ಖಜೂರಿ ಗಡಿಯಲ್ಲಿ ಕನ್ನಡ ಫಲಕ ಅಳವಡಿಕೆ
Team Udayavani, Nov 10, 2021, 10:49 AM IST
ಆಳಂದ: ಮಹಾರಾಷ್ಟ್ರಕ್ಕೆ ಹೊಂದಿಕೊಂಡ ಖಜೂರಿ ಗಡಿಯಲ್ಲಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು 66ನೇ ಕನ್ನಡ ರಾಜ್ಯೋತ್ಸವ ನಿಮಿತ್ತ ಎರಡು ಗಡಿ ಮಧ್ಯೆ ಕನ್ನಡದ ಹಾರ್ದಿಕ ಸ್ವಾಗತ ಫಲಕ ಅಳವಡಿಸಿ ಉದ್ಘಾಟಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸಾರವಾಡ ನಾಮಫಲಕ ಉದ್ಘಾಟಿಸಿ ಮಾತನಾಡಿದ ಅವರು, ಗಡಿನಾಡಿನಲ್ಲಿ ಕನ್ನಡ ಕೆಲಸಕ್ಕೆ ನಿರ್ಲಕ್ಷ್ಯ ಸಲ್ಲದು, ಕೂಡಲೇ ಕನ್ನಡ ಶಾಲೆಗಳ ಅಭಿವೃದ್ಧಿ, ಶಿಕ್ಷಣದ ಗುಣಮಟ್ಟತೆಗೆ ಒತ್ತು ನೀಡುವ ಮೂಲಕ ಗಡಿಭಾಗದ ಕನ್ನಡಿಗರ ಕೂಗಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಮುಖಂಡ ಕುಮಾರ ಬಂಡೆ, ಶರಣು ಪಾಟೀಲ ಕೊಡಲಹಂಗರಗಾ ಮಾತನಾಡಿದರು. ಮುಖಂಡರಾದ ಲಕ್ಷ್ಮಣ ಕೋರೆ, ಸಚಿನ್ ನರೋಣಿ, ಈರಣ್ಣಾ ಕೊರಳ್ಳಿ, ಸಚಿನ್ ಬಂಗರಗಿ, ಸಿದ್ಧರಾಮ ಶಹಾಪುರೆ, ಶ್ರೀಶೈಲ ಭೀಂಪೂರೆ, ಶರಣು ಬೋರಗಿ, ಕುಮಾರ ಕಂಟೆ ಇನ್ನಿತರರು ಪಾಲ್ಗೊಂಡಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ