ಕಸಾಪ ಅಧ್ಯಕ್ಷ ಸ್ಥಾನ ಮಹಿಳೆಗೆ ನೀಡಿ: ಸರಸ್ವತಿ
Team Udayavani, Oct 24, 2021, 10:45 AM IST
ಯಡ್ರಾಮಿ: ಕನ್ನಡ ಸಾಹಿತ್ಯ ಪರಿಷತ್ನ 106 ವರ್ಷಗಳ ಇತಿಹಾಸದಲ್ಲಿಯೆ ಇಲ್ಲಿಯವರೆಗೆ ಮಹಿಳೆಗೆ ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕಿಲ್ಲ. ಸಾಹಿತ್ಯ ಸೇವೆ ಮಾಡಿಕೊಂಡಿರುವರು ಮಾತ್ರ ಕಸಾಪ ಚುನಾವಣೆಗೆ ಸ್ಪರ್ಧಿಸುವಂತೆ ಆಗಬೇಕು ಎನ್ನುವ ಸದುದ್ದೇಶದಿಂದ ಕಸಾಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ, ತಾವೆಲ್ಲರೂ ಬೆಂಬಲಿಸಬೇಕು ಎಂದು ಡಾ| ಸರಸ್ವತಿ ಚಿಮ್ಮಲಗಿ ಹೇಳಿದರು.
ಪಟ್ಟಣದ ಶ್ರೀ ಮುರಘೇಂದ್ರ ಶಿವಯೋಗಿ ವಿರಕ್ತಮಠದಲ್ಲಿ ಶನಿವಾರ ನಡೆದ ಕಸಾಪ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು. ಮಹಿಳೆಯರ ಸಾಹಿತ್ಯವನ್ನು ಅಡುಗೆ ಮನೆಯದ್ದು ಎಂದು ಹೀಗೆಳೆಯುವುದನ್ನು ನಿಲ್ಲಿಸಬೇಕು. ಕನ್ನಡ ಸಾಹಿತ್ಯ ಪರಿಷತ್ನ್ನು ಸ್ವತ್ಛ ಮಾಡಬೇಕಾಗಿದೆ. ಈಗ ರಾಜ್ಯಾದ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವವರ ಪೈಕಿ ನಾನೊಬ್ಬಳೆ ಸಾಹಿತ್ಯ ಕೃಷಿ ಮಾಡಿದ್ದು. ನಾನು ಕಸಾಪ ಸದಸ್ಯರಿಗೆ ಕಾಣಿಕೆ ನೀಡುವುದಿಲ್ಲ. ಗೌರವ ನೀಡಿ ಮತ ಕೇಳುತ್ತೇನೆ ಎಂದರು.
ಸೋಮಶೇಖರಯ್ಯ ಹೊಸಮಠ, ಪ್ರಕಾಶ ಸಾಹು ಬೆಲ್ಲದ, ಅಲ್ಲಾಪಟೇಲ ಚಿಂಚೋಳಿ, ಬಸವರಾಜ ಬಂಡಿ, ಬಸಯ್ಯಸ್ವಾಮಿ ಕಕ್ಕೇರಾ, ಮಲ್ಲಿಕಾರ್ಜುನ ಜಂಬಗಿ, ಪ್ರಶಾಂತ ಕುನ್ನೂರ, ಮಲ್ಲಿಕಾರ್ಜುನ ಯಾದಗೀರ, ಅಫ್ರೋಜ್ ಅತ್ನೂರ, ಪ್ರಹ್ಲಾದ ಪತ್ತಾರ ಹಾಗೂ ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ