ಖರ್ಗೆ ಸಾಮ್ರಾಜ್ಯ ಉರುಳಿಸೋದೇ ಗುರಿ: ಗುತ್ತೇದಾರ
Team Udayavani, May 5, 2018, 11:39 AM IST
ವಾಡಿ: ಕಲಬುರಗಿಯಲ್ಲಿ ಕಟ್ಟಲಾಗಿರುವ ಖರ್ಗೆ ಸಾಮ್ರಾಜ್ಯವನ್ನು ಬುಡಸಮೇತ ಉರುಳಿಸೋದೇ ನನ್ನ ಗುರಿಯಾಗಿದೆ ಎಂದು ಮಾಲಿಕಯ್ಯ ಗುತ್ತೇದಾರ ಹೇಳಿದರು. ಪಟ್ಟಣದ ಶ್ರೀನಿವಾಸಗುಡಿ ವೃತ್ತದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಬಿಜೆಪಿ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ನಾನು ದಲಿತ ವಿರೋಧಿಯಲ್ಲ. ನನ್ನ ಮತ್ತು ಖರ್ಗೆ ಮಧ್ಯೆ ಸಂಘರ್ಷವಿದೆ.
ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ಖರ್ಗೆ ಅವರ ಆಪ್ತ ಸಚಿವ ಡಾ| ಶರಣಪ್ರಕಾಶ ಪಾಟೀಲ ಮಾಡಿರುವ ಹಗರಣ ಬಯಲಿಗೆಳೆಯುತ್ತೇನೆ. ಕಲಬುರಗಿ ಬುದ್ಧ ವಿಹಾರಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ಬಿಡುಗಡೆಯಾದ ಒಟ್ಟು ಅನುದಾನದಲ್ಲಿ 850 ಕೋಟಿ ರೂ. ಲೂಟಿಯಾಗಿದೆ. ಈಗಾಗಲೇ ನಾನು ಇದರ ತನಿಖೆಗೆ ಒತ್ತಾಯಿಸಿದ್ದೇನೆ. ತನಿಖೆ ಮಾಡುವವರೂ ಖರ್ಗೆ ಅವರೊಂದಿಗೆ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.
ಚಿತ್ತಾಪುರದ ಶಾಸಕನಾಗಿ ಮತ್ತು ಸಚಿವನಾಗಿ ಐದು ವರ್ಷ ಅಧಿಕಾರದಲ್ಲಿದ್ದರೂ ವಾಡಿ ಪಟ್ಟಣದಲ್ಲಿ ಒಂದು ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಬಸ್ ನಿಲ್ದಾಣ ನಿರ್ಮಿಸಲು ಪ್ರಿಯಾಂಕ್ಗೆ ಸಾಧ್ಯವಾಗಿಲ್ಲ ಎಂದರೆ ನಾಚಿಕೆಯಾಗಬೇಕು ಎಂದು ವಾಗ್ಧಾಳಿ ನಡೆಸಿದ ಮಾಲಿಕಯ್ಯ, ವಾಲ್ಮೀಕಿ ನಾಯಕ ಗೆದ್ದ ತಕ್ಷಣ ಈ ಬೇಡಿಕೆ ಈಡೇರಿಸಲಾಗುವುದು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಹವಾದಿಂದ ಕಾಂಗ್ರೆಸ್ ದೋಣಿ ಮುಳುಗುತ್ತಿದೆ. ಕರೆ ನೀರಂತಾಗಿರುವ ಕಾಂಗ್ರೆಸ್ಗೆ ಹರಿಯುವ ನದಿಯಾಗಲು ಯೋಚಿಸದಿರುವುದೇ ಅದರ ಅವನತಿಗೆ ಕಾರಣ. ಅಪ್ಪ ಮತ್ತು ಮಗನನ್ನು ಕೇವಲ ಸೋಲಿಸುವುದಲ್ಲ.
ಠೇವಣಿ ಜಪ್ತಿಯಾಗುವಂತೆ ಮಾಡುತ್ತೇವೆ. ಬಿಜೆಪಿ ಅಭ್ಯರ್ಥಿ ವಾಲ್ಮೀಕಿ ನಾಯಕ ಗೆದ್ದರೆ ವಾಡಿಯನ್ನು ಮಾದರಿ ನಗರವನ್ನಾಗಿ ಮಾಡಲಾಗುವುದು ಎಂದು ಹೇಳಿದರು. ಮಾಜಿ ಶಾಸಕ ವಾಲ್ಮೀಕಿ ನಾಯಕ, ವಿಶ್ವನಾಥ ಪಾಟೀಲ ಹೆಬ್ಟಾಳ, ಉತ್ತರ ಪ್ರದೇಶದ ಶಾಸಕ ಆನಂದ ಶುಕ್ಲಾ, ಶರಣಪ್ಪ ಹದನೂರ ಮಾತನಾಡಿದರು.
ಮುಖಂಡರಾದ ಶ್ರೀನಿವಾಸ ಸಗರ, ಲಿಂಗಾರೆಡ್ಡಿಗೌಡ ಬಾಸರೆಡ್ಡಿ, ಶಶಿಕಲಾ ಟೆಂಗಳಿ, ಬಸವರಾಜ ಪಂಚಾಳ, ನಿವೇದಿತಾ ದಹಿಹಂಡೆ, ಅರವಿಂದ ಚವ್ಹಾಣ, ಡಾ| ವೀರೇಶ ಎಣ್ಣಿ, ಸಿದ್ದಣ್ಣ ಕಲಶೆಟ್ಟಿ, ರಾಜು ಮುಕ್ಕಣ್ಣ, ಮಲ್ಲಣ್ಣಗೌಡ ಬಳವಡಗಿ, ಶರಣು ಜ್ಯೋತಿ, ವೀರಣ್ಣ ಯಾರಿ, ರವಿ ಕಾರಬಾರಿ ಪಾಲ್ಗೊಂಡಿದ್ದರು.
ವಾಡಿ ಪುರಸಭೆ ಪಕ್ಷೇತರ ಸದಸ್ಯ ಮಹ್ಮದ್ ಗೌಸ್, ಗುತ್ತೇದಾರ ಸಮಾಜದ ಅಧ್ಯಕ್ಷ ಸಂತೋಷ ಗುತ್ತೇದಾರ, ಮುಖಂಡರಾದ ಫಿರೋಜ್ ಖಾನ್, ಹಾಫಿಜ್ ಇಸ್ಮಾಯಿಲ್, ಝಹೂರ್ ಖಾನ್, ಶೇಖ್ ಹುಸೇನ್, ಉಮೇರ್ ಜುನೈದಿ ಸೇರಿದಂತೆ ನೂರಾರು ಜನ ಮುಸ್ಲಿಂ ಯುವಕರು ಬಿಜೆಪಿಗೆ ಸೇರ್ಪಡೆಯಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಶೋಕಿಗಾಗಿ ನಕಲಿ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್
Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೆವು?: ಖಂಡ್ರೆ
Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ
MUST WATCH
ಹೊಸ ಸೇರ್ಪಡೆ
Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’