ಜ್ಞಾನ ದಾನಕ್ಕೆ ಶೇಷ್ಠ ಅಧಿ ಕಮಾಸ: ಮಂತ್ರಾಲಯ ಶ್ರೀ


Team Udayavani, Jun 4, 2018, 9:52 AM IST

gul-4.jpg

ಬಳಗಾನೂರು: ಪ್ರತಿ ಮೂರು ವರ್ಷಕ್ಕೊಮ್ಮೆ ಬರುವ ಅಧಿಕ ಮಾಸವನ್ನು ಪರಮಾತ್ಮ ತನ್ನ ಪೂಜೆಗೆ ಮೀಸಲು ಇಟ್ಟುಕೊಂಡಿರುವ ಹಿನ್ನೆಲೆಯಲ್ಲಿ ಪುರುಷೋತ್ತಮನನ್ನು ಧ್ಯಾನ ಮಾಡಲು ಶೇಷ್ಠವಾದ ಮಾಸವಿದು ಎಂದು ಮಂತ್ರಾಲಯ ಮಠದ ಸುವಿಧ್ಯೇಂದ್ರತಿರ್ಥ ಶ್ರೀಪಾದಂಗಳು ನುಡಿದರು.

ಅಧಿ ಕ ಜೇಷ್ಠ ಮಾಸ ನಿಮಿತ್ತ ಪಟ್ಟಣದ ಮಾರುತಿ ದೇವಸ್ಥಾನದಲ್ಲಿ ವಿಪ್ರ ಸಮುದಾಯ ಹಾಗೂ ಭಕ್ತರು ಹಮ್ಮಿಕೊಂಡಿದ್ದ ಮುಖ್ಯ ಪ್ರಾಣ ದೇವರಿಗೆ ವಿಶೇಷ ಪೂಜೆ ಹಾಗೂ ಪವಮಾನ ಹೋಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಸಕಲರಿಗೂ ಬಂಧು-ಬಳಗವಾಗಿರುವ ಮುಖ್ಯ ಪ್ರಾಣದೇವರು ಭಗವಂತನ ಪ್ರಧಾನ ಅರ್ಚಕರು. ಇವರ ಸಾನ್ನಿಧ್ಯದಲ್ಲಿ ಪುರುಷೋತ್ತಮ ಮಾಸದಲ್ಲಿ ಭಗವಂತನಿಗೆ ಪೂಜೆ, ಹೋಮ-ಹವನ ನೆರವೇರಿಸುವುದರಿಂದ ಇಷ್ಟಾರ್ಥಗಳು ಪ್ರಾಪ್ತಿಯಾಗುತ್ತವೆ. ಈ ಮಾಸದಲ್ಲಿ ಪ್ರತಿಯೊಬ್ಬರು ಜ್ಞಾನ ದಾನದಲ್ಲಿ ತೊಡಗಬೇಕು. 33 ಕೋಟಿ ದೇವತೆಗಳನ್ನು ಪೂಜೆ ಮಾಡಲು ಶೇಷ್ಠವಾದ ಮಾಸ ಇದಾಗಿದೆ. ಪ್ರಾಣ ದೇವರಲ್ಲಿ ಪರಮಾತ್ಮ ಪುರುಷೋತ್ತಮರು ನೆಲೆಸಿದ್ದಾರೆ. 33 ಸಂಖ್ಯೆ ಪರಮಾತ್ಮನಿಗೆ ಪ್ರಿಯವಾಗಿರುವ ಹಿನ್ನೆಲೆಯಲ್ಲಿ 33 ಪವಮಾನ ಹೋಮ, ಪೂಜಾ ವಿಧಾನಗಳನ್ನು ನೆರವೇರಿಸುವುದರ ಮೂಲಕ ಭಗವಂತನ ಕೃಪೆ ದೊರೆಯಲಿದೆ. ಇಂತಹ ಅಭೂತಪೂರ್ವ ಮಹಾತ್ಕಾರ್ಯ ನೆರವೇರಿಸಿರುವ ಸದ್ಭಕ್ತರಿಗೆ ಸನ್ಮಂಗಲವಾಗಲಿ ಎಂದರು. 

ಮಂತ್ರಾಲಯ ಮಠದ ಸುವಿಧ್ಯೇಂದ್ರತಿರ್ಥ ಶ್ರೀಪಾದಂಗಳು ಪವಮಾನ ಹೋಮ, ಪೂರ್ಣಾಹುತಿ ಕಾರ್ಯ ನೆರವೇರಿಸಿದರು. ಶ್ರೀ ಮಾರುತಿಗೆ ಮಧು ಅಭಿಷೇಕ, ವಿವಿಧ ಪೂಜಾ ಕಾರ್ಯಕ್ರಮಗಳನ್ನು ಸುರೇಂದ್ರ ಆಚಾರ್ಯ ಕೋರ್ತಕುಂದ ನೇತೃತ್ವದಲ್ಲಿ ನೆರವೇರಿಸಲಾಯಿತು. 46 ಜೋಡಿ ದಂಪತಿ ಪಾಲ್ಗೊಂಡಿದ್ದರು.

ಮಸ್ಕಿ ಕ್ಷೇತ್ರದ ಶಾಸಕ ಪ್ರತಾಪಗೌಡ ಪಾಟೀಲ ಸೇರಿದಂತೆ ಹೋಮ ಕಾರ್ಯದಲ್ಲಿ ಭಾಗವಹಿಸಿದ್ದ ದಂಪತಿಗೆ ಮಂತ್ರಾಲಯ ಶ್ರೀಗಳು ಆಶೀರ್ವಚನ ನೀಡಿದರು. ಸಂದರ್ಭದಲ್ಲಿ ಹನುಮೇಶ ಜೋಷಿ, ಗುರುರಾಜ ಆಚಾರ್ಯ ಮೂರ್ತಿ ಆಚಾರ್ಯ, ಹನುಮೇಶ ಕುಲಕರ್ಣಿ, ಗಿರೀಶ ಆಚಾರ್ಯ, ಪದ್ಮನಾಭಾಚಾರ್ಯ, ಸಮೀರ ಆಚಾರ್ಯ, ಮಧುಸೂಧನ ಆಚಾರ್ಯ, ರಾಮಾಚಾರ್ಯ, ವಿಜಯಾಚಾರ್ಯ, ಬದ್ರಿ ಆಚಾರ್ಯ, ಸುರೇಶ ಆಚಾರ್ಯ, ರಂಗನಾಥ ಪೂಜಾರ, ಮುಖಂಡರಾದ ಶಂಕರರಾವ್‌ ಕುಲಕರ್ಣಿ, ಶೇಖರಪ್ಪ ಮೇಟಿ, ಪಂಪನಗೌಡ ಮಾಲಿಪಾಟೀಲ, ಮಲ್ಲರಾವ ಪಟವಾರಿ, ಬಾಬಣ್ಣ ಆಚಾರ್ಯ ಹಾಗೂ ಸದ್ಭಕ್ತರು ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.