ಮಾಜಿ ಮುಖ್ಯಮಂತ್ರಿ ದಿ. ಧರ್ಮಸಿಂಗ್ ರ ಆಪ್ತ ಭೀಮರಾವ್ ಕುಲಕರ್ಣಿ ನಿಧನ
Team Udayavani, Dec 29, 2022, 3:55 PM IST
ಯಡ್ರಾಮಿ: ಪಟ್ಟಣದ ಹಿರಿಯ ಜೀವಿ, ಮಾಜಿ ಮುಖ್ಯಮಂತ್ರಿ ದಿ. ಎನ್. ಧರ್ಮಸಿಂಗ್ ಅವರ ಆಪ್ತರಲ್ಲಿ ಒಬ್ಬರಾದ ಭೀಮರಾವ್ ಮಲ್ಹಾರರಾವ್ ಕುಲಕರ್ಣಿ (76) ಗುರುವಾರ ಡಿ. 29 ರಂದು ಬೆಳಗ್ಗೆ ನಿಧನ ಹೊಂದಿದರು.
ತಮ್ಮ ಇಡೀ ಬದುಕಿನುದ್ದಕ್ಕೂ ಕಾಂಗ್ರೆಸ್ಸಿನ ಕಟ್ಟಾ ಕಾರ್ಯಕರ್ತರಾಗಿ ನಿಷ್ಠೆ, ಸರಳತೆಯಿಂದ ಅಂತಃಕರಣದ ಬದುಕು ಸಾಗಿಸಿದವರು ಭೀಮರಾವ್ ಕುಲಕರ್ಣಿ. ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿಯೂ ಕೆಲಸ ಮಾಡಿದವರು. ಜಿಡಗಿಯ ಲಿ.ಸಿದ್ಧರಾಮ ಶಿವಯೋಗಿಗಳ ಅಪ್ಪಟ ಶಿಷ್ಯ. ಕಷ್ಟದ ಮಡುವಿನಲ್ಲಿ ಬಿದ್ದು ಹೊರಬರದೇ ತೊಳಲಾಡುವವರನ್ನು ತಮ್ಮ ಅಮೋಘ ಹಾಸ್ಯ ಚುಟುಕುಗಳ ಮುಖಾಂತರ ನಗಿಸಿ ಕಷ್ಟದ ಮಡುವಿನಿಂದ ಹೊರತಂದು ನಗಿಸುವ ನಗೆ ಮಾಂತ್ರಿಕರು ಹೌದು! ನಕ್ಕು ನಗಿಸಿ ನೋವ ಮರೆಸುವ ಹಾಸ್ಯ ಕಲಾಪ್ರೇಮಿ.
ಅಷ್ಟೇ ಅಲ್ಲದೇ ಅದ್ಭುತ ಓದುಗಾರ. ಎಂಬತ್ತರ ದಶಕದಲ್ಲಿ ಮನೆಯಲ್ಲಿಯೇ ಗ್ರಂಥಾಲಯ ತೆರೆದ ಅಪ್ಪಟ ಪುಸ್ತಕ ಪ್ರಿಯ. ಸಾವಿರಾರು ಪುಸ್ತಕಗಳ ಸಂಗ್ರಹ ಈಗಲೂ ಅವರ ಮನೆಯಲ್ಲಿ ಕಾಣಬಹುದು. ಗ್ರಾಮವಲ್ಲದೇ ಊರಲ್ಲಿರುವ ನವ ತರುಣರಿಗೆ ಓದಿನ ಪ್ರಪಂಚ ಅರುಹಿಸುವುದರ ಮೂಲಕ ಓದಿನ ನಶೆ ಬೀರಿದವರು. ಅವರ ಅಭಿಮಾನಿಯೊಬ್ಬ ಹೀಗೆ ಹೇಳುತ್ತಾನೆ,”ನಮಗೊಂದಿಷ್ಟು ಜ್ಞಾನ ಬಂದಿರುವುದಾದರೆ ಅದು ಭೀಮರಾವ್ ಅವರು ಬೆಳೆಸಿದ ಓದಿನ ಹವ್ಯಾಸದಿಂದ” ಎಂಬುವುದು ಅಭಿಮಾನದ ಮಾತು. ಪಟ್ಟಣದ ಇನ್ನೋರ್ವ ನಾಯಕ ದಿ. ಮಹಾಂತಗೌಡ ಪಾಟೀಲರ ಪರಮಾಪ್ತ ಗೆಳೆಯ ಭೀಮರಾವ್, ಧರ್ಮಸಿಂಗ್ ರ ಚುನಾವಣೆಯಲ್ಲಿ ಸಾಯಂಕಾಲದ ವೇಳೆ ಹಳೆಯ ಬತ್ತಿ ಗ್ಯಾಸ್ ಗಳನ್ನು ಹೆಗಲ ಮೇಲೆ ಹೊತ್ತು ಪಕ್ಷದ ಪ್ರಚಾರ ಗೈದ ಕಾಂಗ್ರೆಸ್ಸಿಗರು. ಏನನ್ನು ನಿರೀಕ್ಷಿಸದೇ ಕೆಲಸ ಮಾಡಿದವರು. ಇವರ ರಾಜಕಾರಣದ ಆದರ್ಶ ಈಗಿನ ಯಾವುದೇ ಪಕ್ಷದ ಕಾರ್ಯಕರ್ತರಿಗೂ ಮಾದರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
MUST WATCH
ಹೊಸ ಸೇರ್ಪಡೆ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ