ಕೊರೊನಾ ಭಯ: ನೆಗಡಿ, ಕೆಮ್ಮು, ಜ್ವರಕ್ಕೆ ತಪಾಸಣೆ ಕಡ್ಡಾಯ ಎಂದ ಆರೋಗ್ಯ ಸಚಿವ ರಾಮುಲು
Team Udayavani, Mar 15, 2020, 1:50 PM IST
ಕಲಬುರಗಿ: ಕೊರೊನಾ ಸೋಂಕಿನ ಕುರಿತ ವದಂತಿಗಳಿಗೆ ಜನತೆ ಕಿವಿಗೊಡಬಾರದು. ಒಂದು ವೇಳೆ ಯಾರು ತಪಾಸಣೆಗೆ ಒಳಗಾಗುವುದಿಲ್ಲವೋ ಅಂತಹವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ನೆಗಡಿ, ಕೆಮ್ಮು ಮತ್ತು ಜ್ವರದಿಂದ ಬಳಲುತ್ತಿರುವವರು ಕಡ್ಡಾಯವಾಗಿ ತಪಾಸಣೆ ಮಾಡಿಸಿಕೊಳ್ಳಲೇಬೇಕು ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.
ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸೋಂಕು ಬಂದ ತಕ್ಷಣ ಜನ ಸಾಯುವುದಿಲ್ಲ. ಯಾರೂ ಹೆದರಬಾರದು. ಚಿಕಿತ್ಸೆಗೆ ಬೇಕಾದಂತಹ ಎಲ್ಲ ವ್ಯವಸ್ಥೆ ಆರೋಗ್ಯ ಇಲಾಖೆ ಮಾಡಿಕೊಂಡಿದೆ ಎಂದರು.
ಕೊರೊನಾ ಸೋಂಕಿಗೆ ಕಲಬುರಗಿಯ ವೃದ್ಧ ಸಾವನ್ನಪ್ಪಿದ ಬಳಿಕ ಆತನ ಮನೆ ಸುತ್ತ-ಮುತ್ತ ಐದು ಕೀ.ಮೀ. ಬಫರ್ ಝೋನ್ ಎಂದು ಗುರುತಿಸಲಾಗಿದೆ. ಆ ಪ್ರದೇಶದಿಂದ ಜನರನ್ನು ಹೊರಬಾರದಂತೆ ಸೂಚನೆ ನೀಡಲಾಗಿದೆ. ಅವರ ಮನೆಗಳಿಗೆ ಆಹಾರದ ಕಿಟ್ ಸೇರಿದಂತೆ ಬೇಕಾದ ವ್ಯವಸ್ಥೆ ಮಾಡಿಕೊಡಲಾಗಿದೆ ಎಂದರು.
ವೈದ್ಯರಿಗೂ ಚಿಕಿತ್ಸೆ: ವೃದ್ಧನಿಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಚಿಕಿತ್ಸೆ ಪಡೆಯುವಂತೆ ಸೂಚಿಸಿದ್ದೇನೆ. ಜನರ ಆತಂಕ ಕಡಿಮೆ ಮಾಡಲು ಹಾಗೂ ತಕ್ಷಣವೇ ಸೋಂಕು ಪತ್ತೆಗೆ ಮೂರು ದಿನದಲ್ಲಿ ಜಿಮ್ಸ್ ಆಸ್ಪತ್ರೆಯಲ್ಲಿ ಲ್ಯಾಬ್ ಆರಂಭಿಸಲಾಗುತ್ತದೆ ಎಂದರು.
ವೃದ್ದನ ಕುಟುಂಬದ ಮೂವರಿಗೆ ಕೊರೊನಾ ಸೋಂಕು ಇಲ್ಲ ಎಂದು ದೃಢಪಟ್ಟಿದೆ. ಇನ್ನೂ ಒಬ್ಬರ ವರದಿ ಬರಬೇಕಾಗಿದೆ. ಅದು ಪಾಸಿಟಿವ್ ಬರಲಿ ಅಥವಾ ನೆಗೆಟಿವ್ ಬರಲಿ ಜಿಲ್ಲೆಯ ಜನರು ಹೆದರಬೇಕಾಗಿಲ್ಲ. ವರದಿ ಯಾವುದೇ ರೀತಿಯಾಗಿ ಬಂದರು ಕೂಡ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಸಿದ್ಧವಾಗಿದೆ ಎಂದರು.
ವಿವಿಧ ದೇಶಗಳಿಂದ ಕಲಬುರಗಿಗೆ 16 ಜನ ಬಂದಿದ್ದಾರೆ. ಅವರಿಗೂ ಕೂಡ ಮನೆಯಲ್ಲೇ ಇಟ್ಟು ಹೋಂ ಐಸೋಲೇಟೆಡ್ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ಇಎಸ್ಐ, ಜಿಮ್ಸ್ ಗೆ ಭೇಟಿ: ನಗರದ ಜಿಮ್ಸ್ ಹಾಗೂ ಇಎಸ್ಐ ಆಸ್ಪತ್ರೆಗಳಿಗೆ ಆರೋಗ್ಯ ಸಚಿವ ಶ್ರೀರಾಮುಲು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಸ್ಪತ್ರೆಯೊಳಗಡೆ ಹೋಗುವ ಮುನ್ನ ಸಚಿವರು ಸ್ಯಾನಿಟೈಸರ್ ಬಳಕೆ ಮಾಡಿ ಮುಖಕ್ಕೆ ಎನ್- 95 ಮಾಸ್ಕ್ ಧರಿಸಿದರು. ಶ್ರೀರಾಮುಲು ಅವರಿಗೆ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ ಮತ್ತು ಅವಿನಾಶ್ ಜಾಧವ್ ಸಾಥ್ ನೀಡಿದರು.
ನಂತರ ಇಎಸ್ ಐ ಆಸ್ಪತ್ರೆಗೂ ಸಚಿವ ಶ್ರಿರಾಮುಲು ಭೇಟಿ ನೀಡಿ, ಇಲ್ಲಿ ಸುರಕ್ಷತಾ ಕಿಟ್ ಧರಿಸಿ 200 ಬೆಡ್ ನ ಐಸೋಲೇಟೆಡ್ ವಾರ್ಡ್ ಪರಿಶೀಲಿಸಿದರು. ಅಲ್ಲದೇ, ಇಎಸ್ಐ ಹಾಗೂ ಜಿಮ್ಸ್ ಆಸ್ಪತ್ರೆಯ ವೈದ್ಯರ ಜೊತೆ ಸಭೆ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ