಿಂದ ಕಾಳಗಿ ತಾಲೂಕನ್ನು ಸೇಡಂ ಉಪವಿಭಾಗದಿಂದ ರದ್ದುಪಡಿಸಿ
ಕಲಬುರಗಿ ಉಪವಿಭಾಗಕ್ಕೆ ಸೇರಿಸಬೇಕು. ಶೀಘ್ರವೇ ಕಿರಿಯ ನ್ಯಾಯಲಯ ಪ್ರಾರಂಭಿಸಬೇಕು ಎಂದರು.
ಈ ಮೇಲಿನ ಎಲ್ಲ ವಿಷಯಗಳನ್ನು 23 ಗ್ರಾಪಂಗಳಲ್ಲಿ ಚರ್ಚಿಸಿ ಒಮ್ಮತದಿಂದ ಕಾಳಗಿಯನ್ನು ಕಲಬುರಗಿ ಉಪವಿಭಾಗಕ್ಕೆ ಸೇರಿಸಬೇಕೆಂಬ ನಿರ್ಣಯದ ಮನವಿ ಪತ್ರವನ್ನು ಮುಖ್ಯಮಂತ್ರಿ, ಕಂದಾಯ ಸಚಿವ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಹಾಗೂ ಯಾದಗಿರಿ ಉಸ್ತುವಾರಿ ಸಚಿವರಿಗೆ ಸಲ್ಲಿಸಿದ್ದರೂ ಸಕರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಆದ್ದರಿಂದ ಕೊನೆಯದಾಗಿ ತಹಶೀಲ್ದಾರ ಮೂಲಕ ಮನವಿ ಮಾಡಲಾಗುತ್ತಿದೆ. ಇದಕ್ಕೂ ಯಾವುದೇ ಪ್ರತಿಕ್ರಿಯೆ ಬರದಿದ್ದರೆ ಜನಾಭಿಪ್ರಾಯ ಸಂಗ್ರಹಿಸಿ, ಉಗ್ರಸ್ವರೂಪದ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನೀಲಕಂಠ ಕಾಳೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಸುಮಾರು ಐದು ಸಾವಿರ ಜನರಿದ್ದ ಬೃಹತ್ ಪ್ರತಿಭಟನಾ ರ್ಯಾಲಿ ಮುಖ್ಯ ಬಜಾರ್ ಮೂಲಕ ಅಂಬೇಡ್ಕರ್ ವೃತ್ತಕ್ಕೆ ಆಗಮಿಸಿ ತಹಶೀಲ್ದಾರ್ಗೆ ಮನವಿ ಸಲ್ಲಿಸಿತು. ಕಿರಾಣಾ ಬಜಾರ್ ಯೂನಿಯನ್ ಎಲ್ಲ ಅಂಗಡಿಗಳನ್ನು ಸ್ವಯಂ ಘೋಷಿತವಾಗಿ ಬಂದ್ ಮಾಡಿ ಬೆಂಬಲ ನೀಡಿತು.
ಮಾಜಿ ಸಚಿವ ಸುನೀಲ ವಲ್ಯ್ಲಾಪುರೆ, ಜಿಪಂ ಕೃಷಿ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವನ ಯಾಕಾಪುರ, ದಶರಥ ನಾಮದಾರ ಮಾತನಾಡಿದರು. ಬಸವರಾಜ ಪಾಟೀಲ ಹೇರೂರ, ಭೀಮಶೆಟ್ಟಿ ಮುರುಡಾ, ಶಿವಶರಣಪ್ಪ ಕಮಲಾಪುರ, ಚಂದ್ರಕಾಂತ ವನಮಾಲಿ, ರಾಮಲಿಂಗರೆಡ್ಡಿ ದೇಶಮುಖ, ರಾಜಕುಮಾರ ರಾಜಾಪುರ, ಬಸವರಾಜ ಶಿವಗೋಳ, ರೇವಣಸಿದ್ದಪ್ಪ ಮಾಸ್ಟರ್, ಮಲ್ಲಿನಾಥ ಕೊಲಕುಂದಿ, ಸಂತೋಷ ಪಾಟೀಲ, ಪ್ರಶಾಂತ ಕದಂ, ಶೇಖರ ಪಾಟೀಲ, ಸಂತೋಷ ಗಡತಿ, ಗ್ರಾಪಂ ಅಧ್ಯಕ್ಷೆ ಶಿವಲೀಲಾ ಸಲಗೂರ, ರವಿ ಹೊಸಬಾವಿ, ಕಾಶಿನಾಥ ಪಾಟೀಲ, ರಾಮಶೆಟ್ಟಿ ಪಾಟೀಲ, ಸುಧಾಕರ ಪಾಟೀಲ, ಜಗ ದೀಶ ಪಾಟೀಲ, ಮಲ್ಲಿಕಾರ್ಜುನ ಹುಳಗೇರಿ, ಮುಕುಂದ ಕೊಡದೂರ ಹಾಗೂ ಕಾಳಗಿ ತಾಲೂಕಿನ ಸಾವಿರಾರು ಜನರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
MUST WATCH
ಹೊಸ ಸೇರ್ಪಡೆ
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು
BJP members: 2 ಕೋಟಿ ಪತ್ತೆ; ಬಿಜೆಪಿಯ ಮೂವರ ಮೇಲೆ ಕೇಸ್
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ